Thursday, December 29, 2011

ಮನವ ಕಲಕುವ ಬೇಸರ ಏಕೆ ನೀಡಿದೆ ಗೆಳೆಯ

ಮನವ ಕಲಕುವ ಬೇಸರ ಏಕೆ ನೀಡಿದೆ ಗೆಳೆಯ
ಜೊತೆಯಲ್ಲಿ ಬಿದ್ದು ಜೊತೆಯಲ್ಲಿ ಎದ್ದು
ಜಂಗುಳಿಯ ನಡುವೆ ನಮ್ಮದೇ ಸದ್ದು
ನಿನ್ನ ಅಂದಿನ ಮಾತು ಇನ್ನೂ ಗುನುಗುನಿಸುತಿದೆ
ಆ ಮಾತು ಸುಳ್ಳೆಂದು ಲೋಕ ಹಂಗಿಸುತಿದೆ
 
ಹೋಗನೆಂದೆ ದೂರ ನನ್ನ ಸ್ನೇಹವ ಬಿಟ್ಟು
ಹಣದ ದಾಹಕ್ಕೆ ಸಾಗರವ ದಾಟಿ ಹೋದೆ
ಹೇಳಿದ್ದೆ ಬಹಳಷ್ಟು ನಿನ್ನ ಬಳಿ ಗುಟ್ಟು 
ಮತ್ತೆ ಕೇಳಲು ಅಸೆ ನನಗೆ ನೀ ಇಲ್ಲವಾದೆ  
ಬದುಕು ನಿನ್ನದೆಂಬುದು ನನಗೂನು ಗೊತ್ತು
ಮರೆತುಬಿಟ್ಟೆಯ ನಿನ್ನಮ್ಮ ಕೊಟ್ಟ ಕೈ ತುತ್ತು
 
ನೀ ಅಂದು ಹೊರಟಾಗ ಬಹಳ ಖುಷಿಯಾಗಿದ್ದೆ
ಮತ್ತೆ ಬರೆನೆಂದಾಗ ಕುಗ್ಗಿ ಹೋಗಿದ್ದೆ 
ನನ್ನ ಚಿಂತೆ ನನಗೇನು ಇಲ್ಲವೋ ಗೆಳೆಯ 
ನಿನ್ನಂತ ಗೆಳೆಯರು ಇರುವರು ನೂರು 
ಸ್ವಲ್ಪ ಅಹಂಕಾರ ನನಗೆ ಆದರು ತರವಿಲ್ಲ 
ನನ್ನಂತಹ ಗೆಳೆಯರು ನಿನಗೆ ಸಿಗಲಾರು   
ನನ್ನ ನೋಡಲು ನೀನು ಮತ್ತೆ ಬರಬೇಡ
ಅಮ್ಮನ ಪ್ರೀತಿಯನು ಮರೆತು ಇರಬೇಡ
 
ಹಾಸಿಗೆಯ ಅಂಚಿನಲಿ ಜವರಾಯ ಕಾದಿಹನು 
ಮಗ ಬರುವನೆಂದು ನಿನ್ನಮ್ಮ ಹೇಳಿಹಳು
ಅವಳ ಬಿನ್ನಹವಕೆ ಬೆಲೆ ನೀಡಿ ಕುಳಿತಿಹನು  
ನಿನ್ನ ಬರುವಿಕೆ ಕಾದು ನಿನ್ನಮ್ಮ ಮಲಗಿಹಳು
ಉಸಿರ ಬುಗ್ಗೆಯ ಹಿಡಿದು ಎದುರು ನೋಡುತಿಹಳು
ಜವಾರಯನಿಗಿರುವ ಕರುಣೆ ನಿನ್ನಲಿಲ್ಲವ ಗೆಳೆಯ 
ಇದ್ದರೆ ಬಂದುಬಿಡು ಇಗಲೇ ಇನ್ನಿಲ್ಲ ಸಮಯ
 
ವಿದೇಶಗಳಲ್ಲಿದ್ದು ತಂದೆ ತಾಯಿಯರ ಸಾವಿಗೂ ಬರಲಾಗದಂತಹ ನತದೃಷ್ಟ ಮಕ್ಕಳಿಗೆ.....
 
ಪವನ್ :-

Tuesday, December 27, 2011

ಹಾಸ್ಯ ಕಲಾವಿದ

ನಗುವ ಹೊನಲ ಹರಿಸುವ ತವಕದಲಿ
ಕಾಲ್ ಕೆಳಗೆ ಮತ್ತು ತಲೆ ಮೇಲೆ ಮಾಡಿ
ನನ್ನನ್ನೇ ನಾ ಗೇಲಿಯಲಿ ತೊಡಗಿಸಿ
ಒಮ್ಮೊಮ್ಮೆ ಬಿದ್ದು
ಮರುಕ್ಷಣವೇ ಎದ್ದು
ನೋವನ್ನು ತಡೆದೆ ಬಿದ್ದಾಗ ಗುದ್ದು

ಮನೆಯವರ ನೆನಪು ನನಗಾಗಲಿಲ್ಲ
ಅಣಕಿಸಿದಾಗ ನನ್ನ ಮನ ನೋಯಲಿಲ್ಲ
ನನ್ನಂದ ನನಗಿಲ್ಲಿ ಹೆಮ್ಮೆಯೇನಿಲ್ಲ
ನೀವು ನಕ್ಕರೆ ಸಾಕು ಬೇರೇನೂ ಬೇಕಿಲ್ಲ

ತಿಳಿದವರು ನನ್ನ ತರಲೆ ಎಂದರು
ತನುಮನದಿ ನನ್ನಯ ಟೀಕೆಯಲಿ ತೊಡಗಿದರು
ತತ್ವ ಜ್ಞಾನವ ತಿಳಿಸುವ ಶಕ್ತಿ ನನಗಿಲ್ಲ
ವಿದ್ಯೆಯ ಮದವು ನೆತ್ತಿ ಹತ್ತಿಲ್ಲ

ಅರಿತಷ್ಟೇ ತಿಳಿಸಲು ಹೆದರಲ್ಲ ನಾನು
ಹೆಚ್ಚು ತಿಳಿದ ನೀನು ಮಾಡಿದ್ದಾದರೂ ಏನು
ನಿನ್ನನ್ನೇ ನೀ ಮಾಡ್ಕೊಂಡೆ ಹಣ ಮಾಡೋ ಯಂತ್ರ
ನನಗಿಲ್ಲಿ ಗೊತ್ತಿದೆ ನಗು ಹರಿಸೋ ತಂತ್ರ

ಹಾಸ್ಯ ಕಲಾವಿದರಿಗೆ ಸಣ್ಣ ನುಡಿ ನಮನ

ಪವನ್ :-

Wednesday, December 21, 2011

ಬದುಕ ಕೆತ್ತನೆ


ಕೆತ್ತು ಬಾ ಜೀವನ ಶಿಲ್ಪಿಯೆ
ಸುಂದರವಾದ ಶಿಲ್ಪವ ನನ್ನ ಬದುಕಿನಲಿ
ಬಿಗಿಯಾದ ಕಲ್ಲು ಹೃದಯವ
ಸಡಿಲ ಮಾಡು ಬಾ
ಕಲ್ಪನೆಯಲಿ ಕಾಯುತಿರುವೆ ನಾ
ಬದುಕ ಹೇಗೆ ಕೆತ್ತುವೆಯೆಂದು ಪ್ರತಿಯೊಂದು ಏಟಲು ನೀತಿ ಹೇಳು ನೀ
ತಪ್ಪಿಗೊಂದು ಏಟು ನೀಡುವ ಗುರುವಿನಂತೆ
ಎಗ್ಗುತಗ್ಗುಗಳು ಇರಲಿ ಶಿಲ್ಪದಲಿ
ನನ್ನಂದ ಕೆಡದಂತೆ
ಜನರಿಗೆಲ್ಲ ಬೆರಗಾಗಲಿ ನನ್ನ ನೋಡಿ
ಇವನಂತೆ ಇರಬೇಕೆಂದು
ಅಹಂ ಮುಡದಿರಲಿ ಮನದ ಕೋಣೆಯಲ್ಲಿ

ನಿನ್ನ ಪ್ರತಿಯೊಂದು ಏಟು
ನನಗೆ ಒಂದೊಂದು ನೀತಿ ಪಾಠ
ಅಲ್ಲಲ್ಲಿ ತಿದ್ದು ನೀ ತನ್ನತನ ಮರೆತಾಗ
ನಾಜೂಕಿರಲಿ ತಪ್ಪುಗಳ ತಿದ್ದುವಾಗ
ನಾ ತಿದ್ದಿಕೊಳ್ಳದಿದ್ದರೆ ಕೋಪಿಸಿಕೊಳ್ಳಬೇಡ
ನಿನ್ನ ಕೋಪದಿ ನಾ ಪುಡಿಯಾಗಿ ಬಿಟ್ಟೇನು
ಪುಡಿಯಾದ ಬದುಕ ಕಟ್ಟುವ ಶಕ್ತಿ ನನಗಿಲ್ಲ

ಪವನ್ :-

Monday, December 12, 2011

ಹೊಗಳಿಬಿಡಿ ನನ್ನ


ಹೊಗಳಿಬಿಡಿ ನನ್ನ
ನಾನೇನು ಉತ್ತಮನಲ್ಲ
ಹಾಗಂತ ಕೆಟ್ಟವನೂ ಅಲ್ಲ
ಆದರೂ ಹಾಳು ಮನದ ಮುಲೆಯಲ್ಲಿ
ಹೊಗಳವರೇನೋ ಎಂಬ ದುರಾಸೆ
ಹೊಗಳಿಬಿಡಿ ನನ್ನ

ಆಗಾಗ ತಲೆಕೆಟ್ಟ ಬರಹಗಳ ಓದಿ
ಪ್ರಾಸವಿಲ್ಲದ ಪದ್ಯದ ಅಂತರಾಳವನು ಅರಿತು
ಅಕ್ಷರದ ಭಾವಕ್ಕೆ ಬಹಳಷ್ಟು ಬೆಲೆ ನೀಡಿ
ಅರೆಬೆಂದ ಸಾಹಿತಿಯ ಕವನವನು ತಿಳಿದು
ಹೊಗಳಿಬಿಡಿ ನನ್ನ

ಉಪಮೆಯ ಉಪಯೋಗ ನನಗೆ ತಿಳಿದಿಲ್ಲ
ಅಲಂಕಾರಗಳಲ್ಲಿ ಪರಿಣಿತನು ನಾನಲ್ಲ
ತಿಳಿದವರು ನೀವು ತಿಳಿಯದವ ನಾನು
ಆಂಬೆಗಾಲನು ಇಡುತಿರುವೆ ಚಿವುಟದಿರಿ ನನ್ನ
ನೋವಲೂ ನಿಲ್ಲದು ನನ್ನ ಬರವಣಿಗೆ

ಅತ್ತಾಗ ದುಃಖದಲಿ ಬರೆವೆ
ನಕ್ಕಾಗ ನಲಿವಿನಲಿ ಬರೆವೆ
ಒಟ್ಟಿನಲಿ ಬದುಕಲ್ಲಿ ಬರವಣಿಗೆ ಮೆರೆವೆ
ಕೇಳಿಬಿಡಿ ನನ್ನ ಅಹವಾಲು
ಹಾಕುತಿಹೆ ನಿಮ್ಮಯ ಎದೆಗೆ ಟಪಾಲು
ಹೊಗಳಿಬಿಡಿ ನನ್ನ

ಪವನ್ :-

Monday, December 5, 2011

ಬಂದುಬಿಡು ನನ್ನ ಹೃದಯದ ಊರಿಗೆ


ನನ್ನ ಈ ಮನ ಒಪ್ಪಲಿಲ್ಲ
ಕಣ್ಣ ರೆಪ್ಪೆಯಿಂದ ನಿನ್ನ ಮರೆ ಮಾಡಲು
ಏನ ಮಾಡಲಿ ತೋಚುತಿಲ್ಲ
ನನ್ನ ಕಣ್ಣಲಿ ನಿನ್ನ ಆಕೃತಿಯ ಸೆರೆ ಹಿಡಿಯಲು

ಭಾವಚಿತ್ರ ನನಗೆ ಬೇಕಿಲ್ಲ
ಭಾವನೆಗಳಿಗೆ ನನ್ನ ಬಳಿ ಬರವಿಲ್ಲ
ಪ್ರೀತಿಯ ಈ ನನ್ನ ಈ ನಾದಕೆ ರಾಗದ ಅರಿವಿಲ್ಲ
ಯಾವ ರಾಗವಾದರು ನಾದ ಹೊಮ್ಮುತಿದೆಯಲ್ಲ
ರಾಗ ಹಿತವೆನಿಸದಿದ್ದರೇ ಬದಲಿಸುವೆ ಗೆಳತಿ
ನನ್ನ ಬಾಳಿನ ಹಾಡಿಗೆ ಬೇಕು ನಿನ್ನ ಒಲವಿನ ಸಮ್ಮತಿ

ಸಿಂಗಾರದ ಅರಮನೆಯಲಿ
ಪ್ರೀತಿ ಪದಗಳ ನದಿಯಲಿ
ಈಜುತಲಿ ಮೆರೆಯುತಲಿ ಮೀಯುತಿರಬೇಕ
ಬಂದುಬಿಡು ನನ್ನ ಹೃದಯದ ಊರಿಗೆ
ನಾ ಇರುವೆ ನಿನ್ನೊಡನೆ ಬದುಕಿನ ಪಯಣದಲಿ
ಮೆರೆಸುವೆ ನಿನ್ನನು ಮಹರಾಣಿಯ ರೀತಿ
ಕವನಗಳ ಬರೆಯುವೆನು ಕೋರಿ ನಿನ್ನಯ ಅಣತಿ

ಪವನ್:-    

Thursday, December 1, 2011

ಬೇಕಿಲ್ಲ ಅವನಿಗೆ ನಿನ್ನ ಈ ಕಾಯ


ನೀನು ನಿನ್ನದಲ್ಲ ನಾನು ನನ್ನದಲ್ಲ
ಸತ್ಯವನು ಯಾರು ತಿಳಿಯಲಿಲ್ಲ
ನಾನು ನನ್ನದೇ ಎಂಬ ಮಾಯೆಯಲಿ
ಕಿರುಚಿ ಹೇಳಿದರು ಗಾಳಿಯಲಿ
ಕೇಳಿಲ್ಲ ಜವರಾಯ
ಬೇಕಿಲ್ಲ ಅವನಿಗೆ ನಿನ್ನ ಈ ಕಾಯ

ನಿನಗಾಗಿ ಬಹಳಷ್ಟು ಮಿತ್ರರನು ಮರೆತೆ
ಮಾಡಿಲ್ಲ ಹೆತ್ತವರ ಬಗ್ಗೆ ಎಳ್ಳಷ್ಟು ಚಿಂತೆ
ಕಟ್ಟಿದೆ ರಾಶಿ ರಾಶಿ ಸುಳ್ಳಿನ ಕಂತೆ
ಅರಿವಿಲ್ಲದೇನೆ ಅತಿಯಾಗಿ ಅರಿತೆ

ಸೋಲೆಲ್ಲ ಗೆಲುವಾಗಿ ಬದಲಿಸಲು ಹೊರಟು
ಗೆಲುವಿಗೆ ಮೋಸದ ತೇಪೆಯನು ಕೊಟ್ಟು
ಕಪ್ಪು ಬಟ್ಟೆಯನು ಲೋಕದ ಕಣ್ಣಿಗೆ ಕಟ್ಟಿ
ತಿನ್ನುತಲಿ ಇತರರ ಪಾಲಿನ ರೊಟ್ಟಿ
ಹೇಳಿದನು ನಾ ಇಲ್ಲಿ ಲೋಕಕ್ಕೆ ಗಟ್ಟಿ
ಕೇಳಿಲ್ಲ ಜವರಾಯ
ಬೇಕಿಲ್ಲ ಅವನಿಗೆ ಈ ನಿನ್ನ ಕಾಯ

ಶುದ್ಧವಿಲ್ಲದ ನಿನ್ನ ಈ ಆತ್ಮದ ಪಾಡೇನು
ತಪ್ಪುಗಳ ತಿದ್ದದೆ ಸಾಯುವುದು ಸರಿಯೇನು
ಜವರಾಯ ನೀಡಲ್ಲ ಆತ್ಮ ಶುದ್ಧಿಯ ಉಪಾಯ
ಅವನಿಗೇಕೆ ಬೇಕು ನಿನ್ನ ಕಲ್ಮಶದ ಕಾಯ

ಪವನ್ :-

Tuesday, November 29, 2011

ಕೆಟ್ಟವರ ಕಿಸೆಗೊಂದು ಕನ್ನವ ಹಾಕೋಣ


ಕೆಟ್ಟವರ ಕಿಸೆಗೊಂದು ಕನ್ನವ ಹಾಕೋಣ
ಕೋಟಿಯ ಕೋಟೆಯನು ಬರಿದು ಮಾಡೋಣ
ಮೋಸವ ನೆತ್ತರಲಿ
ದ್ವೇಷದ ಮಾಂಸದಲಿ
ಸುಳ್ಳಿನ ಎಲುಬಿನಲಿ
ಮೆರೆಯುತಿಹ ಮುರ್ಖರ ಮನೆಯ ಕೆಡುವೋಣ

ಉಸಿರಿನ ಏರಿಳಿತ
ಏರುತಿದೆ ಎದೆ ಬಡಿತ
ಕಷ್ಟದ ಕವಲುಗಳು ನಷ್ಟಗಳ ಸಹಿತ
ಇನ್ನಷ್ಟು ಹೊತ್ತರೂ
ಇವನಿಲ್ಲಿ ಸತ್ತರೂ
ಏರದು ಇವನ ಆಸ್ತಿಗಳ ಕಡತ

ಬಡವನಿಗೆ ಬವಣೆ
ಹೋಗುತಿದೆ ಸಹನೆ
ಉಳ್ಳವರ ತೋರ್ಪಡಿಕೆ ಭಾವವ ನೋಡಿ
ಹರಿಸಿ ಬೆವರಕೋಡಿ
ನೀರಸವಾಗಿದೆ ನಾಡಿ
ಆದರು ನಿಲ್ಲದು ಉಳ್ಳವನ ರಾಡಿ

ಪವನ್ :-

ನನ್ನ ಮನಸು


ಕುರೂಪವಾಗಿದೆ ನನ್ನ ಮನಸು
ಕನ್ನಡಿಯ ಛಾಯೆಯನು ಹಿಡಿಯುವ ತವಕದಲಿ
ಗತವನ್ನು ಮೇಳೈಸೊ ಮೂರ್ಖ ಬುದ್ಧಿಯಲಿ
ನನ್ನನ್ನೇ ನಾ ಮೇಲು ಎಂಬ ಅಹಂ ಭಾವದಲಿ
ಕುರೂಪವಾಗಿದೆ ನನ್ನ ಮನಸು
...
ಅಂದು ನಾ ಹಾಗಿದ್ದೆ ರಾಜನ ಹಾಗೆ
ಬೆಳ್ಳಿ ತಟ್ಟೆಯಲಿ ಊಟ
ಸುತ್ತಲೂ ಬೆಂಗಾವಲು
ವಿಧ ವಿಧದ ಬಾಣಸಿಗರು
ರುಚಿ ರುಚಿಯ ಅಡುಗೆ
ಬಣ್ಣ ಬಣ್ಣದ ಉಡುಗೆ
ಇಂದಿಲ್ಲ ಅವೆಲ್ಲ ಆದರು ಯಾಕೋ
ಹೇಳಿಕೊಳ್ಳುವ ತವಕ ನಿಮ್ಮ ಬಳಿ ಯಾಕೋ

ಕೊಂಕಣಕೆ ಪಲ್ಲಕ್ಕಿ ಏರಿ ಹೋಗಿದ್ದೆ
ಸೈನಿಕರ ಕಾವಲಲಿ ಹಿಗ್ಗಿಹೊಗಿದ್ದೆ
ಸುಂದರಿಯರು ಸುತ್ತಲೂ
ಚಂದನವ ಮೆತ್ತಲೂ
ಸ್ವರ್ಗದಲ್ಲಿರುವಂತ ಸುಗ್ಗಿಯಲ್ಲಿದ್ದೆ
ಹಿಂದಿನಿಂದ್ಯಾರೋ ಕಿರುಚಿದಂತಾಯ್ತು
ಎದ್ದೇಳು ಸಾಕು ಘಂಟೆ ಎಂಟಾಯ್ತು

ಪಟಪಟನೆ ವೇಗದಿ ಜಳಕವ ಮುಗಿಸಿ
ಚಿತ್ರಾನ್ನ ಗಬಗಬನೆ ನಾ ತಿಂದು ಮುಗಿಸಿ
ಲೋಕಲ್ಲು ಬಸ್ಸನು ಓಡೋಗಿ ಹತ್ತಿ
ಆಫೀಸು ಮೆಜನು ಓಡೋಗಿ ಮುತ್ತಿ
ಕಡತಗಳ ಓದುವಿಕೆ ಶುರುವಾಯಿತಿನ್ನು
ಕನಸಲ್ಲೇ ಕಳೆದೋಯ್ತು ಕುರೂಪವಿನ್ನು...

ಪವನ್ :-

Friday, November 11, 2011

ಗೆಲುವೆಂಬುದು ನಿನ್ನತ್ತೆ ಮನೆಯಲ್ಲ


ಗೆಲುವೆಂಬುದು ನಿನ್ನತ್ತೆ ಮನೆಯಲ್ಲ
ಸುಮ್ಮನೆ ನಿನಗೆಂದು ರಾಜ ಮರ್ಯಾದೆ ಇಲ್ಲ
ಒಮ್ಮೊಮ್ಮೆ ನೀ ಹೊಸಲಲ್ಲೆ ಎಡವುವೆ
ಒಮ್ಮೆಮ್ಮೆ ಸನಿಹಕ್ಕೆ ಓಡಿ ಬಂದು ನಿಲ್ಲುವೆ
ಹಿಂದಿನಿಂದ ಯಾರಾದ್ರು ತಳ್ಳಿದರೂ ನೀ ಹೋಗಲ್ಲ
ನನಗೇನು ಗೆದ್ದುಬಿಡುವೆ ಎಂಬ ಅಹಂ ಬಾವ ಸರಿಯಲ್ಲ

ನಿನ್ನಂತೆ ಅತ್ತೆ ಮನೆಗೆ ಹತ್ತಾರು ಅಳಿಯಂದಿರು
ಒಬ್ಬಬ್ಬರು ಒಂದೊಂದು ವಿಷೇಶತೆ ಹೊಂದಿರುವರು
ಒಬ್ಬ ಇಲ್ಲಿ ಹಾರ್ಡ್ವೇರು ಮತ್ತೊಬ್ಬ ಸಾಪ್ಟ್ವೇರು
ಇನ್ನಷ್ಟು ಜನರ ಬಳಿ ಇದೆ ಹಳೆಯಳಿಯನ ಹೆಸರು
ಕಟ್ಟುವನೊಬ್ಬ ಲಂಚದ ಬಹುಮಹಡಿ ಕಟ್ಟಡ
ಇನ್ನೊಬ್ಬ ಬರುತಾನೆ ಕೂಗುತಲಿ ಎನ್ನಡ ಎನ್ನಡ

ಸ್ವಲ್ಪ ಸೊಂಬೇರಿಯಾದರು ನಿನಗಿಲ್ಲ ಉಳಿಗಾಲ
ನಿನ್ನತ್ತೆ ಮನೆ ಸೇರಲಷ್ಟು ಸುಲಭವೇನಲ್ಲ
ಮರೆಯದಿರು ಗೆಲುವಿಗೆ ನೂರೆಂಟು ಮೆಟ್ಟಿಲು
ತಯಾರಾಗು ಎಲ್ಲರೊಂದಿಗೆ ನೀ ಕೂಡ ನುಗ್ಗಲು
ಕೆಡದಿರು ಧೃತಿಯನ್ನು ಒಮ್ಮೆ ನೀ ಸೋತಾಗ
ಹೆಚ್ಚು ಸೋಲು ಕಂಡವರಿಗೆ ಗೆಲುವು ಸರಾಗ

ನಿನಗವರೊಬ್ಬರೆ ಅತ್ತೆಯಾಗಿರಬಹುದು
ಅವರಿಗೆ ನೀ ಒಬ್ಬನೆ ಅಳಿಯನಾಗಬೇಕೆಂದೇನಿಲ್ಲ

ಕೆಲಸದ ಹುಡುಕಾಟದಲ್ಲಿರುವ ಗೆಳೆಯರಿಗೆ, ಪವನ್ :-

ನೋಡು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ


ನೋಡು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ
ಆರು ಕೋಟಿ ಜನರ ವಿಷಯ ಹೇಳಲಾಗುವುದಿಲ್ಲ
ಪುಟ ತುಂಬಿಸುವಷ್ಟು ಸಮಯ ನನ್ನಲ್ಲಿಲ್ಲ
ಅಮ್ಮನಲ್ಲಿ ಸುಳ್ಳು ಹೇಳುವನು ನಾನಲ್ಲ
ಕೊಡುವೆ ನಿನಗೆ ಇಂದು ಬಹಳಷ್ಟು ಖುಷಿ ಒಂದಷ್ಟು ಫಿರ್ಯಾದು
ಕೇಳು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ

ಕನ್ನಡದ ಕ್ರಿಕೆಟ್ ಗೋಡೆಯು ನಿವೃತ್ತಿಯಾದ
ಪ್ರಪಂಚದ ಕ್ರಿಕೆಟಿಗರಿಗೆ ಮಾದರಿಯಾದ
ಕನ್ನಡಿಗ ವಿಶ್ವದಲೇ ಹೆಸರುವಾಸಿಯಾದ
ಮದಿರೆಯ ಲೋಕಕ್ಕೆ ಸರದಾರನಾದ
ವೇಗದ ಆಟಕ್ಕೆ ಭಾರತದಲಿ ಮುನ್ನುಡಿಯ ಬರೆದ

ಎಡ್ಡಿ ರೆಡ್ಡಿಗಳು ಕಂಬಿಯನು ಎಣಿಸುತ್ತ ಕುಂತರು
ತಾವು ಮಾಡಿದ ತಪ್ಪಿಗೆ ಶಿಕ್ಷೆ ಇದು ಅಂದರು
ಆಪರೇಷನ್ ಕಮಲಕ್ಕೆ ಬಿದ್ದಿಲ್ಲ ಬ್ರೇಕು
ಕರಡಿ ಕೊಟ್ಟಿತು ದಳಕ್ಕೆ ಶಾಕು
ರಾಜಕೀಯದ ತಪ್ಪುಗಳಿಗೆ ಲೆಕ್ಕವೇ ಇಲ್ಲ
ಹೇಳುತ್ತಾ ಹೋದರೆ ಪುಟಗಳೇ ಸಾಲಲ್ಲ

ಚಂಪರಿಗೆ ಕೊಟ್ಟವರೇ ಪಂಪ ಪ್ರಶಸ್ತಿ
ಸಾಹಿತಿಗೆ ಇದಕಿಂತ ಇನ್ನೇನು ಬೇಕು ಅಸ್ತಿ
ರಾಜ್ಯೋತ್ಸವ ಪ್ರಶಸ್ತಿ ೫೦ ಕ್ಕೆ ಸೀಮಿತ
ಅರ್ಹರಿಗೆ ಸಿಕ್ಕರೆ ಎಲ್ಲರಿಂದಲೂ ಸ್ವಾಗತ

ಬರೆಯುವುದು ಬಹಳಷ್ಟು ಬಾಕಿ ಇದೆ
ಅದಕ್ಕಾಗಿ ನಮ್ಮ ಕನ್ನಡ ಬ್ಲಾಗು ಇದೆ
ನನ್ನಂತ ಕನ್ನಡ ಸೇವಕರ ಬಳಗ ಇದೆ
ಬಂದು ನೋಡಮ್ಮ ಒಮ್ಮೆ ನಮ್ಮ ಕನ್ನಡ ಸೇವೆಯ
ಮೆಚ್ಚುವೆ ನೋಡಿ ನೀ ನಮ್ಮ ನಿನ್ನ ಮೇಲಿನ ಪ್ರೀತಿಯ
ನೋಡು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ
ಕೇಳು ಕನ್ನಡಮ್ಮ ನಿನ್ನ ಮಕ್ಕಳ ಕಥೆ ಮತ್ತು ವ್ಯಥೆಯ

ಕನ್ನಡ ರಾಜ್ಯೋತ್ಸವ ಶುಭಾಶಯಗಳೊಂದಿಗೆ ಪವನ್ :-

ನಾ ಕೆಟ್ಟವನಾ.......


ನಾ ಕೆಟ್ಟವನಾ.......
ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಲಿ
ಭಾಗವಾಗುವ ಆಸೆಯಲಿ
ಕಣ್ಣೀರ ಧಾರೆಯನು ಒರೆಸುವ ತವಕದಲಿ
ನನ್ನೆದಯ ಭಾವನೆಗೆ ಒಂದಿಷ್ಟು ಬೆಲೆಕೊಡದೆ
ಆಸೆಗಳ ಅಮುಕುತಲಿ ಸ್ವಲ್ಪವು ಧ್ರುತಿಗೆಡದೆ
ಮೋಸದ ಲೋಕದಲಿ ನನ್ನ ಮನವನ್ನಿರಿಸಿ
ಪರರ ಸುಖದಲ್ಲಿ ನನ್ನ ನಲಿವನ್ನ ಮರೆತಿರುವ
ನಾ ಕೆಟ್ಟವನಾ.......

ಪವನ್ :-

ಮಂಜಿನ ಮಂಟಪ


ಮಂಜಿನ ಮಂಟಪದಲಿ
ಪವನನ ನಾದದಲಿ
ವರುಣನ ಢೋಲಿನಲಿ
ಗುಡುಗು ಸಿಡಿಲಿನ ಪಕ್ಕವಾದ್ಯದಲಿ
ಇಬ್ಬನಿಯ ಬೆಳಕಿನಲಿ
ಹಕ್ಕಿಗಳ ಚಿಲಿಪಿಲಿ ಮಂತ್ರದಲಿ
ಪ್ರಾಣಿಗಳ ಗತ್ತಿನ ಸಮ್ಮುಖದಲಿ
ನಡೆದಿದ ಅರುಣ ಮತ್ತು ಭುವಿಯ ಮದುವೆ
ಭುವಿಯ ಸೇರು ಬಾ ನೀ ಅರುಣನೆ ಮಳೆಯ ವಸ್ತ್ರವ ಧರಿಸಿ

ಕಟ್ಟುತಿಹನು ಅರುಣ ತಾಳಿಯನು ಮಳೆ ಹನಿಯ ದಾರದಲಿ
ಆನಂದದಿ ಕುಣಿದಹರು ರೈತರು ಹೊಲಗಳಲಿ
ನದಿಗಳಿಗೆ ನರ ನರಗಳಲು ಮೈತುಂಬಿದ ಆನಂದ
ಮರ ಹೇಳಿತು ಗಿಡಗಳಿಗೆ ಹಬ್ಬವಿದು ಕಂದ
ಋತುಗಳಿಗೆ ಹೊಸಬರನು ಕರೆತರುವ ಆತುರ
ಸಾಗರಕೆ ಹೊಸ ಬಳಗ ಸ್ವಾಗತಿಸುವ ಕಾತುರ
ಭುವಿಯ ಸೇರು ಬಾ ನೀ ಅರುಣನೆ ಮಳೆಯ ವಸ್ತ್ರವ ಧರಿಸಿ

ಪವನ್ :-

ಗೆದ್ದವರ ಮುಂದೆ ಸೋತವರು ಯಾರು


ಗೆದ್ದವರ ಮುಂದೆ ಸೋತವರು ಯಾರು
ಸೋತವರ ಮುಂದೆ ಗೆದ್ದವರು ಯಾರು
ಉಂಡವರ ಮುಂದೆ ಹಸಿದವರು ಎಷ್ಟೋ
ಹಸಿದವರ ಮುಂದೆ ಉಂಡವರು ಎಷ್ಟೋ

ಗೆದ್ದವನದು ಒಂದು ರೀತಿಯ ಬದುಕು
ಸೋತವನದು ಒಂದು ರೀತಿಯ ಬದುಕು
ಗೆದ್ದವನಿಗೆ ಸಾಧಿಸಿದೆನೆಂಬ ಸಂತಸ
ಸೋತವನಿಗೆ ಗೆಲ್ಲಲಿಲ್ಲವೆಂಬ ಸಂಕಟ

ಬೀಗಿ ಬೀಗಿ ಬೆಳೆದವನು ಒಬ್ಬ
ಬಾಗಿ ಬಾಗಿ ತುಳಿಸಿಕೊಂಡವನು ಒಬ್ಬ
ಸುತ್ತಲಿನ ಜನರೆಲ್ಲ ಸೋತವನ ನಿಂದಿಸಿ
ಗೆದ್ದವನ ಹೊಗಳಿಕೆಯ ಅಟ್ಟಕ್ಕೆ ಏರಿಸಿ
ಸೋತವನು ಇನ್ನೇನು ಸತ್ತನು ಎಂದರು
ಸೋತವನ ಹೃದಯವ ಚೂರಾಗಿ ಮಾಡಿದರು

ಗೆದ್ದವನಿಗೆ ಉಳಿದಿದ್ದೆ ಒಂದೇ ಒಂದು ದಾರಿ
ಸೋತವನಿಗೆ ತೆರೆದಿತ್ತು ಸಾವಿರಾರು ದಾರಿ
ಹೃದಯದ ಪ್ರತಿಯೊಂದು ಚೂರನ್ನು ಹುಡುಕಿ
ಅದರೊಳಗೆ ಮತ್ತಷ್ಟು ವಿಶ್ವಾಸ ಕೆಲಕಿ
ನೂರಾರು ಪುಟಗಳಲಿ ವಿಷಯಗಳ ಕೆದಕಿ
ತಲೆಯೊಳಗೆ ಮತ್ತಷ್ಟು ಮಾಹಿತಿಯ ತುರುಕಿ
ಸೋತಿದ್ದು ಅಂದು ನಾನಲ್ಲವೆಂದು
ಗೆದ್ದು ಸಾರಿದನು ಮೇಲ್ದನಿಯಲಿ ಇಂದು

ಆದರೆ
ವಧಿಯ ಸೋತು ಗೆಲ್ಲುವ ಈ ಆಟದಲ್ಲಿ
ಹುಟ್ಟಿದನು ಮತ್ತೊಬ್ಬ ಸೋತವನು ಇಲ್ಲಿ
ಗೆದ್ದವರ ಮುಂದೆ ಸೋತವರು ಯಾರು
ಸೋತವರ ಮುಂದೆ ಗೆದ್ದವರು ಯಾರು......

ಸೋತವರಿಗೆ ಎಲ್ಲವೂ ಮುಗಿದಿಲ್ಲ ಎಂದು ಹೇಳುತ ಪವನ್ :-

Wednesday, October 26, 2011

ಎಣ್ಣೆ ಸ್ನಾನದ ಆರಂಭ
ಮೊದಲ ಪೂಜೆ ನಿನಗೆ ಹೇರಂಭ
ಹೊಸ ಹೊಸ ಉಡುಪಿನ ಸುಗ್ಗಿಯಲಿ
ವಿಧ ವಿಧ ಭೋಜನ ಅಡುಗೆಯಲಿ

ಓದು ಬರಹವ ಕಲಿತವ ನಿ
ಪರಿಸರ ಕಾಳಜಿ ಅರಿತವ ನಿ
ಶಬ್ದ ಹಬ್ಬದಲ್ಲಿ ಬೇಕಿಲ್ಲ
ದೀಪ ಹಚ್ಚು ನೀ ಮನೆಯೆಲ್ಲ

ಕಟ್ಟು ನೀ ಬಲಿಯ ಕೋಟೆಯ
ಮಾಡಿ ಸಗಣಿಯ ಉಂಡೆಯ
ಎಳ್ಳು ಹೂವಿನ ಅಲಂಕಾರ
ದುಷ್ಟ ಶಕ್ತಿಗಳ ಸಂಹಾರ

ಸುತ್ತಮುತ್ತಲಿನ ಮಕ್ಕಳ ಜೊತೆಗೆ
ಬೆಸೆಯಬೇಡ ನಿ ಹೊಗೆಯ ಹಗೆ
ಪರಿಸರ ರಕ್ಷಣೆ ಅತಿ ಮುಖ್ಯ
ಬೆಳೆಸಿಕೊ ಉತ್ತಮ ಸಾಂಗತ್ಯ

ದೀಪಾವಳಿಯ ಶುಭಾಷಯಗಳೊಂದಿಗೆ ಪವನ್ :-

Friday, October 21, 2011

ಗೆಳೆತನದಲ್ಲಿ ಲೋಪವೇ ಇಲ್ಲ

ಶಿಷ್ಯ ಶಿಷ್ಯ ಶಿಷ್ಯ ಬಾರೋ ಬಾರಿಗೋಗಣ 
ಶಿಷ್ಯ ಶಿಷ್ಯ ಎಣ್ಣೆ ಹೊಡೆದು ಟೈಟು ಅಗಣ

ಬದುಕಲ್ಲೇನು ಶಾಶ್ವತವಿಲ್ಲ
ಗೆಳೆತನದಲ್ಲಿ ಲೋಪವೇ ಇಲ್ಲ
ಕೈಯಲ್ಲಿದ್ದರೆ ದುಡ್ಡಿನ ಕಂತೆ
ಸುತ್ತ ಮುತ್ತ ಕಳ್ಳರ ಸಂತೆ

ಶಿಷ್ಯ ಕಾಸ್ ಐತಾ ನೋಡು
ಇಲ್ದಿದ್ರೆ ತಿರುಗಿ ನೋಡ್ದೆ ಓಡು
ಓನರ್ ಎತ್ಕಂಡವನೇ ರಾಡು
ಸಿಕ್ರೆ ನಮ್ದು ನಾಯಿ ಪಾಡು
ಒಳ್ಳೆದ್ರಲ್ಲು ಕೆಟ್ಟದ್ರಲ್ಲೂ ಸಮ ಪಾಲು ಮಾಡೋಣ

ಶಿಷ್ಯ ಶಿಷ್ಯ ಶಿಷ್ಯ ಬಾರೋ ಓಡಿಹೊಗಣ
ಶಿಷ್ಯ ಶಿಷ್ಯ ಶಿಷ್ಯ ಬಾರೋ escape ಅಗಣ

ಒಬ್ಬನ  ಕಷ್ಟ ಎಲ್ಲರ ಹೊರೆಗೆ
ಒಬ್ಬನ ನಲಿವು ಎಲ್ಲರ ಮೊಗಕೆ
ಗೆದ್ದರೆ ಒಬ್ಬನೇ ಬೀಗುವುದಿಲ್ಲ
ಸೋಲಲು ಎಂದು ಬಿಡುವುದು ಇಲ್ಲ 

ಮಚ್ಚ ನಿಂದ ಕಿರಿಕ್ ಹೇಳು
ಕೊಡ್ತೀನ್ ಪ್ರಾಣ ಅದ್ರು ಕೇಳು
ಅಪ್ಪ ಅಮ್ಮಂಗಿಂತ ಹೆಚ್ಚು
ಗೆಳೆತನ ಅನ್ನೋ ಹುಚ್ಚು

ಸುಖ ದುಖ ನೋವು ಸಲಿವಲಿ ಸಮ ಪಾಲು ಮಾಡೋಣ

ಶಿಷ್ಯ ಶಿಷ್ಯ ಶಿಷ್ಯ ಬಾರೋ ಒಂದುಗುಡೋಣ
ಶಿಷ್ಯ ಶಿಷ್ಯ ಜೊತೆ ಸೇರಿ ಪಾರ್ಟಿ ಮಾಡೋಣ











Thursday, October 20, 2011

ಯಥಾ ಗುರು ಹಾಗೆ ಶಿಷ್ಯ

ರಾಘವೇಂದ್ರ ಭವನದ ಸರ್ಕಲ್ ನ ಬಳಿಯ ಬೇಕರಿಯಲ್ಲಿ ನಾನು ಮತ್ತೆ ಗೆಳೆಯ ಯಾದವ್ ಕೆಟ್ಟದ್ದನ್ನ ಸುಡುತ್ತ ನಿಂತಿದ್ದೆವು. ಹಾಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಕನಸಿನ ಬಗ್ಗೆ ಹೊರಟಿತು. ನಾನು ಹೇಳಿದೆ, ಮಗ ಕನಸು ಕಾಣಬೇಕು ಮಗ ಯಾವಾಗಲು, ಆಗಲೇ ಎತ್ತರಕ್ಕೆ ಬೆಳೆಯಕ್ಕೆ ಸಾಧ್ಯವಾಗೋದು ಅಂತ. ಯಾದವ್ ಒಂದು ರೀತಿಯ ಮಾರ್ಮಿಕವಾದ ನಗು ತೋರಿ ಶಾಸ್ತ್ರೀ ನಿದ್ದೆ ಮಾಡಿದ್ರೆ ತಾನೆ ಮಗ ಕನಸು ಕಾಣಕ್ ಆಗೋದು?? ನಿದ್ದೇನೆ ಇಲ್ಲ ಅಂದ್ರೆ ಕನಸು ಎಲ್ಲಿಂದ ಕಾಣನ ಹೇಳು ಅಂದ.ನಿದ್ದೇನೆ ಮಾಡದೇ ಕನಸು ಕಂಡ್ರೆ ಹಗಲುಗನಸು ಕಾಣಬೇಡ ಅಂತ ಬೈತಾರೆ. ಕನಸು ಕಾಣಕ್ಕದ್ರು  ನಿದ್ದೆ ಮಾಡೋಣ ಅಂದ್ರೆ ಎಲ್ಲಿ ಸ್ವಾಮಿ ಬರುತ್ತೆ ನಿದ್ರೆ?? ಪಕ್ಕದ ಮನೆ ಪದುಮಕ್ಕ ನಮಮ್ಮ ನೀರಿಗೆ ಹೋದಾಗ ಏನ್ರಿ ಗಿರಿಜಮ್ಮ ನಿಮ್ಮ ಮಗ ಅದೇನೋ ಇಂಜಿನಿಯರಿಂಗ್ ಓದಿದ್ದನಲ್ಲ ಕೆಲಸ ಸಿಕ್ತ ಅವನಿಗೆ ಅಂತ ಕೇಳಿದಾಗ ನಮಮ್ಮ ಇಲ್ಲ ಕಣ್ರೀ ಯಾವ್ದೋ recession  ಅಂತ ತೊಂದರೆ ಬಂದಿದೆ ಅಂತೆ ಅದದ್ಮೇಲೆ ಸಿಗತ್ತೆ ಅಂತ ಹೇಳ್ದ ಅಂತ ಹೇಳೋ ಮಾತು ಕೇಳಿದಾಗ, ನಮಪ್ಪ ಅವರ ಹೊಲದಲ್ಲಿ ಕೆಲಸ ಮಾಡುವ ಕೂಲಿಯವರು ಏನ್ ಸಾಮಿ ನಮ್ ಚಿಕ್ ಐನೋರು ಎಲ್ಲನ ಕೆಲಸಕ್ಕೆ ಹೋಗ್ತವ್ರ, ಇಲ್ಲ ಮನೇಲೆ ಮುದ್ದೆ ಮುರಕೊಂಡು ಅವ್ರ ಇನ್ನ ಅಂತ ಕೇಳಿದಾಗ ನನ್ನಪ್ಪ ನನ್ನ ಕಡೆ ನೋಡಿ ಹುಡುಕ್ತ ಇದ್ದನಪ್ಪ ಇನ್ನು ಯಾವಾಗ್ ಸಿಗತ್ತೋ ಗೊತ್ತಿಲ್ಲ ಅಂತ ಹೇಳೋವಾಗ ನೋಡಿ ಇನ್ನು ನನಗೆ ನಿದ್ದೆ ಅದ್ರು ಎಲ್ಲಿ ಬರಲು ಸಾಧ್ಯ?? ನನಗೆ ಮಾತ್ರ ಅಲ್ಲ ಸ್ವಾಭಿಮಾನ ಇರುವ ಯಾವುದೊ ವ್ಯಕ್ತಿಗೂ ನಿದ್ದೆ ಬರಲ್ಲ ಇನ್ನು ಕನಸು ಕಾಣುವುದು ಬಹಳ ದೂರದ ಮಾತು ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟ.

ಸಮಾಜ ಎಷ್ಟು ಬದಲಾಗಿಬಿಟ್ಟಿದೆ ಅಲ್ವಾ?? ಇಲ್ಲ ನಾವೇ ಬದಲಾಗಿದ್ದಿವ?? ಮೊದಲಿಗೆ ೧೦ನೇ ಕ್ಲಾಸ್ ಓದಿದರೆ ಸಾಕು ಕೆಲಸ ಸಿಕ್ತಿತ್ತಂತೆ ನಮ್ ತಾತ ಓದಿದ್ದು ಬರಿ ೭ನೇ ಕ್ಲಾಸು ಲೋವೆರ್ ಸೆಕೆಂಡರಿ ಅಂತೆ, ಅವರು ನಮ್ಮೂರಲ್ಲಿ ಫೇಮಸ್ ಎಲೆಕ್ಟ್ರಿಕ್ contractor. ಇನ್ನು ನಮ್ಮ ತಂದೆ PUC ಓದಿದಕ್ಕೆ ಎಷ್ಟೋ ಸರ್ಕಾರೀ ಕೆಲಸಗಳು ಬಂದಿದ್ದವಂತೆ.ನಮ್ಮ ಅಣ್ಣಂದಿರು ಡಿಗ್ರಿ ಓದಿ ಒಳ್ಳೆಯ ಕಡೆ ಕೆಲಸಗಳಲ್ಲೂ ಇದ್ದಾರೆ. ಆದ್ರೆ ಈಗ ಇಂಜಿನಿಯರಿಂಗ್ ಮಡಿ MBA  ಮಾಡಿ. MA ಗಳು MCA ಗಳು ಎಲ್ಲ ಮಾಡಿಯೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿರುತ್ತಾರೆ. ಮೊನ್ನೆ ಮೊನ್ನೆ syntel ಎಂಬ ಕಂಪನಿ ಗೆ ವಾಕ್-ಇನ್ ಇಂಟರ್ವ್ಯೂ ಗೆ ಎಂದು ಹೋಗಿದ್ದೆ. ಇದ್ದ ಉದ್ಯೋಗಾವಕಾಶ ಸುಮಾರು ೬೦ ಅಂತೆ ಅಲ್ಲಿ ೬೦೦೦ ಕ್ಕೂ ಹೆಚ್ಚು ಜನ ಗೇಟ್ ನ ಹೊರಗೆ ಕಾಯುತಿದ್ದೆವು. ಅದರಲ್ಲಿ ೩೦೦೦ ಉತ್ತರ ಭಾರತೀಯರು ಒಂದು ೨೦೦೦ ತಮಿಳುನಾಡು ಮತ್ತು ಆಂಧ್ರ ಮತ್ತು ಕೇರಳಿಗರು ನಮ್ಮ ಜನ ಸುಮಾರು ೧೦೦೦. ಗೇಟ್ ತೆಗೆದಿದ್ದೆ ತಡ ಒಳ್ಳೆ ತಿರುಪತಿ ವೆಂಕಟರಮಣನ ದರ್ಶನಕ್ಕೆ ಭಕ್ತರು ನುಗ್ಗುವಂತೆ ನುಗ್ಗಲು ಆರಂಭಿಸಿದರು. ನಾನು ನನ್ನ ಗೆಳೆಯ ನುಗ್ಗಲು ಸಾಧ್ಯವಾಗದೆ ಬೇಡ syntel ಸಹವಾಸ ಎಂದು ವಾಪಾಸ್ ಬಂದೆವು.ಇಂತಹ ಅದೆಷ್ಟೋ ನಿದರ್ಶನಗಳು ನಮ್ಮ ಮುಂದೆ ಇದ್ದೇ ಇವೆ 

ನನ್ನ ಗೆಳೆಯ ಯಾದವ್ ಮತ್ತು ನನ್ನಲ್ಲಿ ಹೀಗೆ ಹಲವರು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.  ನೆನ್ನೆ ಒಂದು  ಚರ್ಚೆ ನಡೀತು. ನನ್ನ ಅಣ್ಣನ ಮಗನ್ನ ಸ್ಕೂಲ್ ಗೆ ಸೇರಿಸಿದ್ದಾರೆ. nursery  ಗೆ  ಅವ್ರು  ಕಟ್ಟಿರೋ  ಶುಲ್ಕ  ೭೦,೦೦೦,  ನಾನು ಶಾಲೆಗೆ ಸೇರಿದ ವರ್ಷದಿಂದ ೭ನೆ ತರಗತಿಯವರೆಗೂ ನನ್ನ ಶಾಲೆಯ ಶುಲ್ಕ ವರ್ಷಕ್ಕೆ ೨೭ರು ಮಾತ್ರ ಪ್ರೌಢ ಶಾಲೆಯಲ್ಲಿ ವರ್ಷಕ್ಕೆ ೮೦೦ರು ಮತ್ತು polytechnic ವರ್ಷಕ್ಕೆ ೭೦೦೦, ಮತ್ತು ಇಂಜಿನಿಯರಿಂಗ್ ವರ್ಷಕ್ಕೆ ೩೫೦೦೦. ನನ್ನ ವಿದ್ಯಾಭ್ಯಾಸವೆಲ್ಲ ನನ್ನ ಅಣ್ಣನ ಮಗ ತನ್ನ ಪ್ರೈಮರಿ ಶಿಕ್ಷಣ ಮುಗಿಸೋ ಅಷ್ಟರಲ್ಲಿ ಅಗೋ ಖರ್ಚಲ್ಲಿ ಮುಗಿದು ಹೋಗಿರುತ್ತದೆ ಅಲ್ಲವೇ?? ಅದಕ್ಕೆ ಯಾದವ್ ಹೇಳ್ದ ಮಗಾ ಮೊದಲೆಲ್ಲ ವಿದ್ಯೆ ಕಳಿಸಿ ಗುರುದಕ್ಷಿಣೆ ಕೇಳ್ತಾ ಇದ್ರೂ ಆದರೆ ಈಗ ಮೊದಲೇ ಗುರುದಕ್ಷಿಣೆ ತೊಗೋತಾರೆ ಆದ್ರೆ ಮಕ್ಕಳು ವಿದ್ಯೆ ಕಲಿತರೋ ಇಲ್ಲವೋ ಯಾರು ಕೇರ್ ಮಾಡಲ್ಲ ಅಂತ. ನನಗು ಅನ್ನಿಸ್ತು ಯಾದವ್ ಮಾತು ಶೇಕಡಾ ನುರಕ್ಕಿಂತ ಹೆಚ್ಚು ಸತ್ಯ.

ನನ್ನ ಮತ್ತೊಬ್ಬ ಗೆಳೆಯ ಒಂದು ಖಾಸಗಿ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿ ಕೆಲಸ ಮಾಡುತಿದ್ದಾನೆ. ಅವನು ಹೊಸತಾಗಿ ಕೆಲಸಕ್ಕೆ ಸೇರಿದ್ದ ಸಮಯ. ತರಗತಿಯಲ್ಲಿ ಬಹಳಷ್ಟು ಅಸಭ್ಯವಾಗಿ ವರ್ತಿಸುತಿದ್ದ ಒಂದಷ್ಟು ಹುಡುಗರಿಗೆ ಬೆತ್ತದ ರುಚಿ ತೋರಿಸಿದ್ದಾನೆ. ಅಷ್ಟೇ ಮಾರನೆಯ ದಿನವೇ ಅ ಹೊಡೆಸಿಕೊಂಡ ಮಕ್ಕಳ ತಂದೆ ತಾಯಂದಿರು ಬಂದು ಅವರ ಶಾಲೆಯ 
ಮುಖ್ಯೋಪಾಧ್ಯಾಯಿನಿಗೆ ದೂರು ನೀಡಿದ್ದಾರೆ. ನನ್ನಪ್ಪನಿಗೆ ಟೀಚರ್ ಹೊಡೆದರು ಎಂದು ಹೇಳಿದ್ದರೆ  ಮತ್ತೂ  ಮನೆಯಲ್ಲಿ ಒದೆ ಬೀಳುತಿತ್ತು. ನನ್ನ ಗೆಳೆಯನನ್ನ ತನ್ನ ಕೊನೆಗೆ ಕರೆಸಿಕೊಂಡ ಮೇಡಂ ನೋಡಪ್ಪ ಮಕ್ಕಳು  ಎಷ್ಟಾದರೂ  ತೀಟೆ ಮಾಡಿಕೊಳ್ಳಲಿ. ನೀನು ಅವರ ಮೇಲೆ ಕೈ ಮಾಡಬೇಡ, ಅಕಸ್ಮಾತ್ ಮಾಡಿದ್ದೆ ಆದರೆ ನಿನ್ನ ಕೆಲಸ  ಕಳೆದು ಕೊಳ್ಳಬೇಕಾದೀತು ಎಂಬ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ನನ್ನ ಗೆಳೆಯ  ಮೇಡಂ  ಒಳ್ಳೆಯ  ಮಾತಿನಲ್ಲಿ  ಕೇಳದಿದ್ದರೆ  ಮಕ್ಕಳನ್ನು ತಿದ್ದುವುದದರು ಹೇಗೆ ಎಂದನಂತೆ. ಅದಕ್ಕೆ ಮೇಡಂ ಅಕಸ್ಮಾತ್ ಅವರು ಒಳ್ಳೆಯ  ದಾರಿ  ಹಿಡಿಯಲಿಲ್ಲವೆಂದರೆ ಅದು ಅವರ  ಕರ್ಮ  ನಿನಗ್ಯಾಕೆ  ಚಿಂತೆ  ಎಂದರಂತೆ.  ಅಪ್ಪಿ ತಪ್ಪಿ  ನಿಂಬೆ ಹುಳಿಯನ್ನು  ಮರೆತು ಬಾಯಲ್ಲೇ ಇಟ್ಟುಕೊಂಡು ಮೇಡಂ ಕೈಲಿ ಸಿಕ್ಕಿ ಬಿದ್ದರೆ ಗೆಣುವಿನ ಮೇಲೆ  ಬೆತ್ತದಿಂದ  ಹೊಡೆಯುತಿದ್ದ ನಮ್ಮ  ಟೀಚರ್ಗಳೆನಾದ್ರೂ ಈಗಿನ ಕಾಲದ ಮಕ್ಕಳಿಗೆ ಸಿಕ್ಕಿದ್ದರೆ, ಒಂದು ದಿನವು ಮೇಡಂ ಕೆಲಸದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ     

ನಮ್ಮ ವಿದ್ಯಾಭ್ಯಾಸ ಪದ್ಧತಿ ಹೇಗಿರುತ್ತದೋ ಮಕ್ಕಳು ಹಾಗೆ ಇರುತ್ತಾರೆ. ಮಕ್ಕಳಿಗೆ ಹೆಚ್ಚು ಹೊಮೆವೊರ್ಕ್ ಕೊಡುವ ಹಾಗಿಲ್ಲ ಮಕ್ಕಳಿಗೆ ಹೊಡೆಯುವ ಹಾಗಿಲ್ಲ, ಅವರಿಗೆ ಮೊಬೈಲ್ ಫೋನ್ ಕೊಡಿಸಬೋಹುದು. ಇಂಟರ್ನೆಟ್ ಮುಂತಾದ ಸುಲಭವಾಗಿ ಅನಾನುಕುಲವಾಗಿಯೂ ಮಾರ್ಪಡಬಲ್ಲ ಅವಕಾಶಗಳನ್ನು ಒದಗಿಸುವುದು ಎಲ್ಲವು ಇದ್ದರೆ ಮಕ್ಕಳ ಭವಿಷ್ಯ ಉದ್ದಾರ. ನಿಮಗೆ ಗೊತ್ತಿರುತ್ತದೆ ಅನುಭವವು ಆಗಿರುತ್ತದೆ ಎಷ್ಟು ಜನ ಹಿಗ್ಹ್ ಸ್ಕೂಲ್ ಮಕ್ಕಳು ಇ ನಡುವೆ ಸಂಜೆ ಶಾಲೆಯಿಂದ ಬಂದೊಡನೆ ಆಟ ಆಡುವುದಕ್ಕೆ ಹೋಗದೆ facebook ನಲ್ಲಿ ಚಾಟಿಂಗ್ ಮಾಡುತ್ತ ಕುಡುತ್ತಾರೆ ಎಂದು.
ಎಷ್ಟೇ ಅಗಲಿ ಮಕ್ಕಳ ಭವಿಷ್ಯ ಜೋಪಾನ ಗೆಳೆಯರೇ.......



    

Wednesday, October 5, 2011

ಮರೆಯಲಾಗದ ಲಾಟರಿ ಟಿಕೆಟ್

ಕಾಲೇಜ್ ನ ಗೋಡೆಯ ಮೇಲೆ ಹೋಗೆ ಬಿಡುತ್ತಾ ನಾನು ಮತ್ತು ಬಾಸ್ ಬಂಡಾರಿ ಕುಳಿತಿದ್ದೆವು. ಸಿಗರೇಟನ್ನು ಘಾಡವಾಗಿ ಎಳೆದ ಭಂಡಾರಿ ಎಲ್ಲೋ ಶಿಷ್ಯ ಇನ್ನು ಸಿಂಹ ಬಂದೆ ಇಲ್ಲಾ ಅಂದ. ನಾನು ಒಮ್ಮೆ ಗಡಿಯಾರವನ್ನು ನೋಡಿ ಬಾಸ್ ಈಗ fly ಓವರ್ ಕಾಮಗಾರಿ ನಡೆಯುತ್ತಿದೆ ಅಲ್ವಾ ಟ್ರಾಫಿಕ್ ತುಂಬಾ ಇರತ್ತೆ ಅದಕ್ಕೆ ಲೇಟ್ ಆಗಿರಬೇಕು ಎಂದೆ. ಆಗ ಸಮಯ ಸುಮಾರು ೧೧ ಘಂಟೆ.  ನಾನು ದ್ವಿತೀಯ PUC ಡುಮ್ಕಿ ಹೊಡೆದು ನಮ್ಮ ಸರ್ಕಾರೀ ಕಾಲೇಜ್ ನ ಗೋಡೆಯ ಮೇಲೆ ಕೂತು ಗೆಳೆಯರ ಜೊತೆ ಹರಟೆ ಹೊಡೆಯುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದೆ. ಬಾಸ್ ನಮಗಿಂತ ಒಂದೆರಡು ವರುಷ ಹಿರಿಯರು. ಅವರು ಸಹ ಡಿಪ್ಲೋಮಾ ಇಯರ್ ಬ್ಯಾಕ್ ಆಗಿ ನಮ್ಮ ಜೊತೆಯಲ್ಲೇ ಅಡ್ಡ ಹೊಡೆಯುತಿದ್ದರು. ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟರೆ ಊಟದ  ಸಮಯಕ್ಕೆ ಮತ್ತೆ ಮನೆ ಸೇರುತಿದ್ದಿದ್ದು, ಮತ್ತೆ ಸಂಜೆ ೪ ಕ್ಕೆ ಕ್ರಿಕೆಟ್ ಆಡಲು ಹೊರಟರೆ ಮನೆ ಸೇರುತಿದ್ದಿದ್ದು ರಾತ್ರಿ ೧೦ ಘಂಟೆಗೆ. ಇಂತಹ ನಮ್ಮ ದಿನಚರಿಯಲ್ಲಿ ಸಿಂಹ ಪ್ರತಿ ದಿನ ಸಿಂಹ ಒಂದು ಒಳ್ಳೆಯ ಕೆಲಸ ಮಾಡುತಿದ್ದ. ದ್ವಿತೀಯ PUC ಫೈಲ್ ಆದರು, ಮನೆಗೆ ಒಂದಷ್ಟು ಸಹಾಯವಗುತಿದ್ದ. ಅವನು ಮಾಡುತಿದ್ದ ಕೆಲಸ ನಮ್ಮೂರಿಂದ ಬೆಂಗಳೂರಿಗೆ ಹೋಗಿ ಲಾಟರಿ ಟಿಕೆಟ್ ಕೊಂಡು ತರುವುದು. ಇಷ್ಟಕ್ಕೂ ಸಿಂಹ ಎಂದರೆ ಇವನ ಧೈರ್ಯಕ್ಕೆ ಪ್ರತಾಪಕ್ಕೆ ಕೊಟ್ಟಿರುವ ಬಿರುದೇನಲ್ಲ ಬಿಡಿ. ಅ ವಯಸಿಗೆ ಅವನ ಕಿವಿಯ ಮೇಲೆ ಒಂದೆರಡು ರೋಮ ಹುಟ್ಟಿತ್ತು, ಅದನ್ನೇ ಆಗಾಗ ನಿವುತ್ತ ಸಿಂಹ ಸಿಂಹ ಹಹಹಹ ಎಂದು ವಿಚಿತ್ರವಾಗಿ ಘರ್ಜಿಸುತಿದ್ದ. ಅದಕ್ಕೆ ನಾವು ಆಯಿತು ಬಿಡಪ್ಪ ನೀನು ಸಿಂಹನೆ ಅಂತ ಹಾಗೆ  ಕರೆಯುತಿದ್ದೆವು. ಅವನ ನಿಜವಾದ ಹೆಸರು ಮಹೇಶ್, ಮಹೇಶ್ ಕುಮಾರ್ ಯಾದವ್  

ಪ್ರತಿ ದಿನ ಬೆಳಿಗ್ಗೆ ೭ ಘಂಟೆಗೆ ಬಸ್ ಹತ್ತುತಿದ್ದ, ೮ ಘಂಟೆಗೆ ಮೆಜೆಸ್ಟಿಕ್ ಸೇರಿ ಮೆಜೆಸ್ಟಿಕ್ ಚಿತ್ರ ಮಂದಿರದ ಪಕ್ಕದಲ್ಲಿರುವ ಲಾಟರಿ complex ನಿಂದ ಒಂದು ದೊಡ್ಡ ಕಿಟ್ ಬ್ಯಾಗ್ ತುಂಬ ಲಾಟರಿ ಟಿಕೆಟ್ ತುಂಬಿಕೊಂಡು, ಮತ್ತೆ ೧೧ ಘಂಟೆ ಅಷ್ಟರಲ್ಲಿ ನಮ್ಮೂರು ಸೇರುತಿದ್ದ. ಬಂದೊಡನೆ ನಮ್ಮ ಮಾಮೂಲಿ ಅಡ್ಡ ಅದ ಸರ್ಕಾರೀ ಕಾಲೇಜ್ ನ ಕಾಂಪೌಂಡ್ ಬಳಿಗೆ ಸಿಗರೇಟು ತರುತಿದ್ದ ನಮಗೂ ಅದರ ಒಂದೆರಡು ದಮ್ಮಿನ ಭಾಗ ಸಿಗುತಿತ್ತು. ಅದ್ಯಾಕೋ ಅವತ್ತೇ ಅವನು ಬಂದಿಲ್ಲ, ಸಮಯ ೧೧-೩೦ ಆಯಿತು ಆದರು ಸಿಂಹ ಬಂದಿಲ್ಲ. ನಾನು ಭಂಡಾರಿಗೆ ಬಾಸ್. ಇವತ್ತು ಸಿಂಹ ಬರಲ್ಲ ಅನ್ಸುತ್ತೆ ಬನ್ನಿ ಬಾಸ್ ಮನೆಗೆ ಹೋಗಣ ಅಂದೆ. ಅದಕ್ಕೆ ಭಂಡಾರಿ ಸರಿ ನಡಿ ಶಿಷ್ಯ ಅಂತ ಸೈಕಲ್ ನ carrier ಹತ್ತಿದರು. ನನ್ನ ಹಳೆಯ rally ಸೈಕಲ್ ನ ಎಷ್ಟು ತುಳಿದರು ಮುಂದಕ್ಕೆ ಸಾಗುತ್ತಿರಲಿಲ್ಲ, ಬಾಸ್ ತುಂಬಾ ಧಡೂತಿ ಎಂದು ಭಾವಿಸಬೇಡಿ ಅವರು ಹೆಸರಿಗಷ್ಟೇ ಬಾಸ್ ಇದ್ದದ್ದು ಬರೀ  40kg ಸೈಕಲ್ ಗೆ ಸರಿಯಾಗಿ ಸರ್ವಿಸ್ ಮಾಡಿಸಿರಲಿಲ್ಲ ಅಷ್ಟೇ....     

ಸಂಜೆ ೪ ಆಯಿತು ಎಲ್ಲರು ಕ್ರಿಕೆಟ್ ಆಡಲು ಮೈದಾನ ಸೇರಿದ್ದವು. ಆದರೆ ಸಿಂಹ ಅಲಿಯಾಸ್ ಮಹೇಶ ಇನ್ನು ಬಂದಿಲ್ಲ. ನಮ್ಮ ಗೆಳೆಯರಲ್ಲೆಲ್ಲ ಗುಸುಗುಸುಗಳು. ಯಾಕಂದ್ರೆ ಸಿಂಹ ಲಾಟರಿ ಟಿಕೆಟ್ ತರಲು ಬಹಳಷ್ಟು ಹಣವನ್ನು ಹೊತ್ತು ಹೋಗುತಿದ್ದ ಬರುವಾಗ ಲಕ್ಷಾಂತರ ಲಾಟರಿ ಟಿಕೆಟ್ ತರುತಿದ್ದ. ಯಾರ ಬಳಿಯಲ್ಲೂ ಮೊಬೈಲ್ ಫೋನ್ ಗಳು ಇರಲಿಲ್ಲ. ಅದೇನು ದುಡ್ಡು ಹೊಡೆದುಕೊಂಡು ಪರರಿಯಾದನೋ ಅಥವಾ ಯಾರಾದ್ರು ನಮ್ಮ ಹುಡುಗನ್ನ ಕೊಳ್ಳೆ ಹೊಡೆದರೋ. ಎಲ್ಲರಿಗು ಒಂದೊಂದು ರೀತಿಯ ಚಿಂತೆ. ಚಿಂತೆಯಲ್ಲೇ toss ಹಾರಿಸಿ ಕ್ರಿಕೆಟ್ ಆಟ ಶುರು ಮಾಡಿದೆವು. ಆಡುತ್ತಿರುವಾಗಲು  ಸಹ ನಮಗೆಲ್ಲ ಅವನದೇ ಚಿಂತೆ. ಆಟ ಮುಗಿಸಿ ವಿಕೆಟ್ ಮತ್ತು ಬ್ಯಾಟ್ ಬಾಲ್ ಎತ್ತಿಡಲು ಹೊರಡಬೇಕು ಅಷ್ಟರಲ್ಲಿ ಮೈದಾನದ ಒಂದು ಮೂಲೆಯಿಂದ ಮಹೇಶ ಒಳ ಬರುವುದನ್ನು ಗಮನಿಸಿದೆವು. ಇನ್ನೇನು ಬಳಿಬರಬೇಕು ಅಷ್ಟರಲ್ಲೇ ಎಲ್ಲರಿಂದಲೂ ಪ್ರಶ್ನೆಗಳ ಸರಮಾಲೆ. ಏನೋ ಮಗ ಯಾಕೋ ಬಂದಿಲ್ಲ ಎಲ್ ಹೋಗಿದ್ದೆ ಏನ್ ಸಮಾಚಾರ ಹೀಗೆ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರದಲ್ಲಿ ಸುಮ್ಮನಾಗಿಸಿದ್ದ ಅದು ಏನು ಅಂದರೆ ಮಗ ಉಪ್ಪಾರ್ ಪೇಟೆ ಪೋಲಿಸ್ ಸ್ಟೇಷನ್ ಗೆ ಎತ್ತಕ್ಕೊಂಡೋಗಿದ್ರು ಮಗ ಅಂದ. ನಮಗೆಲ್ಲ ಒಂದು ಕ್ಷಣ ಭಯ ಆಯಿತು ಆದರು ಸ್ವಲ್ಪ ಹೊತ್ತು ಸಮಾಧಾನ ಮಾಡ್ಕೊಂಡು ಒಂದು ಪ್ಯಾಕ್ ಸಿಗರೇಟು ತಂದು ಎಲ್ಲರು ಸೇದಿ ನಂತರ ಅವನ ಕಥೆ ಮುಂದುವರೆಸಲು ಕೇಳಿದೆವು..

ಎಂದಿನಂತೆ ಅಂದು ಸಹ ತನ್ನ ದೊಡ್ಡ ಕಿಟ್ ಬ್ಯಾಗ್ ತುಂಬಾ ಲಾಟರಿ ಟಿಕೆಟ್ ತರುತಿದ್ದನಂತೆ. ದಾರಿಯಲ್ಲಿ ಒಬ್ಬ constable  ತಡೆದು ವಿಚಾರಣೆ ಮಾಡಿದ್ದಾನೆ. ಮಹೇಶನ ಬಳಿ ಎಲ್ಲ ದಾಖಲೆ ಇದ್ದರು ಸಹ ಕರೆದುಕೊಂಡು ಹೋಗಿ ಸ್ಟೇಷನ್ ಅಲ್ಲಿ ಕೂರಿಸಿದ್ದಾರೆ. ಮಹೇಶ ಹೆದರಿ ಸ್ಟೇಷನ್ ಅಲ್ಲಿ ಕೂತಿರುವಾಗ ಬರುವ ಪೋಲಿಸು ಗಳೆಲ್ಲ ಇವನ ಬಳಿ ಬರುವುದು ಲೋ ಏನೋ ನಿಂದು ಕೇಸ್ ಅನ್ನೋದು. ಓಹೋ ಲಾಟರಿ ಮಾರ್ತ್ಯ ಲಾಟರಿ, ಅಂತ ಒಂದು ಅವಾಜ್ ಹಾಕೋದು ಹೋಗೋದು ಮಾಡುತಿದ್ದರಂತೆ. crime ನವರು, ಮಾಮೂಲಿ ಪೋಲಿಸ್ ನವರು, ಬರುವ ಪೋಲಿಸ್ ರ ಶಿಷ್ಯಕೋಟಿಗಳು ಎಲ್ಲರು ಇವನ ಬಳಿ ಬರುವುದು ಬಯ್ಯುವುದು ಹೋಗುವುದು  ಮಾಡಿ ಮಹೇಶನಿಗೆ ಭಯದ ಪರಮಾವಧಿಯನ್ನು ತೋರಿಸಿದ್ದಾರೆ. ಲೋಕೆಪ್ ನಲ್ಲಿ ಒಬ್ಬ ಕಳ್ಳ ಕುತಿದ್ದನಂತೆ ಅವನನ್ನು ನೋಡಿಸಿ ಪೇದೆಯೊಬ್ಬ ಅವನು  ನಿನ್ನಂತಯೇ  ಲಾಟರಿ ಮರುತಿದ್ದ ನೋಡು ಅದಕ್ಕೆ ಬೇಡಿ ಹಾಕಿ ಕುಡಿಸಿರುವುದು ಅ ಕಳ್ಳನನ್ನು ಅಲ್ವೇನೋ ಅಂದರೆ ಭಯದಿಂದ ನಡುಗಿ ಹೌದು ಹೌದು ಅಂದಿದ್ದಾನೆ ಆಗಂತು ಮಹೇಶನಿಗೆ ಯಾಕಾದ್ರು ಇ ಕೆಲಸಕ್ಕೆ ಬಂದೆನೋ ಅನಿಸಿಬಿಟ್ಟಿದೆ. 

ಅಷ್ಟರಲ್ಲೇ inspector  ಬಂದಿದ್ದಾರೆ. ಬಂದವರು ಇವನನ್ನು ನೋಡಿ enri ಇವನದು ಕೇಸ್ ಅಂದಾಗ ಪೇದೆ ಸರ್ ಲಾಟರಿ ಮರ್ತ ಇದ್ದ ಸರ್ ಅಂದಿದ್ದಾನೆ  inspector  ಬಂದು ದಾಖಲೆ ಪರೀಕ್ಷೆ  ಮಾಡಿ  ಎಲ್ಲವು ಸರಿಯಗಿದ್ದಿದ್ದನ್ನು ಗಮನಿಸಿ  ಪೇದೆಗೆ ಒಂದಷ್ಟು ಬೈದು ಇವನನ್ನು ಮನೆಗೆ ಹೋಗಪ್ಪ ಎಂದು ಕಳುಹಿಸಿದ್ದಾರೆ . ಆಚೆ ಭಾರದ ಕಿಟ್ ಬ್ಯಾಗ್ ಹೊತ್ತು ತಂದ ಮಹೇಶನಿಗೆ ಪೇದೆ ಏನಪ್ಪಾ ಉಟಕ್ ಒಂದಿಪ್ಪತ್ತು ಕೊಟ್ಟು ಹೋಗು ಅಂದನಂತೆ. ಅದಕ್ಕೆ ಜೇಬಲ್ಲಿದ್ದ  monthly ಪಾಸು ತೋರಿಸಿ ಸರ್ ಇದನ್ನು  ಬಿಟ್ಟು  ೫ ಪೈಸೆ ಸಹ ಇಲ್ಲ ಸರ್ ಅಂತ ಹೊರಟು  ಬಂದಿದ್ದಾನೆ. ಒಟ್ಟಿನಲ್ಲಿ ಪೇದೆ ಮಾಡಿದ  ಅವಾಂತರ ನಮ್ಮ ಗೆಳೆಯರಲೆಲ್ಲ ಆತಂಕ ಸೃಷ್ಟಿ  ಮಾಡಿತ್ತು. ಇಷ್ಟೆಲ್ಲಾ ಕಥೆ ಹೇಳಿದ ಮೇಲೆ ಮಹೇಶ ತನ್ನ ಕಿವಿಯ  ಕೂದಲುಗಳನ್ನು ನಿವುತ್ತ ಹಹಹಹ ಸಿಂಹ ಹೆಂಗೆ ಪೋಲಿಸ್ ಸ್ಟೇಷನ್ ಎಲ್ಲ ನೋಡ್ಕೊಂಡು ಬಂದೆ ಅಂತ ಘರ್ಜಿಸಲು ಶುರು ಮಾಡಿದ್ದ. ಈಗ ಮಹೇಶ ಸಿನಿಮ ರಂಗದಲ್ಲಿ  ಸಹಾಯಕ ನಿರ್ದೇಶಕನಾಗಿ ದುಡಿಯುತಿದ್ದಾನೆ. ಇತ್ತೀಚಿಗೆ ಸಿಕ್ಕಾಗ ಈ ಘಟನೆಯ ಬಗ್ಗೆ ಮಾತನಾಡುತ್ತ, ನಮ್ಮ ಓದುಗರಿಗೂ ಈ ಘಟನೆಯ ಬಗ್ಗೆ ಹೇಳ ಬೇಕು ಎನಿಸಿತ್ತು ಹೇಳಿಬಿಟ್ಟೆ :)..... 

*******************************************************************************


      

Wednesday, September 28, 2011

ಒತ್ಲ ಜೀವನ

ಒತ್ಲ ಹೊಡೆಯೋ ಜೀವನದಲ್ಲಿ
ಕೊಟ್ಲೇ ಇಲ್ಲದ ಬದುಕಿನಲ್ಲಿ
ಕೆಲಸ ಕಾರ್ಯ ಮಾಡ್ದೆ ಇದ್ರೆ
ಹೊತ್ತಿನ್ ಹಿಟ್ಟು ಹುಟ್ಟದೆ ಇದ್ರೆ
ಅಗ್ತ್ಯ ನೀನು ಭೂಮಿ ಮೇಲೆ ದಂಡಪಿಂಡ
ಬೇಗ ಬಾಚ್ಕೋ ಜೀವನ ಸಿಕ್ದೊರ್ಗ್ ಸೀರುಂಡ

ಕಿತ್ತೋದ ಚಪ್ಪಲಿಗು ಬೆಲೆ ಇದೆ
ತುಕ್ಕಿಡಿದ ಕಬ್ಬಿಣನು ಸದ್ದು ಮಾಡ್ತದೆ
ಮಿಟಾಯಿ ಮಾರಿದರು ಪರವಾಗಿಲ್ಲ
ನಿ ಸುಮ್ನೆ ಕೂತಿದ್ರೆ ಓದಿತರೆ ಎಲ್ಲ

ಸುಲಭಕ್ಕೆ ನಿನಗೊಂದು ಕೆಲಸ ಬೇಕ
ದಿನ್ನಕ್ಕೆ ೨೦೦ ಕೂಲಿ ಸಾಕಾ
ಮದ್ಯಾಹ್ನ ಬಿರಿಯಾನಿ ಪ್ಯಾಕೆಟ್ ಇದೆ
ರಾತ್ರಿಗೆ ರಾಜ ವ್ಹಿಸ್ಕಿ ಇದೆ

ಇರುವರೆಗೂ ಯಾವ್ದಾದ್ರು ಕೆಲಸ ಮಾಡು
ಜನರತ್ರ ಒಳ್ಳೆಯ ಹೆಸರು ಮಾಡು
ಟೋಪಿಯ ಹಿಂದೆ ನೀ ಹೊಗ್ಲೆಬೇಡ
ಟೋಪಿಯ ಹಾಕ್ಸ್ಕೊಂದು ಬರ್ಲೆಬೇಡ

                                          ಪವನ್ :-

Monday, September 26, 2011

ಇರಬಾರದಿತ್ತೆ ನಾನು ಕಡಲಾಳದಲ್ಲಿ

ಇರಬಾರದಿತ್ತೆ ನಾನು ಕಡಲಾಳದಲ್ಲಿ
ಮುತ್ತಾಗಿದ್ದಿದ್ದರೆ ಕಪ್ಪೆಚಿಪ್ಪಿನ ಕಾವಲು
ಕಲ್ಲಾಗಿದ್ದಿದ್ದರೆ ಹಸಿರು ಪಾಚಿಯ ಒಡಲು  
ಮಿನಾಗಿದ್ದಿದ್ದರೆ ನನ್ನ ಕಣ್ಣಿರು ಯಾರಿಗೂ ಕಾಣುತ್ತಿರಲಿಲ್ಲ
ಮನದಾಳದ ನೋವನ್ನು ಮರೆಮಾಚ ಬಹುದಿತ್ತಲ್ಲ
ಸ್ನೇಹ ಪ್ರೀತಿಗಳ ಪಾಶ ಬೀಳುತ್ತಿರಲಿಲ್ಲ
ಸುರೊಂದು ಬೇಕೆಂದು ಹೆಣಗುತ್ತಿರಲಿಲ್ಲ
ಹುಟ್ಟಿದೆ ನೀನು ಹುಲು ಮಾನವನಾಗಿ
ಅಸೆ ಆಮಿಷಗಳ ಪ್ರತಿರೂಪವಾಗಿ
ಕೋಟಿ ಕೂಡಿಟ್ಟರು ತೃಪ್ತಿಯೇ ಇಲ್ಲ
ಗೆಳೆಯ ಬಂಧುಗಳ ಮೇಲೆ ನಂಬಿಕೆ ಇಲ್ಲ
ಬದಲಾಗಬೇಕಿದೆ ನೀ ಬಾಳುವ ರೀತಿ
ಅನುಸರಿಸು ನೀ ವಿಶ್ವ ಮಾನವನ ರೀತಿ
                                                      ಪವನ್ :-

Tuesday, September 6, 2011

ಮೊದಲ ಪ್ರೇಮ ಗೀತೆ......


ಸುತ್ತಲೂ ದೊಡ್ಡದಾಗಿ ನೆರೆದಿದ್ದ ವಿದ್ಯಾರ್ಥಿ ಸಮೂಹ, ಅಲ್ಲಲ್ಲಿ ಒಬ್ಬಬ್ಬರು ಒಂದೊಂದು ಆಟ ಅಡುತಿದ್ದರು. ಕೆಲವರು ಬಾಕ್ಸ್ ಟೆನ್ನಿಸ್, ಕೆಲವರು ಲೆಗ್ ಕ್ರಿಕೆಟ್, ಕೆಲವರು ಹೈ ಜಂಪ್ ಮತ್ತೆ ಕೆಲವರು ಕಬ್ಬಡ್ಡಿ, ಇನ್ನೊಂದು ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ನೆನ್ನೆ ಕೊಟ್ಟ ಹೋಂ ವರ್ಕ್ ಮನೆಯಲ್ಲಿ ಮಾಡಿಲ್ಲದಿದ್ದರಿಂದ ಸ್ನೇಹಿತರ ಬಳಿ ಪಡೆದು ಆತುರಾತುರವಾಗಿ ಗೀಚುತಿದ್ದರು.
ಅಲ್ಲೇ ಒಂದು ಮೂಲೆಯಲ್ಲಿ ಪ್ರವೀಣ ಗೆತನ್ನೇ ನೋಡುತ್ತಾ ನಿಂತಿದ್ದ. ತನ್ನ ಸ್ನೇಹಿತರೆಲ್ಲ ಒಂದಲ್ಲ ಒಂದು ಆಟ ಅಡುತಿದ್ದರು ಪ್ರವಿಣನಿಗೆ ಅ ಕಡೆ ಗಮನ ಬಂದಿಲ್ಲ, ಅವನ ಗಮನ ಏನಿದ್ದರು ಸಂಪೂರ್ಣ ಗೇಟಿನ ಕಡೆಯೇ ಕೆಂದ್ರಿಕ್ರುತವಗಿತ್ತು. ಇದ್ದಕ್ಕಿದ್ದಂತೆ PT ಮೇಷ್ಟ್ರು ಜೋರಾಗಿ ಪೀಪಿ ಊದಿದರು. ಆಡುತಿದ್ದ ಮಕ್ಕಳೆಲ್ಲರೂ ಓಡೋಡಿ ಬಂದು ಸಾಲುಗಳಲ್ಲಿ ನಿಂತರು. ಹೋಂ ವರ್ಕ್ ಮದುತಿದ್ದವರೆಲ್ಲ ಘಾಬರಿ ಘಾಬರಿಯಾಗಿ ಪುಸ್ತಕಗಳನ್ನು ಹೇಗೆ ಬರೆಯುತಿದ್ದರೋ ಹಾಗೇ ಬ್ಯಾಗ್ ಗೆ ತುಂಬಿಸಿಕೊಂಡು ಬಂದು ಸಾಲಲ್ಲಿ ನಿಂತರು. ಪ್ರವೀಣ ಗೇಟನ್ನು ನೋಡುತ್ತಲೇ ಮುಖ ಚಿಕ್ಕದು ಮಾಡಿಕೊಂಡು ಬೇಸರವಾಗಿ ಭಾರವಾದ ಹೆಜ್ಜೆ ಇಡುತ್ತಾ ಬಂದು ಸಾಲಿನ ಮುಂಭಾಗದಲ್ಲಿ ಪ್ರಾರ್ಥನೆ ಹೇಳಿಕೊಡುವ ಜಾಗದಲ್ಲಿ ನಿಂತನು.  ಅಷ್ಟರಲ್ಲೇ ಬಜಾಜ್ ಸ್ಕೂಟರ್ ಒಂದು ಬಂದು ಗೇಟಿನ ಹೊರಗಡೆ ನಿಂತಿತು. ಭಾರವಾದ ಬ್ಯಾಗ್ ಹೊತ್ತ ಹುಡುಗಿ ತನ್ನ ತಂದೆಗೆ ಟಾಟಾ ಮಾಡುತ್ತ ಗೇಟ್ ಒಳಗೆ ಬಂದು ಓಡೋಡಿ ಪ್ರಾರ್ಥನೆಯ ಜಾಗಕ್ಕೆ ಬರುತಿದ್ದಳು, ಪ್ರವಿಣನ ಬಾಡಿದ್ದ ಮುಖ ಚಿಗುರಿ ಮನ ಆತ್ಮ ವಿಶ್ವಾಸದಿಂದ ತುಳುಕಾಡಿತು. ಬ್ಯಾಗ್ ಪಕ್ಕ ಇಟ್ಟು ಅ ಹುಡುಗಿಯು ಬಂದು ಪ್ರವಿಣನ ಪಕ್ಕ ನಿಂತಳು. ಪ್ರವೀಣ ಯಾಕೆ ಕಾವ್ಯ ಇವತ್ತು ಲೇಟ್ ಅಂದ, ಅಮ್ಮ ಬಾಕ್ಸ್ ಕೊಡೋದು ಲೇಟ್ ಮಾಡಿದ್ರು ಅನ್ನೋ ಮಾಮೂಲಿ ಉತ್ತರವನ್ನೇ ಅವಳು ಕೊಟ್ಟಳು. ಸ್ವಾಮಿ ದೇವನೇ ಲೋಕ ಪಾಲನೆ ಎಂದು ಪ್ರಾರ್ಥನೆ ಮಡಿ ಎಲ್ಲರು ತಮ್ಮ ತಮ್ಮ ತರಗತಿಗಳಿಗೆ ಸೇರಿಕೊಂಡರು...

ಪ್ರವೀಣ ಮತ್ತು ಕಾವ್ಯ ಇಬ್ಬರು ಒಂದೇ ತರಗತಿಯವರು, ಹತ್ತನೇ ತರಗತಿ. ಕಾವ್ಯಳ ತಂದೆ ಕೇಂದ್ರ ಸರ್ಕಾರದ ಉದ್ಯೋಗಿ ಆಗಾಗ ವರ್ಗಾವಣೆ ಆಗುವುದರಿಂದ ಸಧ್ಯಕ್ಕೆ ಈ ಊರಿನ ವಾಸ್ತವ್ಯ. ಪ್ರವಿಣನದು ಇದೆ ಊರು ಅವರಪ್ಪ ಯಾವುದೊ ಖಾಸಗಿ ಕಂಪನಿ ಯ ಉದ್ಯೋಗಿ. ಪ್ರವೀಣ ಮತ್ತು ಕಾವ್ಯ ಇಬ್ಬರು ಕ್ಲಾಸ್ ಲೀಡರ್ ಗಳು ಸಹ. ತರಗತಿ ಕಡೆಯಿಂದ ಯಾವುದೇ ಕಾರ್ಯಕ್ರಮ ಆಯೋಜಿಸ ಬೇಕಿದ್ದರೆ, ಸರಸ್ವತಿ ಪೂಜೆ ಮುಂತಾದ ಕಾರ್ಯಕ್ರಮಗಳಲ್ಲಿ ಇವರಿಬ್ಬರದೇ ಹೆಚ್ಚಿನ ಓಡಾಟ. ಇನ್ನು ಓದಿನ ವಿಷಯಕ್ಕೆ ಬಂದರೆ ಪ್ರವೀಣ ಮತ್ತು ಕಾವ್ಯ ಇಬ್ಬರು ಯಾವಾಗಲು ಮುಂದು ಇವರಿಬ್ಬರ ನಡುವೆಯೇ ಹೆಚ್ಚಿನ ಪೈಪೋಟಿ ಯಾವಾಗಲು. ಒಂದೊಂದು ಮಾರ್ಕಿನಲಿ ಇಬ್ಬರಲ್ಲಿ ಒಬ್ಬರು ಮುಂದಿರುತಿದ್ದರು. ಇಬ್ಬರ ಮನೆಗಳು ಸುಮಾರು ದುರವಿದ್ದರು ಪ್ರವೀಣ ತನ್ನ ಹೀರೋ ಸೈಕಲ್ ನಲ್ಲಿ ಕಾವ್ಯಳ ಮನೆ ತನಕ ಹೋಗಿ ಆಟವಾಡುತಿದ್ದ ಅವಳ ಜೊತೆ.  

 ಶಾಲೆಯಲ್ಲಿ ಒಂದು ದಿನ ಚಿತ್ರ ಕಲೆಯ ಹೋಂ ವರ್ಕ್ ಕೊಟ್ಟಿದ್ದರು. ಅ ಚಿತ್ರ ಕಲೆಯ ಮೇಡಂ ಗೆ ಮೂಗಿನ ಮೇಲೆ ಕೋಪ, ಪ್ರವೀಣ ಅ ದಿನವೇ ಹೊಸ ಚಿತ್ರ ಕಲೆಯ ಪುಸ್ತಕವನ್ನು ಇಟ್ಟು ಹೋಂ ವರ್ಕ್ ಮಾಡಿ ತಂದಿದ್ದ. ಕಾವ್ಯ ಮರೆತು ಬಂದು ಬಿಟ್ಟಿದ್ದಳು. ಸರತಿಯಂತೆ ಎಲ್ಲರು ತಮ್ಮ ಹೋಂ ವರ್ಕ್ ಅನ್ನು ಎದ್ದು ಹೋಗಿ ಎಲ್ಲ ಮಕ್ಕಳು ತೋರಿಸುತಿದ್ದರು. ಪ್ರವೀಣ ಹಗೆ ಒಮ್ಮೆ ಕಾವ್ಯಳನ್ನು ನೋಡಿದ. ಕಾವ್ಯ ಹೆದರಿ ಏನು ಮಾಡುವುದೆಂದು ತೋಚದೆ ಪೆಚ್ಚು ಮೊರೆ ಹಾಕಿ ಕುಳಿತಿದ್ದಳು. ಪ್ರವಿಣನ ಪಕ್ಕದ ಬೆಂಚು ಆಗಿದ್ದರಿಂದ ಅವಳ ನೋವು ಪ್ರವಿಣನಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕಾವ್ಯಳನ್ನು ಕರೆದು ತನ್ನ ಪುಸ್ತಕವನ್ನು ಕೊಟ್ಟು ತೋರಿಸು ಅಂದ. ಕಾವ್ಯ ನೀನೇನು ಮಾಡುತ್ತಿಯ ಅಂದಾಗ ಇದು ಹೊಸ ಪುಸ್ತಕ ನಾನು ಹಳೆ ಪುಸ್ತಕದಲ್ಲೊಮ್ಮೆ ಬರೆದಿದ್ದೇನೆ ಎಂದು ಹೇಳಿದ. ಕಾವ್ಯಳ ಸರದಿ ಬಂದಾಗ ಪ್ರವೀಣ ಬರೆದಿದ್ದ ಹೋಂ ವರ್ಕ್ ತೋರಿಸಿದಳು. ನಂತರ ಸ್ವಲ್ಪ ಹೊತ್ತಿಗೆ ಪ್ರವಿಣನ ಸರದಿ ಬಂತು. ಆದರೆ ಪ್ರವೀಣ ಮೇಡಂ ಹತ್ತಿರ ಪುಸ್ತಕ ಮರೆತು ಬಂದಿರುವುದಾಗಿ ಹೇಳಿದ. ಚಿತ್ರ ಕಲೆಯ ಟೀಚರ್ ಗೆ ಕೋಪ ಮೂಗಿನ ಮೇಲಿದ್ದಿದ್ದು ನೆತ್ತಿಗೆ ಬಂದು, ಪ್ರವೀಣನಿಗೆ ಬೆತ್ತದ ರುಚಿ ತೋರಿಸಿದರು.ಶಾಲೆ ಮುಗಿದ ಮೇಲೆ ಪ್ರವೀಣನಿಗೆ ಕಾವ್ಯ sorry ಕೇಳಿದಳು. ಅದಕ್ಕೆ ಪ್ರವೀಣ ನಾ ಆಗಿದ್ದಕ್ಕೆ ಅ ಬೆತ್ತದ ಏಟು ತಡೆದೆ, ನಿನ್ನ ಕೈಲಿ ಸಾಧ್ಯವಾಗುತಿತ್ತ ಕಾವ್ಯ ಅಂದ. ಅದಕ್ಕೆ ಕಾವ್ಯ ಅಯ್ಯೋ ಹೌದಪ್ಪ thank you so much ಅಂತ ಸ್ವಲ್ಪೇ ಸ್ವಲ್ಪ ನಕ್ಕಳು ಅವಳ ಅ ನಗುವಿನಲ್ಲಿ ಪ್ರವಿಣನ ನೋವು ಆ ಕ್ಷಣಕ್ಕೆ  ಅವನಿಗೆ ಹಿತವಾಗೆ ಅನಿಸುತಿತ್ತು...

ಮಾರನೇ ದಿನ ಶಾಲೆಗೆ ಪ್ರವೀಣ ಬಂದಿರಲಿಲ್ಲ, ಸ್ನೇಹಿತರೆಲ್ಲ ಗುಸು ಗುಸು ಎನ್ನುತಿದ್ದರು, ನಂತರ ತಿಳಿದ ವಿಷಯ ಏನಂದರೆ ಪ್ರವೀಣನಿಗೆ ಜ್ವರ ಬಂದಿದೆ ಎಂದು. ಕೆಲವರು ಚಿತ್ರ ಕಲೆಯ ಮೇಡಂ ಹೊಡೆದ ಏಟು ತಿಂದೆ ಅವನಿಗೆ ಜ್ವರ ಬಂದಿರಬಹುದು ಎಂದು ಮಾತನಾಡಿಕೊಳ್ಳುತಿದ್ದರು. ಇವೆಲ್ಲ ಕೇಳಿದ ಕಾವ್ಯಳಿಗೆ ನನ್ನಿಂದಲೇ ಪಾಪ ಪ್ರವಿಣನಿಗೆ ಜ್ವರ ಬಂದಿದೆ ಎನಿಸಿಬಿಟ್ಟಿತ್ತು. ಸಂಜೆ ಶಾಲೆ ಮುಗಿದೊಡನೆ ಸೀದ ಪ್ರವಿಣನ ಮನೆಗೆ ಹೋದಳು. ಮನೆಯಲ್ಲಿ ಎಲ್ಲರನ್ನು ಮಾತನಾಡಿಸಿ, ಪ್ರವಿಣನನ್ನು  ನೋಡಿ ಏನಾಯ್ತೋ ಅಂದಳು. ಪ್ರವೀಣ viral infection ಅಂತೆ ಡಾಕ್ಟರ injection ಕೊಟ್ಟಿದ್ದಾರೆ ಆದಷ್ಟು ಬೇಗ ಸರಿ ಹೋಗುತ್ತೇನೆ. ಇನ್ನು 3 ದಿನ ಶಾಲೆಗೆ ಬರುವುದಿಲ್ಲ ಅಂದ. ಅದಕ್ಕೆ ಕಾವ್ಯ ನೀನು ಏನು ಯೋಚನೆ ಮಾಡಬೇಡ ನಿನ್ನ ಎಲ್ಲ nOtes ನಾನು update ಮಾಡಿಕೊಡ್ತೀನಿ ಅಂತ ಅವತ್ತು ಶಾಲೆಲಿ ಬರೆಸಿದ ಎಲ್ಲ notes ಗಳನ್ನೂ ಪ್ರವಿಣನ ಪುಸ್ತಕಕ್ಕೆ copy ಮಾಡಿದಳು. ಇದೇ ರೀತಿ  ಮುಂದಿನ ಮೂರೂ ದಿನಗಳು ನಡೆದವು. ಪ್ರವಿಣನ ಜ್ವರ ವಾಸಿಯಾಗಿತ್ತು. ಶಾಲೆಗ ಬಂದ ಪ್ರವಿಣನಿಗೆ ಇನ್ನು ಖುಷಿಯಾಗುವ ವಿಷಯಗಳು ಕೇಳಿಬಂತು. ಅವನ ಸ್ನೇಹಿತರೆಲ್ಲ ಲೋ ಕಾವ್ಯ ಪ್ರವಿಣನ ಮನೆಗೆ ಹೋಗಿ notes ಎಲ್ಲ ಬರೆದು ಕೊಟ್ಟಳಂತೆ. ಅವರಿಬ್ಬರ ಮಧ್ಯೆ ಏನೋ ಇದೆ ಕಣ್ರೋ ಅಂತ ಮಾತನಾಡಿಕೊಳ್ಳುತಿದ್ದರು. ಪ್ರವೀಣ ಸಹ ಇರಬಹುದು, ಅದಕ್ಕೆ ತಾನೆ ತನಗೆ ಅಷ್ಟು ಸಹಾಯ ಮಾಡಿದಳು ಎಂದು ಒಳಗೊಳಗೇ ಸಂತೋಷಗೊಂಡ...

ಪರೀಕ್ಷೆ ಹತ್ತಿರ ಬಂತು. SSLC ಪರೀಕ್ಷೆ public exam ಅದ್ದರಿಂದ ಎಲ್ಲರು ಕಷ್ಟ ಪಟ್ಟು ಓದತೊಡಗಿದರು. ಪ್ರವೀಣ ಮತ್ತು ಕಾವ್ಯ ಸಹ ಜೊತೆಯಲ್ಲಿ combined ಸ್ಟಡೀಸ್ ಮಾಡಿದರು. ಪರೀಕ್ಷೆ ಸಹ ಇಬ್ಬರು ಚೆನ್ನಾಗೆ ಬರೆದರು. ಪ್ರವೀಣ ಕಾವ್ಯಳಿಗೆ ತನಗಿಂತ ಹೆಚ್ಚು ಅಂಕ ಬರಲಿ ಅಂತ ತನಗೆ ಗೊತ್ತಿದ್ದರು ಒಂದೆರಡು ಅಂಕಗಳನ್ನು ಬಿಟ್ಟು ಬರುತಿದ್ದ. ನಂತರ ಫಲಿತಾಂಶ ಸಹ ಬಂದಿತು. ಆದರು ಪ್ರವಿಣನಿಗೆ 10 ಅಂಕ ಹೆಚ್ಚೇ ಬಂದಿತ್ತು. ಆದರೆ ಕಾವ್ಯ ತಂದೆಗೆ ಅದೇ ಸಮಯದಲ್ಲಿ ಬೇರೆಯ ಊರಿಗೆ transfer ಆಗಿತ್ತು. ಪ್ರವೀಣ ನನ್ನು ಇ ವಿಷಯ ಬಹಳಷ್ಟು ಕಾಡಿತು. ತಮ್ಮ ಊರಿನ ಕಾಲೇಜ್ ಗೆ ಸೇರಿಸಿ ಅವಳನ್ನ ಅಂತ ಅವರಪ್ಪನನ್ನು ಕೇಳಿದ. ಆದರೆ ಬಹ ದೂರಕ್ಕೆ transfer ಅದ್ದರಿಂದ ಕಾವ್ಯ ತಂದೆ ಒಪ್ಪಲಿಲ್ಲ. ಪ್ರವಿಣನ ಮೊದಲ ಪ್ರೇಮ ಗೀತೆ ಪಲ್ಲವಿ ಚರಣಗಳ ದಾಟಿ ಮತ್ತೊಮ್ಮೆ ಕೊನೆಯ ಪಲ್ಲವಿ ಬಳಿಗೆ ಬಂದಿತ್ತು. ಬಸ್ಸಿನ ಬಳಿ ಹೋಗಿ ಟಾಟಾ ಮಾಡುವಾಗ ಅವನ ಕಣ್ಣಿನಲ್ಲಿ. ಅವನಿಗೇ ಗೊತ್ತಿಲ್ಲದಂತೆ ಕಣ್ಣೀರು ಸುರಿಯುತಿತ್ತು.
  

ಇಷ್ಟೆಲ್ಲಾ ನಡೆಯುತಿದ್ದರೆ, ಹಿಂದಿನಿಂದ ಯಾರೋ ಬೆನ್ನಿಗೆ ತಿವಿದು ಲೇ ಮಗ ಅಕ್ಷತೆ ಕಾಳು ಹಾಕೋ ಅಂದಹಾಗಾಯಿತು. ಆಗಲು ಕಣ್ಣಲಿ ಸ್ವಲ್ಪ ನೀರು ತುಂಬಿತ್ತು. ಅಕ್ಷತೆ ಹಾಕಿದ ನಂತರ  ಊಟ ಮುಗಿಸಿ ಛತ್ರದಿಂದ ಹೊರಬಂದ ಪ್ರವೀಣ ಒಮ್ಮೆ ತಿರುಗಿ ಛತ್ರದ ಕಡೆ ನೋಡಿದ. ಅಲ್ಲಿ ದೊಡ್ಡದಾದ ಹೂಗಳಿಂದ ಸಿಂಗಾರವಾದ ಒಂದು ಆಕೃತಿ ಮಾಡಿದ್ದರು. ಅದರಲ್ಲಿ ಹೀಗೆ ಬರೆದಿತ್ತು
                                         

                                           "ನಿಮಗೆ ಸುಸ್ವಾಗತ ಕಾವ್ಯ weds ಪ್ರದೀಪ್ " 

                                                                                                    ಪ್ರೀತಿಯಿಂದ ಪವನ್ :-

*****************************************************************************
 ಕೃಪೆಚಿತ್ರ: theglass.com


Thursday, August 18, 2011

ಭ್ರಷ್ಟಾಚಾರ

ಪವನ್ ಪರುಪತ್ತೆದಾರ   
ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).
ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮುಲಾಜಿಲ್ಲದೆ ಪ್ರವೀಣ್ ಗೆ ಫೋನಾಯಿಸಿ ಪಹಣಿ ಬೇಕಾಗಿತ್ತು ಎಂದು ತಿಳಿಸಿದೆ. ಕೆಲವೇ ನಿಮಿಷದಲ್ಲಿ ಹಾಜರಾದ ಪ್ರವೀಣ್ ಸೀದ ನಿಂತಿದ್ದ ಜನರೆಲ್ಲರ ಮುಂದೆಯೇ, ಪಹಣಿ ಕೊಡುವ ಕೇಂದ್ರದ ಒಳಗೆ ಹೋದ. ಹತ್ತೇ ನಿಮಿಷದಲ್ಲಿ ಪಹಣಿ ತಂದು ಕೊಟ್ಟ. ನಾನು ಸರದಿಯಲ್ಲಿ ನಿಂತು ಪಹಣಿ ಪಡೆದುಕೊಂಡಿದ್ದರೆ ಸುಮಾರು ೩ ತಾಸಾದರೂ ಬೇಕಾಗಿತ್ತು ಯಾರಿಗೆ ಗೊತ್ತು ಕಂಪ್ಯೂಟರ್ ಕೆಟ್ಟು ಹೋಗಿದ್ದರೆ ಅಂದು ನನಗೆ ಪಹಣಿಯೇ ಸಿಗುತ್ತಿರಲಿಲ್ಲ. ಸರದಿಯಲ್ಲಿ ನಿಂತಿದ್ದರೆ ಪಹಣಿ 10 ರು ಆಗುತ್ತಿತ್ತು. ಅವನ್ನೆಲ್ಲ ತಪ್ಪಿಸಿಕೊಂಡಿದ್ದರಿಂದ ನಾನು ಕೊಟ್ಟ ಕಾಸು ಕೇವಲ 5ru ಹೆಚ್ಚು ಅಷ್ಟೇ. ನನ್ನ ಮೂರೂ ಘಂಟೆ ಸಮಯ, ಮತ್ತು energy ಉಳಿಯಲು ನಾನು ವ್ಯಯಿಸಿದ್ದು ಕೇವಲ 5 ರು ಮಾತ್ರ. ನನಗೆ ಅನುಕೂಲವಾದಾಗ 5 ರು ಹೆಚ್ಚು ಖರ್ಚು ಮಾಡಲು ಯಾವುದೇ ಅಭ್ಯಂತರ ಇಲ್ಲ. ನಾನು ಮಾತ್ರವಲ್ಲ ನಮ್ಮಲ್ಲಿ ಬಹಳಷ್ಟು ಮಂದಿ ಈ ಭ್ರಷ್ಟಾಚಾರವನ್ನು ತಮ್ಮ ಅನುಕೂಲ ಸಿಂಧುವಾಗಿ ಬಳಸಿಕೊಂಡಿರುತ್ತಾರೆ. ಪ್ರವೀಣ್ ನನಗೆ ರಾಜಾರೋಷವಾಗಿ ಹೇಳುತ್ತಾನೆ " ಮಗಾ ನಿಂಗೆ ನಮ್ಮೂರಿನ ತಾಲ್ಲೂಕು ಆಫೀಸ್ ನಲ್ಲಿ ಏನೇ ಕೆಲಸ ಇದ್ರೂ ಹೇಳು, ಸ್ನೇಹಿತ ಅಂತ ಸಾಧ್ಯವಾದಷ್ಟು ಕಡಿಮೆಯಲ್ಲಿ ಮಾಡಿಸಿ ಕೊಡ್ತೀನಿ. ಇಲ್ಲಿ ಗುಮಾಸ್ತನಿಂದ ತಹಶಿಲ್ದಾರ್ ವರೆಗೆ ಎಷ್ಟು ಎಷ್ಟು ಕೊಡಬೇಕು ಎಂದು ನನಗೆ ಗೊತ್ತಿದೆ ಅಂತ"
ಇದು ತಾಲ್ಲೂಕು ಆಫೀಸ್ ಗಷ್ಟೇ ಸೀಮಿತವಾದ ವಿಷಯವಲ್ಲ, ನಮ್ಮ ರಾಜ್ಯದ ಎಲ್ಲ ಊರುಗಳಲ್ಲೂ ವಾಹನ ತರಬೇತಿ ಕೇಂದ್ರಗಳಿವೆ. ಇಲ್ಲಿ ನೀವು 3500 ರು ಕೊಟ್ಟು ನೊಂದಾಯಿಸಿದರೆ ಸಾಕು ನೀವು ಒಂದೆರಡು ದಿನ ಅವರೊಂದಿಗೆ ಕಲಿತು ನಂತರ inspector ಮುಂದೆ ಗಾಡಿ ಹೇಗಾದರು ಓಡಿಸಿ ನಿಮಗೆ ಪರವಾನಗಿ ಸಿಗುತ್ತದೆ. ಯಾಕಂದರೆ ನೀವು ಕೊಡುವ 3500 ರು ನಲ್ಲಿ 500 ಓ 1000 ಓ ಅ inspector ಜೇಬಿಗೆ ಸೇರಿರುತ್ತದೆ. ಅದೇ ನೀವು ನಿವಾಗಿಯೇ ಸರಿಯಾಗಿ ಕಲಿತು ಅವನ ಮುಂದೆ ಓಡಿಸಿ ತೋರಿಸಿ, ಕೆಲಸಕ್ಕೆ ಬಾರದ ಒಂದೆರಡು ಪ್ರಶ್ನೆ ಕೇಳಿ ನಿಮ್ಮನ್ನು reject ಮಾಡುತ್ತಾನೆ. ನಿಮಗೆ ಒಂದೇ ಸಲಿಗೆ ಪರವಾನಗಿ ಕೊಡುವುದಿಲ್ಲ, ಅದು ತಪ್ಪು ಇದು ತಪ್ಪು ಎಂದು ಎಣಿಸುತ್ತಾನೆ. ನಿಮ್ಮಿಂದ ಹಣ ಕೀಳುವ ವರೆಗೂ ಬಿಡುವುದಿಲ್ಲ. ನಾಗರಿಕರು ಇವನ ಬಳಿ ಯಾವನು ಪದೇ ಪದೇ ಅಲೆಯುವುದು ಎಂದು ಅವನು ಕೇಳಿದಷ್ಟು ಹಣವನ್ನೋ, ಅಥವಾ ಯಾವುದಾದರು ವಾಹನ ತರಬೇತಿ ಕೇಂದ್ರದಿಂದಲೋ ಬಂದು ಪರವಾನಗಿ ಪಡೆಯುತ್ತಾರೆ. ಇಲ್ಲಿ ನಾಗರೀಕನಿಗೆ ಪರವಾನಗಿ ಸಿಕ್ಕರೆ ಸಾಕು ಎಂಬ ಕುತೂಹಲ, ಮತ್ತೆ ಮತ್ತೆ ಬರಬಾರದೆಂಬ ಹಂಬಲ. ಅದೇ ನಮ್ಮ ಅಧಿಕಾರಿಗೆ ಹೇಗಾದರೂ ದುಡ್ಡು ಮಾಡಬೇಕಂಬ ಬಯಕೆ. ಇಲ್ಲಿ ಸಹ ನಾಗರೀಕನಿಗೆ ಭ್ರಷ್ಟಾಚಾರ ಅನುಕೂಲ ಸಿಂಧುವಾಗಿದೆ.
ಇನ್ನು ನಮ್ಮ ರಾಜ್ಯದಲ್ಲಿ ನಡೆದ ಗಣಿ ಹಗರಣದ್ದು ಅದೇ ಕಥೆ ಅಲ್ಲವೇ. ನಿನಗೆ ನಾನು ಕೆಲಸ ಮಾಡಿಕೊಡುತ್ತೇನೆ ನನಗೆ ನೀನು ಎಷ್ಟು ಕೊಡುತ್ತಿಯ ಅನ್ನೋ ಮನೋಭಾವ ಎಲ್ಲ ರಾಜಕೀಯ ವ್ಯಕ್ತಿಗಳಲ್ಲಿ ಬಂದುಬಿಟ್ಟಿದೆ. ಚುನಾವಣೆಗೆ ಕೋಟಿ ಕೋಟಿ ಸುರಿದು ಬರುವುದೇ, ಇಲ್ಲಿ ನೂರಾರು ಕೋಟಿ ಲೂಟಿ ಹೊಡೆಯಲು ಎಂದು ಮೊದಲೇ ನಿರ್ಧರಿಸಿದಂತಿದೆ. ಒಂದು ಉದಾಹರಣೆ ನಮ್ಮ ವಾರ್ಡ್ ಎಲೆಕ್ಷನ್ ಗೆ ಒಂದು ಪಕ್ಷದ ಅಭ್ಯರ್ಥಿ ಏನೇನು ನೀಡಿದ್ದ ಗೊತ್ತೇ?? ಮೂಗು ಬಟ್ಟು(ಚಿನ್ನದ್ದು), ಅಕ್ಕಿ ಮೂಟೆ, ಮತ್ತು ಒಂದು ಓಟಿಗೆ 1000 ರು. ಅವನ ಚುನಾವಣ ವೆಚ್ಚ 50 ಲಕ್ಷವಂತೆ, ಭಗವಂತಾ....!! ಅಷ್ಟು ಹಣ ಖರ್ಚು ಮಡಿದ ಮೇಲೆ, ಅವನು ವಾರ್ಡ್ ನ ಅಭಿವೃದ್ಧಿಗಾಗಿ ಬರುವ ಹಣವನ್ನು ಪೂರ್ತಿಯಾಗಿ ಅದಕ್ಕೇ ಬಳಸುತ್ತಾನೆಂಬ ನಂಬಿಕೆ ಯಾವ ನಾಗರಿಕನಿಗೂ ಇರುವುದಿಲ್ಲ. ಆದರೆ ಅವನು ಕೊಡುವ ಸಮಯದಲ್ಲಿ ಎಲ್ಲರು ನಾ ಮುಂದು ತಾ ಮುಂದು ಎಂದು ತೆಗೆದುಕೊಳ್ಳುತ್ತಾರೆ. ನಮ್ಮ ಜನರಲ್ಲೂ ಅವನು ಗೆದ್ದಮೇಲೆ ಕೆಲಸ ಮಾಡುವುದಿಲ್ಲ ಎಂದು ಖಾತ್ರಿಯಾಗಿದೆ, ಅದಕ್ಕೆ ಚುನಾವಣೆ ಸಮಯದಲ್ಲೇ ಎಷ್ಟು ಬರುತ್ತೋ ಅಷ್ಟೂ ಎಲ್ಲ ಪಾರ್ಟಿಗಳಿಂದ ಕಿತ್ತುಬಿಡೋಣ ಎಂಬ ಅಸೆ ಬುರುಕುತನ, ಇಲ್ಲೂ ಸಹ ಭ್ರಷ್ಟಾಚಾರವನ್ನು ಅನುಕೂಲ ಸಿಂಧುವಾಗಿ ಬಳಸಿಕೊಳ್ಳುತಿದ್ದಾರೆ.
ಇನ್ನು ಕೇಂದ್ರ ಸರ್ಕಾರದ್ದು, 2G ಹಗರಣ, CWG ಹಗರಣ, ಮಹಾರಾಷ್ಟ್ರದ ಆದರ್ಶ್ ಸೊಸೈಟಿ ಹಗರಣ ಎಷ್ಟು ಬೇಕು ಸ್ವಾಮಿ ಎಲ್ಲ ಹಗರಣಗಳಿಗು ಮುಲ ಕಾರಣ ಚುನಾಯಿತ ಪ್ರತಿನಿಧಿಗಳು ತಾವು ಜನರಿಂದ ಆರಿಸಲ್ಪಟ್ಟ ನಾಯಕರು ಎಂಬುದನ್ನು ಮರೆತು. ಎಲ್ಲಾ ವ್ಯವಹಾರಗಳನ್ನು ಮಾಡುವ ಏಜೆಂಟ್ ಗಳು ಎಂದುಕೊಂಡಿದ್ದಾರೆ. ನಮ್ಮ corporate ಜನ ಅಂದರೆ ಬಿಸಿನೆಸ್ಮೆನ್ ಗಳು. ಇಂತಹ ದಲ್ಲಾಳಿಗಳನ್ನು. ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುತ್ತಾರೆ. ಅವರಿಗೇನು ಹಣ ಸಂಪಾದನೆ ಆದರೆ ಅಷ್ಟೇ ಸಾಕು. ಸಾಮಾನ್ಯ ಜನರ ಬಗ್ಗೆ ಚಿಂತಿಸುವುದಕ್ಕೆ ಅವರೇನು ಬೀದಿ ಕೊಳಾಯಿಗಳಲ್ಲಿ ಕುಡಿಯುವ ನೀರಿಗೆ ಎಲ್ಲರ ಜೊತೆ ಜಗಳವಾಡುವವರಲ್ಲ, ಮನೆಯಲ್ಲಿ ಎಲ್ಲಿ ನಲ್ಲಿ ತಿರುಗಿಸಿದರೆ ಅಲ್ಲಿ ನಿರು ಬರುತ್ತದೆ. ಮನೆಯ ಬಳಿಯ ಕರೆಂಟ್ ಕಂಬದಲ್ಲಿ ತೊಂದರೆ ಆದರೆ ಲಂಚ ಕೊಟ್ಟು ಕಂಬ ಹತ್ತಿಸೋಕೆ ಲೈನ್ ಮ್ಯಾನ್ ಕರೆತರಬೇಕಿಲ್ಲ, ಅವರಿರುವ ಜಾಗದಲ್ಲಿ ೨೪ ಘಂಟೆ ಪವರ್ ಇರುತ್ತದೆ. ಇನ್ನು ಇಂತಹ ಉದಾಹರಣೆಗಳು ಹಲವು....
ಈಗ್ಗೆ ಈ ಭ್ರಷ್ಟಾಚಾರದ ವಿರುದ್ಧ ಅಣ್ಣ ಹಜಾರೆ ಅವರು ನಿರಶನ ಕೈಗೊಂಡಿದ್ದಾರೆ, ಆದರೆ ಅವರ ನಿರಶನದಿಂದ ಮಾತ್ರ ನಮ್ಮ ದೇಶ ಬದಲಾಗುವುದಿಲ್ಲ. ಅದು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಒಂದು ದಾರಿ ಅಷ್ಟೇ. ಅದರಲ್ಲಿ ಸ್ವಲ್ಪವಾದರೂ ಯಶ ಕಂಡರೆ ಅವರ ನಿರಶನ ನಡೆಸಿದ್ದಕ್ಕೂ ಒಂದು ಅರ್ಥವಿರುತ್ತದೆ. ಆದರೆ ಈ ಅವಕಾಶವಾದಿ ರಾಜಕಾರಿಣಿಗಳು ಯಾವ ಯಾವ ರೀತಿ ಉಸರವಲ್ಲಿಯಂತೆ ಬಣ್ಣ ಬದಲಿಸುತಿದ್ದಾರೆ ಎಂಬುದನ್ನು ನೀವೇ ಗಮನಿಸಿದ್ದೀರಿ. ಭ್ರಷ್ಟಾಚಾರ 1947 ಆಗಸ್ಟ್ 15 ರಂದೇ ಹುಟ್ಟಿದೆ ಅಗಲಿಂದಲೇ ಇದರ ಬೇರನ್ನು ಬೆಳೆಯಲು ಬಿಡಬಾರದಿತ್ತು ಆದರೆ ಅದು ಈಗ ಬೃಹದಾಕಾರವಾಗಿ ಬೆಳೆದಿದೆ. ಸಾಧ್ಯವಾದಷ್ಟು ಹೋರಾಡೋಣ. ನಿಜವಾದ ಹೋರಾಟ ನಾವು ನಮ್ಮ ಅನುಕೂಲತೆಯ ಆಸೆಯ ಮನಸಿನ ಮೇಲೆ ನಡೆಸಬೇಕು. ಪಹಣಿಗೆ ಮೂರೂ ಘಂಟೆ ನಿಂತರು ಪರವಾಗಿಲ್ಲ ಲಂಚ ಕೊಡುವುದು ಬೇಡ, ನನ್ನೆಷ್ಟು ಸಲಿ reject ಮಾಡಿದರು ಒಮ್ಮೆ ಸೆಲೆಕ್ಟ್ ಮಾಡಿ ಪರವಾನಗಿ ಕೊಟ್ಟೇ ಕೊಡುತ್ತಾನೆ ಎಂಬ ಛಲ ನಮ್ಮಲ್ಲಿ ಬರಬೇಕು.ರಾಜಕಾರಿಣಿಗಳನ್ನು ಆರಿಸುವಾಗ ಬಹಳ ಜೋಪಾನವಾಗಿ ಆಯ್ಕೆ ಮಾಡಬೇಕು. ಇಷ್ಟೆಲ್ಲಾ ಮಾಡಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಮ್ಮ ಸೇವೆ ಇರುತ್ತದೆ.
ಸರಿ ಗೆಳೆಯರೇ, ಸಧ್ಯ ಅಣ್ಣ ಅವರ ಹೋರಾಟಕ್ಕೆ ಬೆಂಬಲ ಕೊಡೋಣ ನಮ್ಮ ಕೈಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟದಲ್ಲಿ ಪಾಲ್ಗೊಳ್ಳೋಣ ಏನಂತೀರಿ.........???????
ನೀವು ಕೂಡ ಒಂದಲ್ಲ ಒಂದು ಜಾಗದಲ್ಲಿ ಭ್ರಷ್ಟಾಚಾರವನ್ನು ನಿಮ್ಮ ಅನುಕೂಲತೆಗೊಸ್ಕರ ಬೆಂಬಲಿಸಿರುತ್ತೀರಿ. ಹೌದು ತಾನೆ ಎದೆ ಮುಟ್ಟಿಕೊಂಡು ಹೇಳಿ......??? :) :)
**********************************************************************

Tuesday, August 16, 2011

ತರಚಿದ ಗಾಯ

ಮೊಣಕೈ ಮಂಡಿಗಳಿಗೆ ತರಚಿದ ಗಾಯ
ಬೀಳಿಸಿದ ಗೆಳೆಯ ಕ್ಷಣದಲ್ಲೇ ಮಾಯಾ
ದೂರಲು ಓದುವೆ ನಾ ಅಮ್ಮನ ಬಳಿಗೆ
ಅಮ್ಮನೂ ಬಡಿಯುವಳು ನೋಯುತಲಿ ಒಳಗೆ

ಕಣ್ಣಲ್ಲಿ ಸಾವಿರ ಕನಸುಗಳ ಬೆಸೆದು
ಪದವಿಯ ಪರಿಧಿಗೆ ದರ್ಪದಲಿ ನಡೆದು
ಗೆಳುವೆಂಬ ಕುದುರೆಯ ವೇಗದಲಿ ಹೊಡೆದೆ
ಪದವಿಯ ನದಿಯನು ಈಜಿ ದಡ ಸೇರಿದೆ

ಹಗಲೆನದೆ ಇರುಳೆನದೆ ದಿನಗಳನು ಕಳೆದು
ನೆತ್ತರಿನ ವೇಗವನ್ನು ಆಗಾಗ ತಡೆದು
ಸುತ್ತಲಿನ ಪರಿಸರವ ಕೆಲವೊಮ್ಮೆ ಮರೆತೆ
ಕೆಟ್ಟವರ ಸಖ್ಯವು ವಿಷವೆಂದು ಅರಿತೆ

ಆಕಾಶಕೆ ತಲೆ ಎತ್ತಿ ಸುರ್ಯಣನೆ ದಿಟ್ಟಿಸಿ
ಮೋಡದ ಮರೆಗೋಗು ಎಂದೊಮ್ಮೆ ನಿಂದಿಸಿ
ನೇಸರದಿ ನಾದವನು ಮಿಡಿಸುವವನಲ್ಲ
ಅಣ್ಣ ನಿಡುವ ರೈತ ನನಾಗಲಿಲ್ಲ

ತಲೆಯನ್ನು ನೆಲದಿಂದ ಮೇಲಕ್ಕೆ ಎತ್ತದೆ
seniors ನ ಮಾತಿಗೆ ಎದುರನ್ನು ಆಡದೆ
ಶನಿವಾರ ಭಾನ್ವಾರ ರಜವನ್ನು ಮಾಡಿ
ಬೇರೆಲ್ಲ ದಿನದಂದು ಕೆಲಸದ್ದೆ ರಾಡಿ

ಸೂರ್ಯನ ದಿಟ್ಟಿಸಿ ಎಷ್ಟು ದಿನಗಳಾಯ್ತೋ
ಅಮ್ಮನಿಗೆ ಬೈಗುಳ ಎಲ್ಲಿ ಮರೆತೊಯ್ತೋ
ಪರಿಸರದಿ ಪದವಾಡೋ ದಿನಗಳು ಬರಲಿ
ಯುವಕರಿಗೆ ವ್ಯವಸಾಯ ಉತ್ಸಾಹ ತರಲಿ     

Thursday, August 11, 2011

ಕನಸುಗಳೇ ಕನಸುಗಳೇ

ಕನಸುಗಳೇ ಕನಸುಗಳೇ ಕೆದರುವಿರೇಕೆ ಮನವನ್ನು
ಕನವರಿಕೆ ಬರಿಸುವಿಕೆ ಕಾಡುವಿರೇಕೆ ನನ್ನನ್ನು
ಸಮಯದ ಪರಿವೇ ಇರದು
ಸಹನೆಗೆ ಮಿತಿಯೇ ಬರದು
ಮನಸಿನ ಸ್ವರದ ತಾಳ
ಮಿತಿ ಇರದ ಎದೆ ಬಡಿತದ ಮೇಳ
ಇದಕ್ಕೆಲ್ಲ ಕಾರಣ ಪ್ರಿತೀನೆ ಅಲ್ಲವೆ 
|| ಕನಸುಗಳೇ ಕನಸುಗಳೇ ||
 
ಕದ್ದು ನೋಡಲೇನು ನಿನ್ನ ತುಟಿಯಂಚಿನ ನಗುವ
ಲೋಕ ನನ್ನನು ಕಳ್ಳನೆಂದರು ಪರವಾಗಿಲ್ಲ
ಕೊಡುವೆಯೇನು ನೀನು ಪ್ರೀತಿ ಬೆರೆಸಿದ ಮಧುವ
ಪರದೇಸಿ ಹೃದಯಕೆ ಬೇರೆ ಏನ ಕೇಳಲು ತೋಚಲ್ಲ
ಗೊತ್ತಿಲ್ಲದ ಹೊಸ ಲೋಕಕೆ ಕರೆದುಕೋ ಗೆಳತಿ
ನನ್ನೀ ಪ್ರೇಮ ಲೋಕಕೆ ನಿನೋಬ್ಬಳೆ ಒಡತಿ
 
|| ಕನಸುಗಳೇ ಕನಸುಗಳೇ ||

Saturday, July 30, 2011

ಅಲಾಲ್ ಟಪಾಲ್

             ನಮ್ಮಪ್ಪ ನನ್ನ ಹಾಗೆ ಕರೆಯೋದ್ರಲ್ಲು ಒಂದು ಅರ್ಥ ಇತ್ತು ಕಾರಣ ಇತ್ತು. ಏಳುತ್ತಾ ಇದ್ದದ್ದು ೯ ಘಂಟೆ ಎದ್ದು ಹಲ್ಲು ತಿಕ್ಕೋ ಅಷ್ಟರಲ್ಲಿ ಅಮ್ಮ ಕಾಫೀ ಕೊಡುತಿದ್ದರು, ನಂತರ ಸ್ನಾನ ಮುಗಿಸಿ ತಿಂಡಿ. ಅಷ್ಟರಲ್ಲಿ ೧೧ ಘಂಟೆ ಆಗಿರೋದು. ಇನ್ನು ಆಗ ಕಂಪ್ಯೂಟರ್ ಮುಂದೆ facebook orkut ಅ ಸಂಘ ಈ ಕೂಟ ಇನ್ಯಾವುದೋ ಬಳಗ ಅಂತ ಚಾಟಿಂಗ್ ಮಾಡುತ್ತಾ ಕೂತರೆ ಮಧ್ಯಾಹ್ನ ೨ ಘಂಟೆ ಆಗುವುದೇ ಗೊತ್ತಾಗುವುದಿಲ್ಲ. ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ಅಪ್ಪ ಮನೆಗೆ ಬರುತ್ತಾರೆ. ಊಟ ಮಾಡಲು ಎಲ್ಲರು ಕೂತು ಊಟ ಮುಗಿಸಿ ನಂತರ ಮತ್ತೆ online ಹೋದರೆ ಮತ್ತೆ ಸಮಯದ ಅರಿವೇ ಇರುವುದಿಲ್ಲ. ಸಂಜೆ ೬ ಘಂಟೆ ಹೊತ್ತಿಗೆ ಹಸು ಮನೆಯಲ್ಲಿನ ಸಗಣಿ ಕಸ clean ಮಾಡಿ ಮತ್ತೆ ಒಂದು ರೌಂಡ್ ಕಾಫೀ ಕುಡಿದು ಹೊರಟರೆ ಮತ್ತೆ ಮನೆ ಸೇರುತಿದ್ದಿದ್ದು 10 ಘಂಟೆಗೆ. ಸ್ನೇಹಿತರ ಜೊತೆ ಅಡ್ಡ, ಕಾಡು ಹರಟೆ, ಮನೆಗೆ ಬಂದೊಡನೆ ಊಟ ಮಾಡಿ ಮತ್ತೆ online 12 ರ ತನಕ ಚಾಟಿಂಗ್ ನಂತರ ನಿದ್ದೆ. ಈ ರೀತಿಯ ದಿನಚರಿ ಇರುವ ಯಾವ ಮಗನನ್ನಾದರೂ ಅಲಾಲ್ ಟಪಾಲ್ ಅನ್ನದೆ ಮುದ್ದು ಮಾಡೋದಕ್ಕ ಸಾಧ್ಯ?? 

            ಹೌದು ನಾನು ಅಲಾಲ್ ಟಪಾಲೇ, ಅಲೆದು ಅಲೆದು ನಂತರ ಅದರ ಗುರಿಯನ್ನು ಸೇರುವ ಟಪಾಲಿನ ಮೇಲೆ ಒಂದು ವಿಳಾಸ ಇರುತ್ತದೆ. ಹಾಗೆ ನನ್ನ ಈ ಬದುಕಿನ ವಿಳಾಸ ನಾನೆ ಬರೆದುಕೊಂಡಿರುವಂತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಬೇಕೆಂದು. ಆದರೆ ವಿಧಿ ಅದನ್ನು ಸರ್ಟಿಫಿಕೇಟ್ ಗಷ್ಟೇ ಸೀಮಿತಗೊಳಿಸಿದೆ. campus ಇಂಟರ್ವ್ಯೂ ಗೆ ಬಂದ ಕಂಪನಿಗಳೆಲ್ಲ software ಗಳೆ, ನಾನು ಅದ್ರಲ್ಲಿ ಸೆಲೆಕ್ಟ್ ಆಗೋವಷ್ಟು ಬುದ್ಧಿವಂತ ಆಗಿರಲಿಲ್ಲ ಅನ್ಸುತ್ತೆ. ಯಾವ ಕಂಪನಿಯವರು ನನ್ನ ಸೆಲೆಕ್ಟ್ ಮಾಡಿಲ್ಲ. ಆದರು ಕಡೆಯ ಸೆಮಿಸ್ಟರ್ ರಿಸಲ್ಟ್ ಬರುವ ತನಕ ಏನೋ ಒಂದು ರೀತಿ ಮೊಂಡು ಧೈರ್ಯ, ನನಗೆ ಕೆಲಸ ಸಿಕ್ಕೆ ಸಿಗುತ್ತೆ, fisrt ಕ್ಲಾಸ್ ಮಾರ್ಕ್ಸ್ ಇದೆ, ಒಳ್ಳೆ communication ಇದೆ, contacts ಇದೆ, ಸಬ್ಜೆಕ್ಟ್ ಬಗ್ಗೆ ಸಹ ಸುಮಾರಾದ knowledge ಇದೆ, ಹೀಗೆಲ್ಲ ನಂಗೆ ನಾನೆ ಅಂದುಕೊಂಡು ಬಿಟ್ಟಿದ್ದೆ.. ಆದರೆ result ಬಂದು ನನ್ನ ಸ್ನೇಹಿತ ರೆಫರ್ ಮಾಡಿ attend ಮಾಡಿದ ಮೊದಲ ಇಂಟರ್ವ್ಯೂ ಅಲ್ಲೇ ನನ್ನ ಮೊಂಡು ಧೈರ್ಯವೆಲ್ಲ ಮಣ್ಣು ಪಾಲಾಯಿತು...

           ಮೊದಲು  aptitude ಮತ್ತು technical ರೌಂಡ್ ಪಾಸು ಆದೆ. ನಂತರ ಪಿಯುಶ್ ಎಂಬ ವ್ಯಕ್ತಿ ಇಂಟರ್ವ್ಯೂ ಮಾಡಿದ. ಸುಮಾರು 50 ನಿಮಿಷ GSM ಮತ್ತು microcontroller ಮತ್ತು microprocessor ಇವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ. ನಾನು ನನಗೆ ಗೊತ್ತಿದ್ದಷ್ಟು ಉತ್ತರ ನೀಡಿದೆ. ಆತ ಮುಂದಿನ ರೌಂಡ್ ಗೆ ನನ್ನ ಸೆಲೆಕ್ಟ್ ಮಾಡಿದ. ಮುಂದಿನ ರೌಂಡ್ ಅಲ್ಲಿ ತಮಿಳಿಗ ಇಂಟರ್ವ್ಯೂ ಮಾಡಿದ. ಇಂಟರ್ವ್ಯೂ ಮಾಡುತಿದ್ದವನ ಕಡೆಯಿಂದ ಮಿಂಚಿನಂತೆ ಒಂದರ ಹಿಂದೆ ಒಂದು ಪ್ರಶ್ನೆ ಹರಿದುಬಂತು, ನಿಮಗೆ ಜಾವ ಗೊತ್ತ?? ಲಿನಿಕ್ಷ್ ಗೊತ್ತ ? C ++ ಗೊತ್ತಾ? ಆಗ ಒಂದು ಕ್ಷಣ ನಾ ಓದಿದ್ದು ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ಎಂಬುದರ ಬಗ್ಗೆ ಸಂದೇಹ ನನಗೇ ಮೂಡಿಬಂತು. ನಾ ಸ್ವಲ್ಪ ತಡವರಿಸಿ ಸರ್ ನಾನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಮ್ಯುನಿಕೇಶನ್ ಹುಡುಗ, ನನಗೇ ಇದರ ಬಗ್ಗೆ ಅಷ್ಟಾಗಿ ಅರಿವಿಲ್ಲ ಆದರೆ ಆದಷ್ಟು ಬೇಗ ಕಲಿತುಬಿಡುತ್ತಿನಿ. ಒಂದೇ ಒಂದು ಅವಕಾಶ ಕೊಡಿ ಸರ್ ಅಂದೆ, ಒಂದು ರೀತಿಯ ಮಾರ್ಮಿಕವಾದ ನಗು ನೀಡಿದ ಅತ ಹೊರಗಡೆ ಕಾಯಲು ಸೂಚಿಸಿದ, ಸ್ವಲ್ಪ ಸಮಯದ ನಂತರ ಇನ್ನೊಬ್ಬಾತ ಬಂದು ನನ್ನ ಹೆಸರನ್ನ ಕರೆದ, ನನಗ್ಯಾಕೋ ಪಾಸು ಆಗ್ತೀನಿ ಅನ್ನೋ ನಂಬಿಕೆ ಇರಲಿಲ್ಲ, ಯಾಕಂದ್ರೆ ಕರುಣೆಗೆ ಕೆಲಸ ಕೊಡುವುದಕ್ಕೆ ಕಂಪನಿ ನನ್ನ ಇಂಟರ್ವ್ಯೂ ಮಾಡಿದವನ ಮಾವನದ್ದಲ್ಲ, ಆದರು ನೋಡುವ ಅಂತ ನನ್ನ ದೃಷ್ಟಿಯನ್ನ ಅವನೆದೆ ತಿರುಗಿಸಿ ಕೈ ಎತ್ತಿ ನಾನೆ ನೀವು ಕರೆದ ವ್ಯಕ್ತಿ ಅನ್ನೋ ಸೂಚನೆಯನ್ನು ಮಾಡಿದೆ, ಅದಕ್ಕವನು ಸ್ವಲ್ಪವು ಮುಜುಗರ ಬೇಜಾರು ಇಲ್ಲದೆ u can leave for ದಿ ಡೇ ಅಂದ. ಇಷ್ಟಕ್ಕೂ ಅವನಿಗೆ ಬೇಜಾರಾಗುವ ಪ್ರಸಂಗವಾದರು ಏನಿದೆ ಅಲ್ಲಿ ಕೆಲಸ ಬೇಕಾಗಿದ್ದುದು ನನಗೇ, ಸಿಗದಿದ್ದರೆ ನನಗೇ ತಾನೆ ಬೇಜಾರು.

       ಪೆಚ್ಚು ಮೊರೆ ಹಾಕಿಕೊಂಡು ಮನೆಗೆ ಬಂದೆ. ನಮ್ಮನೆಯಲ್ಲಿ ಇಂಟರ್ವ್ಯೂ ಗೆ ಹೋದರೆ ಕೆಲಸವೇ ಸಿಕ್ಕಿ ಬಿಟ್ಟಷ್ಟು
ಸಂತೋಷದಲ್ಲಿದ್ದರು. ಮನೆ ಒಳಗೆ ಕಾಲಿಡುತಿದ್ದಂತೆ ಏನಯ್ಯ ಏನಾಯ್ತು ಹೊಗಿದ್ ಕೆಲಸ ಅಂತ ಅಪ್ಪನ ಪ್ರಶ್ನೆ, ಇಲ್ಲಪ್ಪ ಸೆಲೆಕ್ಟ್ ಆಗಿಲ್ಲ ಅವರಿಗೆ ಜಾವ linix  ಎಲ್ಲ ಗೊತ್ತಿರೋ engineers ಬೇಕಂತೆ ಅಂದೆ. ಅಪ್ಪ ನೀನು ಇಂಜಿನಿಯರ್ ಅಲ್ವಾ ನಿನಗ ಬರಲ್ವ ಅಂದ್ರು ಪಾಪ ಅಮಾಯಕತೆಯಿಂದ. ಇಲ್ಲಪ್ಪ ಅದು ಕಂಪ್ಯೂಟರ್ ಓದಿರೋ ಅವರು ಓದೋ ಸಬ್ಜೆಕ್ಟ್ ನನಗೇ ಅದರ ಅನುಭವ ಇಲ್ಲ, ಕೋರ್ಸ್ ಗೆ ಸೇರಿ ಕಲಿಬೇಕು ಅಂದೆ. ಇಷ್ಟು ವರ್ಷ ಓದಿದ ಮಗ ಇನ್ನು ಸ್ವಲ್ಪ ದಿನ ಮನೆಯಲ್ಲೇ ಇರ್ತಾನೆ ಕೆಲಸಕ್ಕೆ ಹೋಗದೆ ಅಂತ ನನ್ನಪ್ಪನಿಗೆ ಖಾತ್ರಿ ಆಯಿತು. ಮನಸಲ್ಲಿ ಸ್ವಲ್ಪ ಬೇಜಾರು ಆಗಿರಬಹುದು ಅದ್ರು ಅದನ್ನ ತೋರ್ಪಡಿಸದೆ ಇರಲಿ ಮುಂದಿನ ಬರಿ ಪ್ರಯತ್ನ ಮಾಡು ಸಿಗುತ್ತೆ ಅಂದ್ರು. ಆಗ ನನಗೇ ನಾನೆ ಸ್ವಲ್ಪ ಸಮಾಧಾನ ಮಾಡ್ಕೊಂಡು ಚಿಂತೆಯ ಮರವನ್ನು ಹತ್ತುತ್ತಾ ಹೋದೆ ಬಹಳಷ್ಟು ಜಾಳು ಜಾಳದ ಪ್ರಶ್ನೆಗಳು ನನ್ನ ಕಾಡ ತೊಡಗಿದವು

        ಅಪ್ಪನ ಕೈಲಿ ದುಡ್ಡು ಖರ್ಚು ಮಾಡಿಸಿದ್ದು ಸಾಕು ಇನ್ನು ಕೋರ್ಸ್ ಅಂತ ಎಲ್ಲ ಹಣ ತೆಗೆದುಕೊಳ್ಳುವುದು ಬೇಡ ಅನ್ನೋ ನನ್ನ ಮನಸ್ಸು ನಿಜವಾಗಲು ಅಲಾಲ್  ಟಪಾಲೇ.....??

        CET ಅಲ್ಲಿ ಒಳ್ಳೆ ರಾಂಕಿಂಗ್ ಅಲ್ಲದಿದ್ದರೂ ಸುಮಾರಾದ ರಾಂಕಿಂಗ್ ಬಂದರೂ ಜನರಲ್ ಮೆರಿಟ್  ಗೆ ಸೇರಿದಕ್ಕೆ reputed ಎನಿಸಿಕೊಳೋ ಕಾಲೇಜ್ ನಲ್ಲಿ ಸೀಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ನಾನು ಅಲಾಲ್ ಟಪಾಲೇ.......?? 

         ಎಲೆಕ್ಟ್ರಾನಿಕ್ಸ್ ನ ಕಂಪನಿಗಳಿಗೆಲ್ಲ ಅನುಭವ ಇರುವವರೇ ಬೇಕಂತೆ ಇಲ್ಲವಾದಲ್ಲಿ ಯಾವುದಾದರು ಟ್ರೇನಿಂಗ ಇನ್ಸ್ಟಿಟ್ಯೂಟ್ ಇಂದ  ಅಥವಾ reputed ಕಾಲೇಜ್ ಗಳಿಂದ ಕ್ಯಾಮ್ಪುಸ್ inteview ಮಾಡಿ ತೊಗೋತಾರಂತೆ. ಆದ್ರೆ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಿಕಾಲ್ ಮೆಕ್ಯಾನಿಕಲ್ ವಿಭಾಗದಲ್ಲಿ ಇ ಸಮಸ್ಯೆ ಇಲ್ಲ, ನಾ ಎಲೆಕ್ಟ್ರಾನಿಕ್ಸ್ ತೊಗೊಂಡು ಅಲಾಲ್ ಟಪಾಲಾದೇನೆ???

          ಮತ್ತೆ ಯಾವ ಕೆಲಸದ ಮಾಹಿತಿ ಇರೋ website ನೋಡಿದರು ಸಾಫ್ಟ್ವೇರ್ ಇಂಜಿನಿಯರ್ ಬೇಕು ಎಂಬ ಆಡ್ ಇರತ್ತೆ ಆದರೆ ನಮಗೆ ಆ ಅವಕಾಶವಿಲ್ಲ ಅವಕಾಶಗಳ ಕೊರತೆ. ಅವಕಾಶಗಳನ್ನ ಹುಡುಕುತ್ತಿರುವ ನಾನು ಅಲಾಲ್ ಟಪಾಲೇ......??

          ಸಧ್ಯ ಈಗ ಯಾವುದೊ ಖಾಸಗಿ ಕಂಪ್ಯೂಟರ್ ಕೇಂದ್ರದಲ್ಲಿ java C C ++ unix ಮತ್ತು linux  ಕಲಿಯಲು ಸೇರಿದ್ದೀನಿ ನೋಡೋಣ ನಮ್ಮ ದಿಕ್ಕು ಹೇಗೇಗೆ ಬದಲಾಗುತ್ತೋ..........................!!!!!  

                          * ಈ ಅಲಾಲ್ ಟಪಾಲ್ ಗೆ ಒಂದು ಕಂಪನಿ ಅಡ್ರೆಸ್ ಸಿಗುತ್ತಾ ನೋಡೋಣ *

Saturday, July 23, 2011

ಆಹಾ ಎಷ್ಟು ಮಜವಾಗಿತ್ತು ಆ ಕಾಲಾ.......!!!!





       ನಮ್ಮ ತಾತಂದಿರು ಹಳೆ ಕಾಲದ ಕಥೆಗಳನ್ನು ಹೇಳುವಾಗ ಮೊದಲು ಸ್ವಲ್ಪ ಸಮಾಧಾನದಿಂದ ಕೇಳ್ತೇವೆ ಬರು ಬರುತ್ತಾ ಅವರು ಅದೇ ಕಥೆಗಳನ್ನು ಮತ್ತೆ ಮತ್ತೆ ಹೇಳುತ್ತಾರೆ ನಮಗೂ ಬೋರ್ ಅನಿಸಿ ತಾತಾ ಎಷ್ಟು ಸಲಿ ಅದೇ ಕಥೆಗಳನ್ನ ಹೇಳ್ತಿರ ಅಂತ ಗೊಣಗಿಕೊಂಡು ಎದ್ದು ಹೋಗ್ತಿವಿ. ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗು ಆಗ್ತವೆ. ನನಗು ಹಾಗೇ ನಮ್ಮ ತಾತ ಕಥೆಗಳನ್ನ ಹೇಳ್ತಾ ಇದ್ರೂ ಅವರು ತಮ್ಮ ಬ್ರಿಟಿಶ್ ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ ಚಕ್ಕರ್ ಹಾಕಿದ್ದು, ಆಗಿನ ಕಾಲಕ್ಕೆ ಲೋಯರ್ ಸೆಕೆಂಡರಿ ಮುಗಿಸಿ ಕುಟುಂಬದಲ್ಲಿ ಹೆಸರು ಮಾಡಿದ್ದೂ, ಊರಿಗೆ ಮೊದಲನೇ ಎಲೆಕ್ಟ್ರಿಕ್ contractor ಆಗಿದ್ದು, ಊರಿನ ಪ್ರೆಸಿಡೆಂಟ್ ಆಗಿದ್ದು, ಆಗಿನ ಜನ ಹಾಗೆ ಹೀಗೆ ಹುಹ್ ಇನ್ನು ಬಹಳಾ. ಆದರೆ ನಾವು ಅವರು ಕಥೆ ಹೇಳುವಾಗ ಮುಗು ಮುರಿದು ಹೋಗುತಿದ್ದೆವಲ್ಲ, ನಮಗೆಲ್ಲಿ ಅರಿವಿತ್ತು ಆಗಿನ ಅ ಕಾಲದ ಬಗ್ಗೆ ಎಷ್ಟು ಹೇಳಿದರು ಮತ್ತೆ ಮತ್ತೆ ನಮ್ಮ ತಾತನವರಿಗೆ ಹೇಳಬೇಕು ಎನಿಸಿತ್ತು ಎಂದು. ಯಾಕಂದರೆ ಅ ಕಾಲವೇ ಹಾಗಿತ್ತು ಎಷ್ಟು ಅದರ ಬಗ್ಗೆ ಕೊಂಡಾಡಿದರು ಸಾಲದಂಥ ಕಾಲ. ನನಗೆ ಯಾಕೆ ಹೀಗನಿಸಿತ್ತು ಅಂದರೆ ನನಗೂ ಸಹ ಕಳೆದ ಹತ್ತು ವರ್ಷಕ್ಕೂ ಇಗ್ಗು ಬಹಳ ವ್ಯತ್ಯಾಸ ಕಾಣುತ್ತಿದೆ. ನನಗೆ ಇತ್ತೀಚಿಗಷ್ಟೇ ಇದರ ಅರಿವಾಯಿತು.

           ರಾಗಿ ಬೆಳೆ ಬಲೆ ಚೆನ್ನಾಗೈತೆ ಸ್ವಾಮಿ, ಈ ಸಲ ಒಳ್ಳೆ ಬಂಪರ್ ಕಾಸ್ ಮಾಡ್ತ್ಯ ಅಂತ ಚಿಕ್ಕಣ್ಣ ಹೇಳಿದಾಗ ನಮ್ಮಪ್ಪನಿಗೆ ಒಂಥರಾ ಸಂತೋಷ. ಅಂತು ಟೈಮ್ ಗೆ ಸರ್ಯಾಗಿ ಉಳಿಸಿ, ಬಿತ್ತನೆ ಮಾಡಿಸಿ, ಗೊಬ್ಬರ ಚೆಲ್ಲಿ, ಕಳೆ ಒರೆದು, ಗುಂಟುವೆ ಹಾಕಿಸಿ, ಇರೋ ಮುಕ್ಕಾಲು ಎಕರೆಗೆ 10 ಸಾವಿರ ಖರ್ಚ ಮಾಡಿದ್ದಕ್ಕೆ ಇಷ್ಟ ಮಾತ್ರ ಬೆಳೆ ಆಗಿರೋದು ಚಿಕ್ಕಣ್ಣ ಅಂತ ಸ್ವಲ್ಪ ಬಿಂಕದಿಂದನೆ ಅಂದ್ರು. ಅಂಗಲ್ಲ ಸ್ವಾಮಿ ರೇಟ್ ಚೆನ್ನಾಗೈತೆ ಈಗ ಕೆಂಪು ರಾಗಿ 13 ರೂಪಾಯಿಗೆ ತೊಕೊತಾರೆ ಅಂತ ಚಿಕ್ಕಣ್ಣ ಹೇಳೋವಾಗ ಮಧ್ಯಕ್ಕೆ ಬಾಯಿ ಹಾಕಿ ನಮ್ಮಪ್ಪ ನಂದೊಂದು ೧೫ ಮೂಟೆ ಆಗ್ತದಲ್ಲ ಚಿಕ್ಕಣ್ಣ ಅಂದ್ರು ಸ್ವಲ್ಪ ಹೊತ್ತು ಯೋಚನೆ ಮಾಡಿ ಇನ್ನ ಒಂದು ಹೆಚ್ಚೇ ಆಗ್ತದೆ ಸ್ವಾಮಿ ಅಂದ ಚಿಕ್ಕಣ್ಣ. ನಮ್ಮಪ್ಪ ಸರಿ ಹಾಗಾದ್ರೆ ನಲೇನೆ ಕೂಲಿಯವರನ್ನ ಕರೆಸಿಬಿಡು ಕುಯ್ಯಿಸಿಬಿಡನ ಅಂದ್ರು.ಹಗೆ ಮುಂದುವರೆಸಿ ಕೂಲಿ ಏನ್ ಓದ್ತಾ ಇದೆ ಅಂದ್ರು ಚಿಕ್ಕಣ್ಣ ಗಂಡಿಗೆ ೨೫೦ ಹೆಣ್ಣಿಗೆ ೨೨೦ ಅಂದ ಅಷ್ಟೋಂದ ಅಂದ್ರು ನಮಪ್ಪ ಆಶ್ಚರ್ಯದಿಂದ, ಅದಕ್ಕೆ ಚಿಕ್ಕಣ್ಣ ಇಷ್ಟಕ್ ಸಿಗೋದು ನಮ್ ಕೂಲಿಯವರು ಮಾತ್ರ ಸ್ವಾಮಿ ಅಂದ. ನಮಪ್ಪನು ಸರಿ ಹಾಗೆ ಮಾಡಪ್ಪ ಅಂದ್ರು. ಚಿಕ್ಕಣ್ಣ ಸರಿ ಸ್ವಾಮಿ, ಸ್ವಲ್ಪ ಎಲೆ ಅಡಿಕೆ ತರಕ ಏಳಿ ಅಮ್ಮಣ್ಣಿ ಯವರಿಗೆ ಅನ್ನೋ ಅಷ್ಟರಲ್ಲಿ ನಮ್ಮಮ್ಮ ಒಂದಷ್ಟು ವಿಲ್ಯದೆಲೆ ಅಡಿಕೆ ತಂದು ಕೈಗಿಟ್ರು. ಸರಿ ನಾಳೆಗೆ ಕುಲಿಯವ್ರನ್ನ ನೋಡ್ಬೇಕು ಬರ್ತೀನಿ ಸ್ವಾಮಿ ಅಂತ ಹೇಳಿ ಚಿಕ್ಕಣ್ಣ ಹೊರಟ.

          ರಾಗಿ ತೆನೆ ಬಲಿತಿತ್ತು. ಒಂದೊಂದು ತೆನೆಯು ಹಿಡಿದರೆ ಕೈ ತುಂಬಾ ಸಿಗುವಷ್ಟು ದಪ್ಪ, ನೋಡುತಿದ್ದರೆ ನಮ್ಮ ದೃಷ್ಟಿಯೇ ತಗುಲ ಬಹುದೆಂದು ಮಧ್ಯೆ ಒಂದು ದೃಷ್ಟಿ ಬೊಂಬೆ ಕಟ್ಟಿದ್ದರು ನಮ್ಮಪ್ಪ.ನನ್ನ ಕರೆದು ಮಾರನೆಯ ದಿನ ಚಿಕ್ಕಣ್ಣ ಒಂದು ೧೦ ಜನ ಕುಲಿಯವರನ್ನ ಕರೆದು ಕೊಂದು ಬರ್ತಾನೆ ಕುಲಿಯವರಿಗೆ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನ ಮಾಡಿಸಿಬಿಡು ಅಂದ್ರು, ನಮಮ್ಮನಿಗೆ ಕುಲಿಯವರಿಗೆ ಎಲೆ ಅಡಿಕೆ ತೆಗೆದಿಡು ಅಂತ ಹೇಳಿದ್ರು. ನ ಹೋಗಿ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನಕ್ಕೆ ಆರ್ಡರ್ ಕೊಟ್ಟು ಬರುವಷ್ಟರಲ್ಲಿ ನಮ್ಮ ಅಪ್ಪ ಹೊಲದ ಮಧ್ಯ ನಿಂತು ನಾಳೆ ಇದೆಲ್ಲ ಕೂಲಿಯವರು ಕುಯ್ದು ಕಟ್ಟು ಕಟ್ಟುತಾರೋ ಅಂದ್ರು ಒಹ್ ಹೌದ ಸರಿ ಅಪ್ಪ ಅಂತ ನಾನು ತಲೆ ಆಡಿಸಿದೆ 

         ಮಾರನೆಯ ದಿನ ಬೆಳಿಗ್ಗೆ 9 ಆಯಿತು ಕೂಲಿಯವರು ಬಂದಿಲ್ಲ 9 -30 ಆಯಿತು ಬಂದಿಲ್ಲ ನಮಪ್ಪನಿಗೆ ಯಾಕೋ ಏನೋ ಎಡವಟ್ಟು ಆಗಿದೆ ಅಂತ ಅನ್ನಿಸ್ತು ನನ್ನ ಕರೆದು ಹೋಗಿ ಚಿಕ್ಕಣ್ಣನ ಮನೆಗೆ ಹೋಗಿ ನೋಡ್ಕೊಂಡು ಬಾರೋ ಅಂದ್ರು. ನಾ ಸರಿ ಹೊರಡ್ತೀನಿ ಅನ್ನೋ ಅಷ್ಟರಲ್ಲಿ 10 ಆಗಿತ್ತು ಅಷ್ಟರಲ್ಲಿ ಚಿಕ್ಕಣ್ಣ ಸಹ ಒಂದು ತಂಡ ಕಟ್ಕೊಂಡು ಹೊಲದೊಳಗೆ ಕಾಲಿಟ್ಟ. ಒಟ್ಟು ಹತ್ತು ಜನ ೬ ಹೆಂಗಸರು ೪ ಗಂಡಸರು. ನಮಪ್ಪ ಸ್ವಲ್ಪ ಕೋಪದಿಂದ ಏನ್ ಚಿಕ್ಕಣ್ಣ ಇದು ಬಾರೋ ಟೈಮ್ ಅ ಅಂದ್ರು ಅದಕ್ಕೆ ಆಟ ಸ್ವಾಮಿ ಈಗೆಲ್ಲ ಇಷ್ಟೇ ಸ್ವಾಮಿ ಕೆಲಸಕ್ಕೆ ಹಿಡಿಯೋದೇ ೧೦ ಘಂಟೆಗೆ ಹಳೆ ಕಾಲದ ತರ ೯ ಕ್ಕೆ ಯಾರು ಬರಲ್ಲ ಅಂದ ನಮಪ್ಪಂಗೆ ಸ್ವಲ್ಪ ಕೋಪ ಬಂದ್ರು ಸರಿ ಶುರು ಮಾಡ್ರಿ ಅಂದ್ರು.ಅಪ್ಪನಿಗೆ ಜರೂರು ಕೆಲಸ ಇದ್ದರಿಂದ ನನ್ನ ನೋಡ್ಕೊಳಕ್ಕೆ ಹೇಳಿ ಹೊರಟರು 

          ಕೆಲಸಕ್ಕೆ ಕೂತವರು ನಾನು ಅಲ್ಲೇ ಇದ್ದದನ್ನ ನೋಡಿ ಹೋಗಿ ಅಮ್ಮನಿಗೆ ಕಾಪಿ ಮಾಡಕ್ಕೆ ಹೇಳಪ್ಪಿ ಅಂದ್ರು. ಸರಿ ಅಂತ ಹೇಳಿ  ಕಾಫೀ ಮಾಡಿಸಿಕೊಂಡು ಹೋಗೋ ಅಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಹೋದೊಡನೆ ಕಾಫೀ ಕುಡಿದು ಮತ್ತೆ ಕೆಲಸ ಹಿಡಿದರು ಆಗ ಸುಮಾರು ೧೧ ಆಗಿರಬಹುದು ಹೋಗಪ್ಪ ಎಲೆ ಅಡಿಕೆ ತೆಗೆದುಕೊಂಡು ಬಾ ಅಂದ್ರು ಮತ್ತೆ ಮನೆಗೆ ಬಂದು ಎಲೆ ಅಡಿಕೆ ತೆಗೆದುಕೊಂಡು ಹೋಗುವಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಬಂದಿದ್ದು ನೋಡಿದವರೇ ಕೆಲಸ ಮಾಡುತಿದ್ದಂತೆ ನಟಿಸಿ ಎಲೆ ಅಡಿಕೆ ತೆಗೆದುಕೊಂಡರು. ಮಧ್ಯಾಹ್ನ 12 -45 ಆಯಿತು, ಉಟ ರೆಡಿ ಆಗೈತ ಅಂತ ಚಿಕ್ಕಣ್ಣ ಕೇಳ್ದ. ಗಾಡಿಲಿ ಒಬ್ಬ ಕೂಲಿಯವ್ನ ಕೂಡಿಸ್ಕೊಂದು ರಾಘವೇಂದ್ರ ಭವನ್ ಅಲ್ಲಿ ಆರ್ಡರ್ ಕೊಟ್ಟಿದ್ದ ಚಿತ್ರಾನ್ನ ತಂದೆ. ಎಲ್ಲರು ಚೆನ್ನಾಗಿ ತಿಂದು ಮತ್ತೊಮ್ಮೆ ಎಲೆ ಅಡಿಕೆ ಜಿಗಿಯುತ್ತ ಹರಟೆ ಹೊಡೆಯುತ್ತಾ ಕೂತರು. ಸಮಯ 1 -30 ಆಯಿತು, ನಾನು ಏಳ್ರಿ ಕೆಲಸ ಹಿಡಿರಿ ಅಂದೆ, ಅದಕ್ಕೆ ಚಿಕ್ಕಣ್ಣ ಇರು ಸ್ವಾಮಿ 2 ಘಂಟೆ ಅಗಲಿ ನಮಗೇನು ವಿಶ್ರಾಂತಿ ಬೇಡ್ವ ಅಂದ. ನಾ ಏನೋ ಇವರನ್ನ ಹಿಂಸೆ ಮಾಡ್ತಾ ಇದ್ದಿನೇನೋ ಅನ್ನಿಸ್ಬಿಡ್ತು ನಂಗೆ ಉತ್ತರ ಏನು ಕೊಡಬೇಕು ಅಂತ ತೋಚದೆ ಸರಿ ಸರಿ ಅಂದೆ

          2 ಘಂಟೆಗೆ ಶುರು ಮಡಿದ ಕೂಲಿಯವರು 5 -15 ಕ್ಕೆ ಎಲ್ಲ ಹೊರಟರು. ಇನ್ನು ಎಲ್ಲ ಸಾಲುಗಳಲ್ಲೂ 15 ಅಡಿ ಅಷ್ಟು ಮಾತ್ರ ಕೆಲಸ ಉಳಿದಿತ್ತು. ನಾನು ಏನ್ ಚಿಕ್ಕಣ್ಣ ಇನ್ನ 5 -15 ಅಂದೆ. ಸ್ವಾಮಿ ಇನ್ನೇನು 7 ಘಂಟೆ ತನಕ ಕೆಲಸ ಮಾಡ್ತಾರ ಕೂಲಿ ಕೊಡ್ರಿ ಅಂದ ಏನು ಮಾಡಲು ತೋಚದೆ ಮಾತನಾಡಿದಂತೆ ಗಂಡಾಳಿಗೆ 250 ಹೆಂಗಸಿಗೆ 220 ರು ಕೊಟ್ಟೆ. ನಾಳೆ ಇರೋ ಬಾಕಿ ಕೆಲಸಕ್ಕೆ 4 ಅಳು ಬೇಕು ಅಂದ, ನಾನು ಬೇಡಪ್ಪ ಒಪ್ಪಂದ ಕೊಡ್ತೀನಿ ಒಟ್ಟಿಗೆ 600 ತೊಗೊಂಡು ಮಾಡ್ಬಿಡು ಅಂದೆ. ಸರಿ ಅಂತ ಮಾರನೆಯ ದಿನ ಬೆಳಿಗ್ಗೆ ಒಂಭತ್ತಕ್ಕೆ ಬಂದು 11 ಘಂಟೆ ಅಷ್ಟರಲ್ಲಿ ಕೆಲಸ ಮುಗಿಸಿ ದುಡ್ಡು ತೊಗೊಂಡು ಮಾರನೆಯ ದಿನ ಬಂದು ವಾಮೆ ಹಾಕಿ ಕೊಡುತ್ತೇನೆ ಅಂತ ಹೇಳಿ ಹೊರಟೇಬಿಟ್ಟ...  

           ಮಾರನೆಯ ದಿನ ಚಿಕ್ಕಣ್ಣ ಎಷ್ಟು ಹೊತ್ತಾದರೂ ಬರ್ಲಿಲ್ಲ. ಸಂಜೆ ಹೋದಾಗ ಬೇರೆ ಕಡೆ ಕೂಲಿ ಹೆಚ್ಚು ಕೊಡ್ತಾರೆ ಅಂತ ಲ್ಲಿ ಹೋಗಿದ್ದೆ ಅಂದ. ಸರಿ ನಾಳೆ ಬಾರಪ್ಪ ಅಂದ್ರೆ ನಾಳೆ ಅಲ್ಲಿ ಕೆಲಸ ಬಾಕಿ ಇದೆ ಮುಗಿಸಿ ನಾಡಿದ್ದು ಬರ್ತೀನಿ ಅಂದ. ಒಣಗಿದಷ್ಟು ಒಳ್ಳೇದು ಎಂದು ನಾವು ಆಯಿತು ಅಂದೆವು. ಎರಡು ದಿನದ ನಂತರೆ ಬೆಳಗಿನ ಜಾವವೇ ಭಾರಿ ಮಳೆ ಶುರುವಾಯಿತು, ನಾನು ನಮಪ್ಪ ಒಂದೆರಡು ಸಾಲು ಕಟ್ಟುಗಳನ್ನ ಎತ್ತಿ ನೆನೆಯದ ಜಾಗಕ್ಕೆ ಹಾಕಿದೆವು. ಮಿಕ್ಕಿದ್ದು ಎತ್ತಲು ಸಾಧ್ಯವಾಗಲಿಲ್ಲ ಮಳೆ ಒಂದೇ ಸಮನೆ ಜಡಿ ಹಿಡಿದು ಮೂರೂ ದಿನ ಸುರಿಯಿತು.ಮಳೆಲಿ ತೆನೆ ಅಷ್ಟೊಂದು ನೆಂದ ಕಾರಣ ರಾಗಿ ಕಪ್ಪಾಯಿತು. ಬರಿ ೭ ಮೂಟೆ ಆಯಿತು. ಹುಲ್ಲು ಮುಗ್ಗಿ ಪುಡಿ ಪುಡಿ ಆಗಿತ್ತು. ಕಟ್ಟು ಕಟ್ಟಿಸಿ ತುಳಿಸಿ ತೂರಿಸಿ ಎಲ್ಲ ಮಾಡಲು ಖರ್ಚು ೫೦೦೦ ದಾಟಿತ್ತು.  ಒಟ್ಟು ಸೇರಿ ಸುಮಾರು ೧೫೦೦೦ ಖರ್ಚು ಆದರೆ ಲಾಭ ಮಾತ್ರ ಏನು ಇಲ್ಲ. ನಮ್ಮದು ಬರಿ ಮುಕ್ಕಾಲು ಎಕರೆ 5 ಎಕರೆ 10 ಎಕರೆ ಬೇಸಾಯ ಮಾಡುವವರ ಕಷ್ಟ ಹೇಗಿರಬಹುದು ಎಂದು ಯೋಚಿಸಿ, ಅದಕ್ಕೆ ರೈತ ಆತ್ಮ ಹತ್ಯೆ ಮಾಡಿಕೊಳ್ಳುವುದು ಎಂಬ ಅರಿವಾಯಿತು

         ೧೦ ವರ್ಷದ ಹಿಂದೆ ಹೀಗಿರಲಿಲ್ಲ ಕೆಲಸಕ್ಕೆ ೯ ಘಂಟೆಗೆ ಬರುತಿದ್ದರು. ಮೈ ಗಳ್ಳತನ ಮಾಡುತ್ತಿರಲಿಲ್ಲ, ಅತಿ ಅಸೆ ಪಡುತ್ತಿರಲಿಲ್ಲ, ಹಿಡಿದ ಕೆಲಸ ಮುಗಿಯುವವರೆಗೂ ಬೇರೆ ಕೆಲಸ ಒಪ್ಪಿಕೊಳ್ಳುತ್ತಿರಲಿಲ್ಲ. ಬೇಕೆಂದೇ ಇವತ್ತಿನ ಕೆಲಸ ನಾಳೆಗೆ ಮುಂದೂಡಿ ಹಣಕ್ಕಾಗಿ ಅಸೆ ಪಡುತ್ತಿರಲಿಲ್ಲ. ಆದರೆ ಈಗ ಎಲ್ಲವು ಅಯೋಮಯ ಆಗ ಕುಲಿಯವರಿಗೆ ನಾವು ಕೆಲಸ ಮಾಡಿ ಎಂದು ಹೇಳಲೇ ಬೇಕಾಗಿರಲಿಲ್ಲ. ತಮ್ಮ ಕೆಲಸ ತಾವು ಮುಗಿಸುತಿದ್ದರು, ಇಲ್ಲವಾದರೆ ತಿಂದ ಅಣ್ಣ ಮೈಗೆ ಹತ್ತಲ್ಲ ಸ್ವಾಮಿ ಅಂತಾಇದ್ರು. ಬರಿ ಹತ್ತು ವರ್ಷದ ಹಿಂದೆಯೇ ಅಷ್ಟು ನಿಯತ್ತು ಇದ್ದಿದ್ದರೆ ಇನ್ನು ನಮ್ಮ ತಾತ 70 ವರ್ಷದ ಹಿಂದಿನ ವಿಷಯದ ಬಗ್ಗೆ ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಅಲ್ಲವೇ ಗೆಳೆಯರೇ.......!!                        

Thursday, June 23, 2011

ನನ್ನ ಇಂಜಿನಿಯರಿಂಗ್ ಬದುಕಿನ ಕಡೆಯ 22 ಘಂಟೆಗಳು...............!!!

            ಅಂದು ದಿನಾಂಕ ಜೂನ್ 16 2011 ಮಧ್ಯಾಹ್ನ 2   ಘಂಟೆ ಆಗಿತ್ತು ಇಂಜಿನಿಯರಿಂಗ್ ಬದುಕಿನ ಕಟ್ಟ ಕಡೆಯ ಪರೀಕ್ಷೆಗೆ ಕೇವಲ 22 ಘಂಟೆ ಮಾತ್ರ ಉಳಿದಿತ್ತು, ೪ ವರ್ಷಗಳ ಕಠಿಣ ಪರಿಶ್ರಮದ ನಂತರ ಕೊನೆಯ ಸೆಮಿಸ್ಟರ್ ನ ಪ್ರಾಜೆಕ್ಟ್ ವರ್ಕ್ ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುವುದು. ಅದನ್ನು ಬಹಳ ಕಷ್ಟ ಪಟ್ಟು ಜಯನಗರದಲ್ಲಿನ ಒಂದು consultacy ಅಲ್ಲಿ ಮಾಡಿದ್ದೆವು. ಸಮಾಜದಲ್ಲಿ ಮತದಾನ ಮಾಡುವುದರಲ್ಲಿ ಆಗುವ ಲೋಪದೋಷಗಳನ್ನು ಸರಿಪಡಿಸಲೆಂದು ನಾವು finger print recognisation sensor ಉಪಯೋಗಿಸಿ ಒಂದು ಮಾಡೆಲ್ ರೆಡಿ ಮಾಡಿದ್ದೆವು.ನಾನು ಸಂದೀಪ್ ರಘು ಮತ್ತು ಮಂಜು ಸೇರಿ ಈ ಮಾಡೆಲ್ ಮಾಡಿದ್ದೆವು.

           ಮಧ್ಯಾಹ್ನ ಅಮ್ಮ ಮಾಡಿದ ರಾಗಿಮುದ್ದೆ ಮತ್ತು ಸೊಪ್ಪು ಹುಳಿ ಸವಿಯುತ್ತ ಇದ್ದ ನನಗೆ ಮೊಬೈಲ್ ರಿಂಗಣಿಸಿದ್ದು ತಿಳಿಯಲೇ ಇಲ್ಲ, ಕಡೆಗೆ ಅಮ್ಮ ಪವನ್ ಆಗ್ಲಿಂದ ಮೊಬೈಲ್ ಬಡ್ಕೊತಿದೆ ನೋಡೋ ಅಂದಾಗ ರಾಗಿಮುದ್ದೆಯ ಕಡೆಯ ತುಂಡು ನನ್ನ ಬಾಯಲಿತ್ತು. ಹಾ ನೋಡ್ತಿನಮ್ಮ ಎಂದು ಮೊಬೈಲ್ ಬಳಿಗೆ ಹೋಗುವಷ್ಟರಲ್ಲಿ ಕಾಲ್ ಮತ್ತೆ ಕಟ್ ಆಗಿತ್ತು. ಮೊಬೈಲ್ ನ ದಿಸ್ಪ್ಳಿ, 5 missed calls ಎಂದು ತೋರಿಸುತಿತ್ತು. ನೋಡಿದರೆ 4 ಮಿಸ್ ಕಾಲ್ ಸಂದೀಪ್ ಮತ್ತು ಒಂದು ಮಂಜುದು ಆಗಿತ್ತು.
ನಾನು ಸಂದೀಪ್ ಗೆ ಕರೆ ಮಾಡಿದೆ, ಸಂದೀಪ್ ಒಂಥರಾ ಗಾಬರಿ ಹುಡುಗ, ನೋಡಲು ಸದೃಢ ಮತ್ತು ಇರೋದು ಶಿವಾಜಿನಗರದಂತ ಸುಂದರ ಏರಿಯದಲ್ಲಿ.ಮನೆಯಲ್ಲಿ ತೆಲುಗು ಭಾಷೆ ಮಾತನಾಡುವರಾದರು ಶಿವಾಜಿನಗರ ಅವನನ್ನು ಅರ್ಧ ತಮಿಳಿಗನಾಗಿ ಮಾಡಿದೆ ಮತ್ತು ಅಲ್ಲಿನ ವಾತಾವರಣ ಅವನನ್ನು ಶಾರ್ಟ್ temperd ಮಾಡಿದೆ. ಸಂದೀಪ್ ಕರೆ recieve  ಮಾಡುತ್ತಲೇ ಮಚ್ಚ...... ಅಂತ ಅರಚಿದ, ನಾನು ಏನೋ, ಏನಾಯ್ತೋ, ರಿಪೋರ್ಟ್ ಚೆನ್ನಾಗಿ ಓದಿ ರೆಡಿ ಆಗಿ ಬಾ ನಾಳೆ ಸೆಮಿನಾರ್ ಗೆ ಅಂದೆ. ಅದಕ್ಕವನು ಮಾಡೆಲ್ ಇಲ್ಲಿ ಎಕ್ಕುಟ್ಟಿ ಹೋಗಿದೆ ಇನ್ನು ಸೆಮಿನಾರ್ ಎಲ್ಲಿಂದ ಕೊಡೋದೋ ಅಂದ. ಅ ಮಾತು ಕೇಳಿದ ಒಡನೆ ಇನ್ನೊಂದು ರಾಗಿಮುದ್ದೆ  ತಿನ್ನಬೇಕೆನಿಸಿದ್ದ ನನ್ನ ಅಸೆ ಹಾಗೆ ಕರಗಿ ಹೋಯ್ತು 2 ಲೋಟ ನೀರು ಗಟಗಟ ಕುಡಿದು ನಂತರ ಮಾತಿಗಿಳಿದೆ. 

           ನೆನ್ನೆ ತನಕ ಸರಿಯಾಗಿದ್ದ ಪ್ರಾಜೆಕ್ಟ್ ಇದ್ದಕಿದ್ದಂತೆ ಏನಾಯ್ತೋ ಮಗ ಅಂದೆ, ಅದಕ್ಕೆ ಅವನು ಗೊತ್ತಿಲ್ಲ ಕಣೋ ಮನೆಯಲ್ಲಿ ಟೆಸ್ಟ್ ಮಾಡಣ ಅಂತ ನೋಡಿದೆ, ಆದ್ರೆ ಇದ್ದಕಿದ್ದಂತೆ adaptor ಢಂ ಅಂತು ನಂತರ ಬೇರೆ adaptor ಹಾಕಿ ಆನ್ ಮಾಡಿದ್ರೆ sensor detect ಆಗ್ತಿಲ್ಲ display ಬರ್ತಿಲ್ಲ ಅಂದ. ನಮ್ಮ ಪ್ರಾಜೆಕ್ಟ್ ನಲ್ಲಿ ಸೆನ್ಸಾರ್ ಮತ್ತು display ನೆ ಜೀವಾಳ, ಅವೆರಡೆ ಇಲ್ಲದೆ ಹೋದ್ರೆ ನಾಳಿನ exam ಗೋವಿಂದ ಗೋವಿಂದ. ಅವನಿಗೆ ಮತ್ತೆ ಕರೆ ಮಾಡುವೆ ಎಂದು ತಿಳಿಸಿ ಜಯನಗರದ ನಮ್ಮ consultancy ಗೆ ಫೋನಾಯಿಸಿದೆ. ಅಲ್ಲಿ ಕರೆ recieve ಮಾಡಿಲ್ಲ ನಂತರ ನಮ್ಮ ಪ್ರಾಜೆಕ್ಟ್ ರೆಡಿ ಮಾಡಿಕೊಟ್ಟ ವ್ಯಕ್ತಿಗೆ ಕರೆ ಮಾಡಿದೆ not reachable ಎಂದು ಕ್ಯಾಕರಿಸಿ ಉಗಿದಂತೆ ಒಂದು ಹೆಣ್ಣು ಧ್ವನಿ ಹೇಳಿತು. ನನಗೆ ಬಹಳ ಭಯ ಮತ್ತು ಗೊಂದಲ ಉಂಟಾಯ್ತು. ಹಿಂದೊಮ್ಮೆ ಪ್ರಾಜೆಕ್ಟ್ ಮಾಡುವಾಗ consultancy ಅಲ್ಲಿ ಕೆಲಸ ಮಾಡುವ ಒಬ್ಬ ಹುಡುಗನ ಮೊಬೈಲ್ ನಂಬರ್ ಪಡೆದಿದ್ದೆ ಅ ನಂಬರ್ ಗೆ ಕರೆ ಮಾಡಿದೆ ಅದೃಷ್ಟವಶಾತ್ ಅದು ರಿಂಗಾಯಿತು recieve ಮಾಡಿದ ಅ ಹುಡುಗ ಯಾರು ಬೇಕಿತ್ತು ಎಂದ ನಾನು ಸರ್ ನಾನು ಪವನ್ ನಿಮ್ಮ ಬಳಿ ಪ್ರಾಜೆಕ್ಟ್ ಮಾಡಿದ್ದೆ ನೆನಪಿದ್ಯ ಅಂದೆ ಅದಕ್ಕವನು ಓಒ ಹೇಳಿ ಏನ್ ಸಮಾಚಾರ ಅಂದ ಸಧ್ಯ ಗುರುತಿದೆಯಲ್ಲ ಅಂತ ನಿಟ್ಟುಸಿರು ಬಿಟ್ಟು ಸರ್ ಪ್ರಾಜೆಕ್ಟ್ problem ಆಗಿದೆ ದೊಡ್ಡ ಸರ್ phone notreachabe ಮೇಡಂ recieve ಮಾಡ್ತಿಲ್ಲ ಅಂದೆ. ಅದಕ್ಕವನು ರೀ ಪವನ್ ಇ consultancy ಗಳ ಕಥೆನೇ ಇಷ್ಟು ಕಣ್ರೀ ಅವರಿಗೆನಿದ್ರು ದುಡ್ಡು ಬಂದ್ರೆ ಸಾಕು ಅಮೇಲ್ ನಿಮ್ಮನ್ನ ಕ್ಯಾರೆ ಅನ್ನಲ್ಲ. ನಾನು ಆಫೀಸ್ ನಲ್ಲೆ ಇದ್ದೀನಿ ನೀವು ಯಾವ ಫೋನ್ ಮಾಡಬೇಡಿ ಡೈರೆಕ್ಟ್ ಆಗಿ ಇಲ್ಲಿಗೆ ಬಂದುಬಿಡಿ ರೆಡಿ ಮಾಡಿಕೊಡೋಣ ಅಂದ.ಇನ್ನೇನು ಕರೆ ಕೊನೆ ಮಾಡಬೇಕು ಅಷ್ಟರಲ್ಲಿ ರೀ ಒಂದು ನಿಮಿಷ ಅಂದ ಏನು ಹೇಳಿ ಅಂತ ಕೇಳಿದೆ ಅದಕ್ಕವನು ಯಾವುದೇ ಕಾರಣಕ್ಕೂ ನನಗೆ ಕಾಲ್ ಮಾಡಿದ ವಿಷಯ ನಾನು ಬನ್ನಿ ಎಂದು ಹೇಳಿದ ವಿಷಯ ಮೇಡಂ ಗೆ ಅಗಲಿ ಸರ್ ಗೆ ಅಗಲಿ ಹೇಳಬೇಡ್ರಿ ಅಂದ. ಸಧ್ಯ ಯಾವುದೊ ಒಂದು ದಾರಿ ತೋರಿಸಿದೆಯಲ್ಲ ಪುಣ್ಯಾತ್ಮ ಎಂದು ಸರಿ ಹಾಗೆ ಅಗಲಿ ಎಂದು ಫೋನ್ disconnect ಮಾಡಿದೆ.

         ಜಯನಗರದ ಪ್ರಯಾಣದ ಬಗ್ಗೆ ಚಿಂತಿಸುತ್ತಿರುವಾಗಲೇ ನೆನಪಾದ ನನ್ನ ನೆಚ್ಚಿನ ಗೆಳೆಯ ಶಿವ, ನಾನು ಎಂದು ಅವನ ಹೊಸ ಬೈಕ್ ಕೇಳಿದರು ಇಲ್ಲ ಎನ್ನುವುದಿಲ್ಲ, ಅವನಿಗೆ ಕರೆ ಮಾಡಿದೆ. ಅವನು ಕೋಲಾರದ ಜಮೀನುದಾರ ರೆಡ್ಡಿ ಕುಟುಂಬದ ಹುಡುಗ. ಅವನನ್ನ ನಾನು ಬಿಡ್ದ ಎಂದೇ ಯಾವಾಗಲು ಸಂಭೋಧಿಸುವುದು, ಅವನು ನನ್ನ ಜೋತೆಯವನಾದ್ರು ಬಾಸ್ ಅಂತಾನೆ ನನ್ನ.ಕರೆ ಮಾಡಿದ ಒಡನೆ ಕಾಲ್ recieve ಮಾಡಿದ ಶಿವ ಹೇಳಿ ಬಾಸ್ ಅಂದ. ನಾನು ಬಿಡ್ದ, ಪ್ರಾಜೆಕ್ಟ್ ಹಾಳಾಗಿದೆ ನಾಳೆ ಸೆಮಿನಾರ್ ಇದೆ ಬಹಳ ಜರೂರಾಗಿ ನಿನ್ನ ಬೈಕ್ ಬೇಕು ಅಂದೆ. ಅವ್ನು ಪರೀಕ್ಷೆಯ ತರಾತುರಿಯಲ್ಲಿದ್ದ, ಆದರು ಬಾಸ್ ಏನು ತಲೆ ಕೆಡಿಸಿಕೊಳ್ಳಬೇಡ ನೀನು ಎಲೆಕ್ಟ್ರೋನಿಕ್ ಸಿಟಿ ಗೆ ಬಂದು ಬಿಡು ಗಾಡಿ ಕೊಡ್ತೀನಿ ಅಂದ. ಇನ್ನೇನು ಹೋರಡಬೇಕು ಅನ್ನುವಷ್ಟರಲ್ಲೇ consultancy ಇಂದ ಕರೆ ಬಂತು. ಕರೆ ಮಾಡಿದ್ದು ಅಲ್ಲಿ ಕೆಲಸ ಮಾಡುವ ಮತ್ತೊಬ್ಬ ಹುಡುಗ,  ಸರ್ ನಿಮ್ಮ ಪ್ರಾಜೆಕ್ಟ್ ರೆಡಿ ಮಾಡಿಕೊಡ್ತಿವಿ ಆದರೆ ನಮ್ಮ ಬಾಸ್ ಹೇಳಿದ್ರು 1500 ರು ಖರ್ಚಾಗುತ್ತದೆ ಅಂತ ಅಂದ. ಮನೆಯಲ್ಲಿ ಈಗಾಗಲೇ ಪ್ರಾಜೆಕ್ಟ್ ಹೆಸರಿನಲ್ಲಿ ಬೇಜಾನ್ ಹಣ ತೆಗೆದುಕೊಂಡು ಖರ್ಚು ಮಾಡಿದ್ದೆ, ಮತ್ತೆ ಅಪ್ಪನ ಹತ್ರ  ಕೇಳುವ ಧೈರ್ಯ ಇಲ್ಲದಿದ್ದರೂ ಕೇಳಿದೆ. ಅಪ್ಪ..! ನನಗೆ 1500 ಬೇಕು ಪ್ರಾಜೆಕ್ಟ್ ಹಾಳಾಗಿದೆ ರಿಪೇರಿ ಮಾಡಿಸಬೇಕು ಅಂದೆ. ಅದಕ್ಕೆ ನನ್ನಪ್ಪ ಏನೋ ಮಗನೆ ಎಷ್ಟೋ ಖರ್ಚ ಮಾಡ್ತ್ಯ ಇ ಪ್ರಾಜೆಕ್ಟ್ ಗೋಸ್ಕರ ಅಂತ 1500 ಕೊಟ್ರು. ಸರಿ ಎಲೆಕ್ಟ್ರೋನಿಕ್ ಸಿಟಿಗೆ ನಮ್ಮೂರಿಂದ ಅರ್ಧ ಘಂಟೆಯ ಪ್ರಯಾಣ ಹೋಗುವಷ್ಟರಲ್ಲಿ ಶಿವ ಬಸ್ ಸ್ಟಾಪ್ ಅಲ್ಲಿ ಕಾಯುತಿದ್ದ, ಹೋದೊಡನೆ ನನಗೆ ಬೈಕ್ ಕೊಟ್ಟು ಧೈರ್ಯ ಹೇಳಿ ಕಡೆಗೆ ಒಂದು ಬಾಂಬ್ ಸಿಡಿಸಿದ, ಬಾಸ್ ಗಾಡಿಯಲ್ಲಿ ಪೆಟ್ರೋಲ್ ಇಲ್ಲ ಹಾಕಿಸಿಕೊ ಅಂತ... 

         ಸಧ್ಯ ಈಗ ರುಪಾಯಿ ರುಪಾಯಿಗೂ ಪರದಾಡುವ ಸಮಯದಲ್ಲಿ 150 ರು ಗಳಿಗೆ ಮತ್ತೆ ಕುತ್ತು ಬಂದಿತ್ತು. ಸರಿ ಏನೋ ನೋಡುವ ಸಂದೀಪ್ ಬರುತ್ತಾನೆ ಅವನ ಬಳಿ ಇರುತ್ತೆ ಅಂತ ಬೈಕ್ ಗೆ ತೈಲ ನೆವೇದನೆ ಮಾಡಿ ಎಲೆಕ್ಟ್ರೋನಿಕ್ ಸಿಟಿ fly over ಹತ್ತಿದೆ. ಅದಕ್ಕೂ 20 ರು ಚಾರ್ಜ್. fly over ಮೇಲೆ 80 km ಸ್ಪೀಡ್ ಅಲ್ಲಿ ಬೈಕ್ ಓಡಿಸೋವಾಗ ನಮ್ಮ ಗುರುಗಳು ಹೇಳಿದ ಮಾತು ನೆನಪಿಗೆ ಬಂತು " ಪ್ರಾಜೆಕ್ಟ್ ಯಾವಾಗಲು ಸ್ವಂತದ್ದಾಗಿರಬೇಕು ಆಗ ಯಾವುದೇ ಸಮಯದಲ್ಲೂ ಅದನ್ನು ನಾವೇ ರೆಪೇರಿ ಮಾಡಿಕೊಳ್ಳಬಹುದಾದ ಸಾಮರ್ಥ್ಯ ನಮ್ಮಲ್ಲಿರುತ್ತದೆ ". ಆದರೆ ನಮ್ಮ ಉಡಾಫೆ ದುಡ್ಡು ಕೊಟ್ಟರೆ ಮಾಡೆಲ್ ರೆಡಿ ಮಾಡಿ ಕೊಡುವ consultancy ಗಳಿಂದ ಇನ್ನಷ್ಟು ಹೆಚ್ಚಾಗಿತ್ತು. ಸೋಂಬೇರಿತನ 8ನೇ ಸೆಮಿಸ್ಟರ್ ಪ್ರಾರಂಭದಲ್ಲೇ ಇಂಜಿನಿಯರಿಂಗ್ ಮುಗಿದೇಹೋಗಿದೆ ಎಂದು ಮೈ ಮುರಿಸುತಿತ್ತು.. ಅದರಲ್ಲೂ theory exam ಮುಗಿದ ಮೇಲಂತೂ ಪ್ರಾಜೆಕ್ಟ್ exam ಯಾವ ಲೆಕ್ಕ ಎಂಬ ಬೇಕಾಬಿಟ್ಟಿ ಮನಸ್ಥಿತಿ ಉಂಟುಮಾಡಿತ್ತು. ಆದರೆ ಈಗ ಅನುಭವಿಸುತ್ತಿರುವ ಈ ಗೊಂದಲ ನನ್ನ ಜೀವನದಲ್ಲಿ ಬಹು ದೊಡ್ಡ ಪಾಠ ಎಂಬುದು ತಿಳಿದು ಕೊಳ್ಳಲು ಬಹಳ ಸಮಯ ಬೇಕಾಗಿರಲಿಲ್ಲ....

         ಆಗ ಸಮಯ ಸಂಜೆ 4 ಘಂಟೆ ಆಗಿತ್ತು, ಇನ್ನು 20 ಘಂಟೆ ಮಾತ್ರ ಉಳಿದಿದೆ ನನ್ನ exam ಗೆ.  consultancy ಬಳಿ ಬಂದಾಯ್ತು, ಸಂದೀಪ್ ಕಾಯುತಿದ್ದ. ಅವನು ಪಾಪ ಎಲ್ಲೆಲ್ಲೋ ಓಡಾಡಿ ಅವನ ಗೆಳೆಯರ ಬಳಿಯಿದ್ದ ಮತ್ತೊಂದು ಸೆನ್ಸಾರ್ ತಂದಿದ್ದ. ಅವರು ಸಹ ನಮ್ಮ ತರಹದ್ದೇ ಪ್ರಾಜೆಕ್ಟ್ ಮಾಡಿದ್ದರು ಅದ್ದರಿಂದ ಅವರ ಸೆನ್ಸಾರ್ ನಮಗೆ ಉಪಯೋಗಕ್ಕೆ ಬರುತಿತ್ತು. ಸರಿ ಮಾಡೆಲ್ ತೆಗೆದುಕೊಂಡು consultancy ಒಳಗೆ ಹೋದೆವು ಒಳಗೆ ಮೇಡಂ ಇರಲಿಲ್ಲ ಮೈಸೂರ್ ಗೆ ಹೋಗಿದ್ದಾರೆ 7-30 ಗೆ ಬರುತ್ತಾರೆ ಅಂದ್ರು ಅಲ್ಲಿನ ಕೆಲಸದ ಹುಡುಗರು. ಅಷ್ಟರಲ್ಲೇ ಅವರ ಬಾಸ್ ಇಂದ ಫೋನ್ ಬಂತು troubleshoot ಮಾಡಿ ನೋಡಿ circuit ನ ಅಂತ. ಅದರ ಜೊತೆಗೆ 1500 ಮೊದಲು ತೊಗೊಂಡು ನಂತರ troubleshoot ಮಾಡಿ ಎಂಬ ಆರ್ಡರ್ ಸಹ ಬಂದಿತ್ತು. ನನ್ನ ಬಳಿ ಬರಿ 1330ರು ಅಷ್ಟೇ ಇತ್ತು. ಸಂದೀಪ್ ಮುಖ ನೋಡಿದೆ, ಅವನು ತನ್ನಲ್ಲಿದ್ದ 200ರೂ ಕೊಟ್ಟ ತೆಗೆದುಕೊಂಡು ನನ್ನ 30 ನಾನು ಜೇಬಿಗಿಳಿಸಿದೆ. ಅಷ್ಟರಲ್ಲೇ ನಮ್ಮ ಹಣವನ್ನೇ ಬಕ ಪಕ್ಷಿಗಳಂತೆ ನೋಡುತಿದ್ದ ಅವರಿಗೆ 1500 ರು ಕೊಟ್ಟೆ. ಕೊಟ್ಟ ತಕ್ಷಣ ಮಾಡೆಲ್ ತೆಗೆದುಕೊಂಡು power suppy connect ಮಾಡಿ multimeter ಕೈಲಿ ಹಿಡಿದು ಒಂದೊಂದೇ ಪಾರ್ಟ್ ಟೆಸ್ಟ್ ಮಾಡುತ್ತ ಬಂದ. ಒಂದೊಂದು ಪಾರ್ಟ್ ಟೆಸ್ಟ್ ಮಾಡುವಾಗಲು ನಮ್ಮ ಎದೆಯ ಬಡಿತ ತುಸು ಹೆಚ್ಚಾಗುತ್ತಾ ಹೋಗುತಿತ್ತು. ಅ ವ್ಯಕ್ತಿ ಟೆಸ್ಟ್ ಮಾಡುತ್ತ ಮಾಡುತ್ತ regulator ಹೋಗಿದೆ, display ಹೋಗಿದೆ, controller ಹೋಗಿದೆ ಅಂದ. ಹಾಗೆ ಮುಂದುವರೆಸುತ್ತಾ ಇವೆಲ್ಲ 1500 ರಲ್ಲಿ ಬರುತ್ತೆ. ಆದರೆ ಸೆನ್ಸಾರ್ ಹೋದ್ರೆ 9000ರು ಆಗುತ್ತೆ, ನೋಡಣ ಸೆನ್ಸಾರ್ ಕಥೆ ಎನಾಗಿದ್ಯೋ ಅಂತ multimeter ಎತ್ತಿ ಇಟ್ಟು  ಚೆಕ್ ಮಾಡಿದ. ನನಗೆ ನೋಡುವ ಧೈರ್ಯ ಇರಲಿಲ್ಲ, ಆದರು ಮುಖ ಕೈಯಿಂದ ಮುಚ್ಚಿಕೊಂಡು ಕೈ ಬೆರಳುಗಳ ಮಧ್ಯದಿಂದ reading ನೋಡಿದೆ ಅಲ್ಲಿ 11.56 ಎಂದಿತ್ತು. ಕುಕ್ಕರಗಾಲಲ್ಲಿ ಕೂತು reading ನೋಡುತಿದ್ದ ನಾನು ಹಾಗೆಯೆ ಕುಸಿದುಬಿದ್ದೆ ಸೆನ್ಸಾರ್ ಕೇವಲ 5volts ಮಾತ್ರ ತಡೆದುಕೊಳ್ಳುವ ಸಾಮರ್ಥ್ಯ ಇರುವಂಥದ್ದು. ಅದಕ್ಕೆ 11volt voltage ಹೋದರೆ ಒಂದು ಸೆಕೆಂಡ್ ನಲ್ಲಿ ಹಾಳಾಗುತ್ತದೆ ಇನ್ನು ಇದು ಹಲಗದೆ ಇರುವ ಸಾಧ್ಯತೆ ಇಲ್ಲವೇ ಇಲ್ಲ.    ಅಷ್ಟರಲ್ಲೇ ಟೆಸ್ಟ್ ಮಾಡುತಿದ್ದವನು ಹೇಳಿದ ಸೆನ್ಸಾರ್ ಕೂಡ ಢಮಾರ್ ಆಗಿದೆ ಅಲ್ರಿ ಪವನ್ ಅಂತ. ಸಂದೀಪ್ ಮಚ್ಚ, ನನ್ನ ಫ್ರೆಂಡ್ ಹತ್ರ ತಂದಿದ್ದ ಸೆನ್ಸಾರ್ ಹಾಕಿ ನೋಡೋಣ ತಡಿ, ಎಂದು ಅದನ್ನ connect ಮಾಡಿದ ಆದರೆ ಅದನ್ನು ಸಹ circuit detect ಮಾಡಿಲ್ಲ. ಇಷ್ಟು ದಿನದ ಪರಿಶ್ರಮ ಹಾಳಾಗುತ್ತೇನೋ ಅನ್ನೋ ಭಯ ನನ್ನನ್ನು ಆವರಿಸಿತ್ತು.....    

        ಮೊದಲು ಪ್ರಾಜೆಕ್ಟ್ ಮಾಡಬೇಕೆಂದು ಬಂದಾಗ ಬಳುಕುತ್ತ ಕೂತಿದ್ದ ಮಾಡೆಮ್ ಇರಲಿಲ್ಲ. ಮತ್ತು ಬಹಳ ಬುದ್ಧಿವಂತನದ ಮಾತನಾಡಿದ ಸರ್ ಸಹ ಇರಲಿಲ್ಲ. ಹೋಗಲಿ ಕರೆ ಮಾಡಿದ್ರೆ receive ಸಹ ಮಾಡುತ್ತಿರಲಿಲ್ಲ.ಅವರ ಹುಡುಗರ calls ಮಾತ್ರ recieve ಮಾಡುತಿದ್ದರು. ನಮ್ಮನ್ನು ಯಾವುದೊ ಬೇರೆ ಗ್ರಹಗಳ ಪ್ರಾಣಿಗಳಂತೆ ಕಾಣುತಿದ್ದರು ಅನಿಸುತ್ತೆ. ಸರಿ ಅವರ ಆಫೀಸ್ ಹುಡುಗ ಕಾಲ್ ಮಾಡಿದ. ಅಕಡೆಗೆ ಎಲ್ಲ ವರದಿ ನೀಡಿದ. ಅವರು ನಾವೇ ಬಂದು ನೋಡ್ತಿವಿ ರಾತ್ರಿ 9 ಘಂಟೆ ಆಗುತ್ತದೆ ಅಂದರು. ನಾವು ಮಾತಾಡುತ್ತೇವೆ ಎಂದಾಗ ಅ ಹುಡುಗ ಅವಕಾಶ ಕೊಡಲಿಲ್ಲ. ಅವರೇ ಬರ್ತಾರೆ ಈಗ ಮಾಡೆಲ್ ಇಲ್ಲೇ ಇಟ್ಟು ಹೋಗಿ, 7-30 ಗೆ ಮಾಡೆಮ್ ಬರ್ತಾರೆ, 9ಕ್ಕೆ ಸರ್ ಬರ್ತಾರೆ ಅಂದ. ನಾವು ಸರಿ ಹಾಗೆ ಅಗಲಿ ಎಂದು ಮಾಡೆಲ್ ಅಲ್ಲಿಟ್ಟು ಸೆನ್ಸಾರ್ ಮಾತ್ರ ತೆಗೆದುಕೊಂಡು ಹೊರಟೆವು....

         ಆಗ ಸಮಯ ಸಂಜೆ ೬ ಆಗಿತ್ತು, ಜಯನಗರ ೪ನೇ ಬ್ಲಾಕ್ ನಲ್ಲಿನ ಶಾಪಿಂಗ್ complex, ಮಯೂರ ಬೇಕರಿ, hotchips, cooljoint, ಪುಟ್ಟಣ್ಣ ಥಿಯೇಟರ್ ಮಹಡಿ ಮೇಲಿನ airlines ಹೋಟೆಲ್, ನೂತನವಾಗಿ ನಿರ್ಮಾಣವಾಗಿರುವ ಬಸ್ stand,  ಕಚೋರಿ ಸಮೋಸ ವಡಾಪಾವ್ ಅಂಗಡಿಗಳು, ಕೈ ಬಿಸಿ ಕರೆಯುತಿತ್ತು. ಹಾಗೆಯೆ ಒಳಗೊಳಗೇ ಅವುಗಳು ಹಿಂದೆಲ್ಲ ಕಾಲೇಜ್ ಗೆ ಬಂಕ್ ಮಾಡಿ ಇಲ್ಲಿ ಬಂದು, ಅಲೆದಾಡಿ ಟೈಮ್ ಪಾಸು ಮಾಡುತಿದ್ದ ದಿನಗಳನ್ನು ನೆನೆಸುತಿದ್ದವು. ಪಕ್ಕದಲ್ಲೇ ಇದ್ದ ಸಂದೀಪ್ ಮಚ್ಚ ನೆನಪಿದ್ಯ? ರಘು ಬರ್ತಡೆ ಪಾರ್ಟಿ ಇಲ್ಲೇ ಪವಿತ್ರ ಹೋಟೆಲ್ ಮಹಡಿ ಮೇಲಿರುವ B11 pub ಅಲ್ಲಿ ಮಾಡಿದ್ದು ಅಂದ. ಹೌದು ಮಚ್ಚ, ಅದರ ಜೊತೇಲೆ ನೆನೆಪು ಮಾಡ್ಕೋ, ಅವತ್ತು microcontroller ಕ್ಲಾಸ್ 2hours ಕ್ಲಾಸ್ ಇತ್ತು. ಮೇಡಂ ಪ್ರೊಗ್ರಾಮ್ ಹೇಗೆ ಬರಿಯೋದು ಅನ್ನೋ techniques ಹೇಳಿಕೊಡ್ತೀನಿ ಅಂದಿದ್ರು ಅಂದೆ. ಪೆಚ್ಚುಮೊರೆಯೊಂದಿಗೆ ಸಂದೀಪ್ ಹೌದೋ, ಅಂದು ನಾವು classes attend ಮಾಡಿ ಸರಿಯಾಗಿ ಕಲಿತಿದ್ದರೆ ಇಂದು ಬೇರೆಯರ ಬಳಿ ನಮ್ಮ ಪ್ರಾಜೆಕ್ಟ್ ಗೆ ಪ್ರೊಗ್ರಾಮ್ ಬರೆಸುವ ಅವಶ್ಯಕತೆ ಇರ್ತ ಇರ್ಲಿಲ್ಲ. ಅವರಿಗಾಗಿ ನಾಯಿಗಳಂತೆ ಕಾಯುವ ಗೋಜು ಇರುತ್ತಿರಲಿಲ್ಲ ಅಂದ. ಜಯನಗರದಲ್ಲಿ ಕಣ್ಣ ಮುಂದೆ ಕಂಡದ್ದೆಲ್ಲ ಕೊಂಡು ತಿನ್ನುತಿದ್ದ ನಾವು ಅಂದು  1ರುಪಾಯಿ ಗೆ ಎರಡು ಬರುವ ಕಚ್ಚ ಮ್ಯಾಂಗೋ ಚಾಕಲೇಟ್ ಸಹ ತಿಂದಿಲ್ಲ..........

         ಸಮಯ 7-15 ಆಯಿತು, ಹೊರೆಟೆವು ಮತ್ತೆ consultancy ಕಡೆಗೆ. ಅಲ್ಲಿ ಇನ್ನು ಮೇಡಂ ಬಂದಿರಲಿಲ್ಲ ಅಲ್ಲಿನ ಹುಡುಗರು ಕರೆ ಮಾಡಿದ್ರು recieve ಮಾಡುತ್ತಿರಲಿಲ್ಲ, ನಾನು ಒಂದು 50 ರಿಂದ 60 ಸರಿ ಕಾಲ್ ಮಾಡಿದೆ. ರಿಂಗ್ ಆಯಿತೋ ಹೊರತು receive ಮಾಡಿಲ್ಲ. ಕಾಲ್ ಮಾಡಿ ಮಾಡಿ ನನಗೆ ಸಂದೀಪ್ ಗೆ ಬೇಜಾರಾಯಿತು. ಸಮಯ 8 ಆಯಿತು. ಅ ಹುಡುಗರು ಹೊರಟು   ಬಿಟ್ಟರು. ಇಲ್ಲೇ ಕಾಯ್ತಾ ಇರಿ, ಸರ್ ಅಗಲಿ, ಮೇಡಂ ಅಗಲಿ ಬಂದೆ ಬರುತ್ತಾರೆ ಅಂದ್ರು. ನಮಗೆ ನಂಬಿಕೆ ಇಲ್ಲದಿದ್ದರೂ ನಂಬಲೇ ಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಆಯಿತು ಎಂದು ಹೇಳಿ cosultancy ಮುಂದಿನ ರಸ್ತೆಯಲ್ಲಿ ಓಡಾಡುತಿದ್ದೆವು. ಮೊದಲೇ ಅದು ಜಯನಗರದ ಪ್ರಸಿದ್ಧ ಬಡಾವಣೆ, ಅಲ್ಲಿನ ಜನರೆಲ್ಲಾ ನಮ್ಮನ್ನು ಕಳ್ಳರಂತೆ ನೋಡುತಿದ್ದರು. ಯಾರದ್ರು  ಏನಾದ್ರು ಅಂದುಕೊಳ್ಳಲಿ ಎಂದು ರೋಡಲ್ಲೇ ಓಡಾಡುತಿದ್ದೆವು. ಅಲ್ಲಿಯವರೆಗೂ ಇರದಿದ್ದ ಹೊಟ್ಟೆ ಒಳಗಿದ್ದ ಕಿರ್ ಕಿರ್ ಮಾಮ ಕಿರುಚಲು ಪ್ರಾರಂಭಿಸಿದ್ದ. ನನ್ನ ಬಳಿ ೩೦ರು ಮಾತ್ರ ಇತ್ತು ಅಲ್ಲಿ ಒಂದು ತಳ್ಳೋ ಗಾಡಿಯ ಮೇಲೆ ಇಡ್ಲಿ ಮಾರುತಿದ್ದರು. ೪ ಇಡ್ಲಿ ಗೆ ೨೦ರುಪಾಯಿ, ಬೆಂಗಳೂರಿನ ಮಟ್ಟಿಗೆ ಬಹಳ ಕಡಿಮೆ ಅ ರೇಟು. ೬ ಇಡ್ಲಿ ತೆಗೆದುಕೊಂಡು ೩ ನಾನು ೩ ಸಂದೀಪ್ ತಿನ್ನುತಿದ್ದೆವು,  ಅಷ್ಟರಲ್ಲಿ ೯ ಘಂಟೆ ಆಗಿತ್ತು. ನಮ್ಮ consultancy ownwer ಅಲ್ಲಿ ಬೈಕ್ ನಲ್ಲಿ pass ಅದ ಹಾಗೆ ಅನಿಸಿತು. ನೋಡಿದೊಡನೆ ತಿನ್ನುತಿದ್ದ ಕಡೆಯ ಇಡ್ಲಿಯ ಅರ್ಧ ಉಳಿದಿತ್ತು. ಅಷ್ಟನ್ನು ಒಟ್ಟಿಗೆ ಬಾಯಿಗೆ ಹಾಕಿಕೊಂಡು ಓಡಿದೆವು.....

          ಸರ್ ಸರ್ ಎಂದು consultancy ಒಳಗೆ ಮಕ್ಕಳಂತೆ ಓಡಿದೆವು. ನಮ್ಮನ್ನು ನೋಡಿದ ಅವನು ಸ್ವಲ್ಪ ಅಸಡ್ಡೆಯಿಂದ, ಹಂಗಿಸುವ ರೀತಿಯಲ್ಲಿ, ಏನ್ರಿ ಪವನ್, ಏನ್ರಿ ಆಯಿತು ನಿಮ್ಮ ಪ್ರಾಜೆಕ್ಟ್ ಗೆ ಅಂದ. ಗೊತ್ತಿಲ್ಲ ಸರ್, ಏನಾಯಿತೋ ಇದ್ದಕಿದ್ದಂಗೆ ವರ್ಕ್ ಆಗ್ತಿಲ್ಲ ಅಂದೆ. ಯಾರ ಹತ್ರ ಇತ್ತು ಮಾಡೆಲ್ ಅಂದ. ನಾನು ಸಂದೀಪ್ ಹತ್ರ ಸರ್ ಅಂದೆ, ರೀ ಇವರು ಮೊದಲೇ ಸ್ವಲ್ಪ ಗಾಬರಿ ವ್ಯಕ್ತಿ ಅವರ ಹತ್ರ ಏನಕ್ರಿ ಕೊಟ್ರಿ ಅಂದ. ಸಂದೀಪ್ ಗೆ ಕೋಪ ನೆತ್ತಿಗೇರಿತ್ತು, ನಿಜ ಹೇಳಬೇಕೆಂದರೆ ಸಂದೀಪ್ ೬ ಅಡಿ ಎತ್ತರದ ಅಜಾನುಬಾಹು, ಅವ ತಿರುಗಿ ಒಂದೇ ಒಂದು ಏಟು ಬಲವಾಗಿ ಕೊಟ್ಟರೆ consultancy owner ಗೊಟಕ್ ಎಂದುಬಿಡುತಿದ್ದ. ಆದರೆ ನಮಗೆ ಅವನಿಂದ ಕೆಲಸ ಆಗಬೇಕಿತ್ತು. ನಮ್ಮಗಳ ಭವಿಷ್ಯ ಅ ವ್ಯಕ್ತಿ ರೆಡಿ ಮಾಡಿಕೊಡುವ ಮಾಡೆಲ್ ಮೇಲಿತ್ತು, ಅದ್ದರಿಂದ ಸಂದೀಪ್ ಹಲ್ಲುಗಳನ್ನು ಬಿಗಿಯಾಗಿ ಕಡಿಯುತ್ತ adopter ನಲ್ಲಿ  ಹೈ voltage ಬಂದು ಹೀಗಾಯಿತು ಸರ್ ಅಂದ. ಆದ್ರೆ ಏನ್ರಿ ಮಾಡೋದಿವಾಗ, ಒಟ್ಟು 9000 ಖರ್ಚಾಗುತ್ತದೆ ಅಂದ.ಅದಕ್ಕೆ ಸರ್, ನಮ್ಮ ಸೆನ್ಸಾರ್ ಒಂದು ಸರಿ ನೋಡಿ ಸರ್ ಅಂದೆ. ಅದಕ್ಕವನು, ರೀ ನಾವು ಲೋಕಲ್ ಪ್ರಾಜೆಕ್ಟ್ ಮಾಡೋದೇ ಇಲ್ಲ ರೀ, ನಂದು high resolution ಸೆನ್ಸಾರ್ ಅದಕ್ಕೆ ತಕ್ಕ ಹಾಗೆ ಪ್ರೊಗ್ರಾಮ್ ಮಾಡಿದ್ದೇವೆ ಇವೆಲ್ಲ ಆಗಲ್ಲ ಅಂದ. ಆಗಾಗಲೇ ೧೦ ಘಂಟೆ ಆಗಿತ್ತು ಸರ್ ಹಣ ಬೆಳಿಗ್ಗೆ ತಂದು ಕೊಡೋದ ಸರ್ ಅಂದೆ. ಅದಕ್ಕೆ ಅವನು ಏನು ತೊಂದರೆ ಇಲ್ಲ ಬೆಳಿಗ್ಗೆ 8 ಘಂಟೆಗೆ ತಂದುಕೊಡಿ, ನಿಮಗೆ ಮಾಡೆಲ್ ೧೨ ಘಂಟೆ ಅಷ್ಟರಲ್ಲಿ ರೆಡಿ ಮಾಡಿ ಕೊಡ್ತೀನಿ ಅಂದ. ಸರ್ 12 ಘಂಟೆಗೆ ಪರೀಕ್ಷೆ ಸರ್ ನನಗೆ ಅಂದೆ. ಅದಕ್ಕೆ ನಾ ಏನ್ರಿ ಮಾಡಕ್ಕಾಗುತ್ತೆ, ಸೆನ್ಸಾರ್ ತುಂಬಾ sensitive ಅಂತ ಗೊತ್ತಲ್ಲ, ಹುಷಾರಾಗಿ ಇಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ, ಹೆಚ್ಚೆಂದರೆ 11 ಗಂಟೆಗೆ  ಕೊಡ್ತೀನಿ ಅಂದ. ಇನ್ನೇನು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಮ್ಮದು, ಸರಿ ಸರ್ ಹಾಗೆ ಅಗಲಿ ಎಂದು ತಲೆ ಆಡಿಸುತ್ತ ಮನೆಗಳಿಗೆ ಹೊರೆಟೆವು. ಜಯನಗರದಿಂದ ನಮ್ಮನೆಗೆ 40km. ಸಂದೀಪ್ ಶಿವಾಜಿನಗರ್ ಗೆ ಹೊರಟ, ನಾನು ನಮ್ಮನೆಗೆ ಹೊರಟೆ ದಾರಿಯಲ್ಲಿ ಗಾಡಿ ಓಡಿಸುತ್ತಲೇ ನನ್ನ ಬೇರೆ batchmate ಗಳಾದ ರಘು ಮತ್ತು ಮಂಜುಗೆ ಫೋನ್ ಮಾಡಿದೆ. ರಘು ಮಗಾ ಈಗ ಹಣ ಇಲ್ಲ ನೀನು ಅಡ್ಜಸ್ಟ್ ಮಾಡಿರು ನಾ ಮತ್ತೆ ಕೊಡ್ತೀನಿ ಅಂದ ಮಂಜು 3 ಸಾವಿರ ಇದೆ ಕೊಡ್ತೀನಿ ಅಂದ. ನನ್ನ ಬಳಿ ಅಪ್ಪ ಕೊಟ್ಟಿದ್ದ ಹಣದಲ್ಲಿ 1000 ಇತ್ತು. ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಸಾಗರ್ ನೆನಪಾದ, ಪ್ರೀತಿಯ ಗೆಳೆಯ ಸಾಗರ್ ಗೆ ಕರೆ ಮಾಡಿದೆ. ಅವನು ಏನೋ ಮಗ ಇಷ್ಟ ಹೊತ್ತಲ್ಲಿ ಅಂದ, ಸಾಗರ್ ವ್ಯವಹಾರಸ್ಥ, ಚೀಟಿ ಗಿಟಿ ಏನೇನೋ ಬಿಸಿನೆಸ್ ನಡೆಸ್ತಾನೆ. ನಾನು ಮಗ ಸಾಗರ್ ತುಂಬಾ ದೊಡ್ಡ ಪ್ರಾಬ್ಲಮ್ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದೀನಿ ಅರ್ಜೆಂಟ್ ಆಗಿ 5 ಸಾವಿರ ಬೇಕು ಅಂದೆ. ಸ್ವಲ್ಪವು ಯೋಚನೆ ಮಾಡದೇ ಗೆಳೆಯ ಸಾಗರ್ ಬೆಳಿಗ್ಗೆ 6 ಘಂಟೆ ಒಳಗೆ ಮನೆಗೆ ಬಾ ಮಗ ಕೊಡ್ತೀನಿ ಆಮೇಲೆ ನಾ ಹೊಸಕೋಟೆಗೆ ಹೋಗಬೇಕು ಅಂದ. ಅ ಕ್ಷಣದಲ್ಲಿ ನನಗೆ ಸಾಗರ್ ಒಬ್ಬ ಗೆಳೆಯ ಮಾತ್ರ ಅಲ್ಲ ದೇವರಾಗಿಬಿಟ್ಟಿದ್ದ. ಮನೆಗೆ ಹೋಗೋ ಅಷ್ಟರಲ್ಲಿ ಸಮಯ ೧೧-೩೦ ಆಗಿತ್ತು. ಅಮ್ಮ ಊಟ ಮಾಡೋ ಅಂದ್ರು, ಬೇಡಮ್ಮ ಮನಸಿಲ್ಲ ಅಂತ ರೂಮೊಳಗೆ ಹೊಕ್ಕು ಮಲಗಿದೆ. ನಿದ್ದೆ ಬಾರದಿದ್ದರೂ ಅ ದಿನ ಅಷ್ಟೆಲ್ಲ ಓಡಾಡಿದ್ದ strain ನನಗೆ ಘಾಢವಾದ ನಿದಿರೆಯನ್ನು ತರಿಸಿತ್ತು.  

          ಬೆಳಿಗ್ಗೆ 5-00ಘಂಟೆ, ನಿದಿರೆಯಿಂದ ಏಳುವ ಮನಸಿರಲಿಲ್ಲ, ಆದರೆ ಇದ್ದಕಿದ್ದಂತೆ ಪ್ರಾಜೆಕ್ಟ್ ನೆನಪಾಗಿ ಥಟ್ ಎಂದು ಎದ್ದು ಕೂತೆ.ಎದ್ದೊಡನೆ ಸ್ನಾನ ಮಾಡಿ ರೆಡಿ ಆಗಿ 5-45 ಕ್ಕೆ ಮನೆ ಬಿಟ್ಟೆ. ಅಪ್ಪ ಮಾತನಾಡಿಸಿದರು, ಏನಾಯಿತೋ ಮಗನೆ ಪ್ರಾಜೆಕ್ಟ್ ಅಂದರು. ನಡೆದ ಕಥೆಯನ್ನೆಲ್ಲ ಹೇಳಿದೆ ನನ್ನ ಕಷ್ಟ ನೋಡಲಾರದೆ ಹಣ ಬೇಕೇನೋ ಅಂದ್ರು. ಹಣ ಬೇಕಿತ್ತು, ಆದರು ನನ್ನ ಸ್ವಾಭಿಮಾನ ಬೇಡ ಎಂದು ಹೇಳಿತು.ಸಾಗರ್ ಮನೆ ಬಳಿ ಹೋಗಿ ಹಣ ಪಡೆದುಕೊಂಡೆ, ಮಂಜು ರೂಂ ಬಳಿ ಹೋಗಿ ಅಲ್ಲೂ ಹಣ ಪಡೆದುಕೊಂಡೆ. ಮತ್ತೆ ಗಾಡಿಗೆ 200ರು ಪೆಟ್ರೋಲ್ ತುಂಬಿಸಿಕೊಂಡು 8 ಘಂಟೆ ಒಳಗೆ consultancy reach ಆದೆ. ಸಂದೀಪ್ ಸಹ ಅ ಸಮಯಕ್ಕೆ ಬಂದ. ಹೋಗಿ ನೋಡಿದರೆ ನಮ್ಮ consultancy ಸರ್ ಇನ್ನು ಮಲಗಿದ್ದ, ನಾನು ಬಾಗಿಲು ಬಡಿದು ಎಬ್ಬಿಸಿದೆ. ಏನ್ರಿ ಇಷ್ಟ ಬೇಗ ಬಂದುಬಿತ್ತಿದ್ದಿರ ಅಂದ ಆಕಳಿಸುತ್ತಾ, ಮನಸಲ್ಲೇ ನನ್ ಮಗನೆ ನನ್ನ ಜಾಗದಲ್ಲಿ ನಿನಿದ್ದಿದ್ರೆ ಗೊತ್ತಿರೋದು ಅಂದುಕೊಂಡು ಸರ್, exam ಗೆ ಇನ್ನು ಬರಿ 4 ಘಂಟೆ ಮಾತ್ರ ಉಳಿದಿದೆ ಸರ್. ದಯವಿಟ್ಟು ರೆಡಿ ಮಾಡಿಕೊಡಿ ಸರ್ ಅಂದೆ. ಸರಿ ನೀವು 11-30ಗೆ ಬನ್ನಿ, ನಾನು ರೆಡಿ ಮಾಡಿ ಇಟ್ಟಿರುತ್ತೇನೆ ಅಂದ. ಸರ್ 12ಕ್ಕೆ ಪರೀಕ್ಷೆ ಸರ್ 10-30 ಅಷ್ಟರಲ್ಲಿ ಕೊಡಿ ಪ್ಲೀಸ್ ಎಂದು ಅಂಗಲಾಚಿದೆವು. ಸರಿ ನೀವು ಬನ್ನಿ ನೋಡೋಣ ಅಂದ. ದೇವರನ್ನು ನೆನೆಯುತ್ತ ಸರಿ ಸರ್ ಅಂತ ಹೊರಟ್ವಿ, ಅಷ್ಟರಲ್ಲಿ ರೀ ಪವನ್ ಅಂದ. ಸರ್ ಏನ್ ಸರ್ ಅಂದೆ ದುಡ್ಡು ಕೊಡ್ರೀ, ಹಾಗೆ ಹೊರಟುಬಿಟ್ರೆ ಸೆನ್ಸಾರ್ ಹೇಗೆ ತರೋದು ಅಂದ. ಅ ಕ್ಷಣದಲ್ಲಿ ನನ್ನ ಕಣ್ಣಿಗೆ ಅವ ಕುರಿ ಕಡಿಯುವ ಕಟುಕನಂತೆ, ನಾವೆಲ್ಲ ಅವನ ಮುಂದೆ ಬಗ್ಗಿ ನಿಂತ ಅಮಾಯಕ ಕುರಿಗಳಂತೆ ಅನ್ನಿಸಿತು. ಜೇಬಿನಲ್ಲಿದ್ದ 9000 ವನ್ನು ಕೊಟ್ಟೆ, ನಿಮ್ಮ ಕೆಲಸ ಆಯಿತು ಅಂದ್ಕೊಳ್ರಿ 10-30ಗೆ ಬನ್ನಿ ಅಂದ. ಸರಿ ಅಂತ ಅಲ್ಲಿಂದ ಹೊರಗೆ ದೇವರನ್ನು ನೆನೆಯುತ್ತ ಹೊರೆಟೆವು. 

          ಸಮಯ 10 ಆಗಿತ್ತು,  ಅಷ್ಟರಲ್ಲಿ ರಘು ಮತ್ತು ಮಂಜು ಕಾಲೇಜ್ ಬಳಿ ಹೋಗಿ slides ಓದುತಿದ್ದರು. ನಾನು ಮತ್ತು ಸಂದೀಪ್ ಕೂಡ ಜಯನಗರದ ಒಂದು ಗಣಪತಿ ದೇವಾಲಯದ ಆವರಣದಲ್ಲಿ ಕೂತು, ಭಗವಂತನನ್ನು ಪ್ರಾರ್ಥಿಸುತ್ತ ರಿಪೋರ್ಟ್ ಓದುತ್ತಿದ್ದೆವು. ಸೆಮಿನಾರ್ ಗೆ ಪ್ರಿಪೇರ್ ಆಗುತ್ತಿದ್ದೆವು. ಆಗಾಗ ಗಡಿಯಾರ ನೋಡುತ್ತಾ, 10 -30 ಆಗುವುದನ್ನೇ ಎದುರು ನೋಡುತಿದ್ದೆವು. 10 -30 ಆಯಿತು ತಕ್ಷಣ ಎದ್ದು ಓಡಿದೆವು consultancy ಕಡೆಗೆ, ಆದರೆ ಅಲ್ಲಿ ಇನ್ನು ಸರ್ ಬಂದಿರಲಿಲ್ಲ. 
ಒಂದು 10 ಸಲಿ ಕರೆ ಮಾಡಿದೆ. ಒಮ್ಮೆ recieve ಮಾಡಿ ಬರ್ತಾ ಇದೀನಿ ಅರ್ಜೆಂಟ್ ಮಾಡಬೇಡಿ ಮಾಡಿದ್ರೆ, ಕೆಲಸ ಆಗೋದು ಕಷ್ಟ ಅಂದ. ಆಯಿತು ಸರ್ ಬೇಗ ಬನ್ನಿ disturb ಮಾಡಲ್ಲ ಅಂದೆ. ಮತ್ತೆ ಕಾಯುತ್ತ ಗಡಿಯಾರ ನೋಡುತ್ತಾ ಕೂತಿದ್ದೆವು. ಸಮಯ 11 ಘಂಟೆ ಆಯಿತು exam ಗೆ ಇನ್ನು ಕೇವಲ 1 ಘಂಟೆ ಮಾತ್ರ ಉಳಿದಿತ್ತು. ನಮ್ಮ ಕಾಲೇಜ್ ಗೆ ಅಲ್ಲಿಂದ ನನ್ನ ಡ್ರೈವಿಂಗ್ನಲ್ಲಿ ಅ heavy traffic ನಲ್ಲಿ 1 ಘಂಟೆ 15 ನಿಮಿಷ ಬೇಕೇಬೇಕು. ಅಷ್ಟರಲ್ಲೇ ಸರ್ ಮತ್ತು ಮೇಡಂ ಬಂದರು ಬಂದೊಡನೆ ಎಲ್ಲ ಪಾರ್ಟ್ಸ್ replace ಮಾಡಿ, ಮತ್ತೊಮ್ಮೆ microcontroller ಗೆ ಪ್ರೊಗ್ರಾಮ್ dump ಮಾಡಿದರು. ಮೂರೂ ನಾಲ್ಕು ಸಾರಿ  dump ಮಾಡಿದರೂ ವರ್ಕ್ ಆಗಲಿಲ್ಲ. ನಾ ಒಮ್ಮೆ ಸಂಕಟ ಬಂದಾಗ ವೆಂಕಟ ರಮಣ ಎಂಬಂತೆ ಅಪ್ಪ ವೆಂಕಟೇಶ, ಮಾಡೆಲ್ ವರ್ಕ್ ಅಗಲಿ ಬಂದು ಮುಡಿ ಕೊಡುತ್ತೇನೆ ಎಂದು ಹರಕೆ ಮಾಡಿಕೊಂಡೆ. ಮತ್ತೊಮ್ಮೆ dump ಮಾಡಿದಾಗ ಇದ್ದಕಿದ್ದಂತೆ ಮಾಡೆಲ್ ವರ್ಕ್ ಮಾಡಲು ಶುರು ಮಾಡಿತು.  ಒಂದು ಸಾರಿ ಪ್ರಪಂಚವೇ ಗೆದ್ದಂತ ಅನುಭವ ಆಗಿತ್ತು, ನನಗೆ ಅತ್ತಕಡೆ ರಘು ಪದೆಪದೆ ಫೋನ್ ಮಾಡುತಿದ್ದ, ಅವನಿಗೆ ಫೋನ್ ಮಾಡಿ ಮಾಡೆಲ್ ರೆಡಿ ಆಗಿದೆ ಒಂದು ಅರ್ಧ ಘಂಟೆ ಲೇಟ್ ಆಗಿ ಬರಲು permission ತೊಗೋ ಅಂತ ಹೇಳ್ದೆ. ಅವನು ಅಲ್ಲಿ external ಹತ್ರ ಮಾತಾಡಿ ನಮ್ಮ ಕಷ್ಟವನ್ನ ವಿವರಿಸಿದ್ದಾನೆ, ಅವರು ಕರುಣೆ ತೋರಿಸಿ ಆಯಿತು ಎಂದಿದ್ದಾರೆ. ಇಷ್ಟೆಲ್ಲಾ ಆಗಿ ಹೊರಡುವಷ್ಟರಲ್ಲಿ ಸಮಯ 11 -50 ಆಗಿತ್ತು, ಇನ್ನು 10 ನಿಮಿಷದಲ್ಲಿ ಕಾಲೇಜ್ ಸೇರುವುದು ಅಸಾಧ್ಯವಾದ ಮಾತು. ಶಿವಾಜಿನಗರದ ಗಲ್ಲಿ ಗಲ್ಲಿಯಲ್ಲೂ ತಿರುಗಿಸಿ ಗಾಡಿ ಓಡಿಸಿದ ಅನುಭವ ಇದ್ದ ಸಂದೀಪ್ ಗೆ ಗಾಡಿ ಓಡಿಸುವ ಹೊಣೆ ಕೊಟ್ಟೆ. ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಒಮ್ಮೆ ಅಂಜನೇಯ ಎಂದು ಕೂಗಿದೆವು, ಸಂದೀಪ್ ಗಾಡಿಯ ಕಿಕ್ಕರ್ ಬಲವಾಗಿ ಒದ್ದ, ಒಂದೇ ಕಿಕ್ಕಿಗೆ ಗಾಡಿ ಶುರು ಆಯಿತು.ಜಯನಗರದ ಗಲ್ಲಿಗಳಲ್ಲಿ ಸರ್ರ್ ಸರ್ರನೆ ತಿರುಗಿಸಿ ಹೊರಟ ಸಂದೀಪ್ ಅ ಕ್ಷಣದಲ್ಲಿ ಒಂದು ಕಡೆ ಮ್ರುತ್ಯುವಾಗಿಯೂ, ಮತ್ತೊಂದು ಕಡೆ ರಕ್ಷಕನಾಗಿಯು ಕಂಡಿದ್ದ......  
      
            ನಮ್ಮ batch ನ ಇತರ ಹುಡುಗರು ಪರೀಕ್ಷೆಗೆ ಹೊರಟು ಬಿಟ್ಟಿದ್ದರು. ಸಂದೀಪ್ NH 7 highway ಗೆ ಬಂದ,  ಆಗ ಸಮಯ 12-10 ಆಗಿತ್ತು ಇನ್ನು 20 ನಿಮಿಷದಲ್ಲಿ 30km, ಅದು ಹೇಗೆ ಓಡಿಸುತ್ತಾನೋ ಗೊತ್ತಿಲ್ಲ. ಎಲೆಕ್ಟ್ರೋನಿಕ್ ಸಿಟಿ flyover ಮೇಲಿನ ವೇಗದ ಮಿತಿ 80, ಆದರೆ ಒಂದು ಸೆಕೆಂಡ್ ಸಹ 110ಕಿಂತ ಕಡಿಮೆ ಮಾಡಿಲ್ಲ ಸಂದೀಪ್.  flyover ಕೆಳಗಿನ ಟೋಲ್ ನಲ್ಲಿ ಸಾಲು ವಾಹನಗಳು ನಿಂತಿದ್ದವು, ಓಡಿ ಹೋಗಿ ಟೋಲ್ ಬೂತ್ ಅಲ್ಲಿ ಕೂತಿದ್ದ ವ್ಯಕ್ತಿಗೆ, ಅಣ್ಣ ಪರೀಕ್ಷೆ ಇದೆ ಸೈಡ್ ಅಲ್ಲಿ ಹೋಗ್ತಿವಿ ಟಿಕೆಟ್ ನೋಡಿ ಅಂದೆ.ಅವನಿಗೆ ಕರುಣೆ ಉಕ್ಕಿ ಬಂದು ಸೈಡ್ ಅಲ್ಲಿ ಜಾಗ ಮಾಡಿಕೊಟ್ಟ. ಅಲ್ಲಿಂದ ಹೊರಗೆ ಬಂದಮೇಲೆ  ಮತ್ತೆ ಲಾರಿಗಳ ಬಸ್ಸುಗಳ ಮಧ್ಯ, ಸೊಂದಿಗೊಂದಿಯಲ್ಲೆಲ್ಲ ತೂರಿಸಿ ಸಂದೀಪ್ 12 -30 ಕ್ಕೆ ಕಾಲೇಜ್ ಗೇಟ್ ಬಳಿ ಸೇರಿಸಿದ. ನಾ ಎಂದು ಅಷ್ಟು ರಿಸ್ಕ್ ತೆಗೆದುಕೊಂಡು ಡ್ರೈವ್ ಮಾಡಿಲ್ಲ, ಅಂತ ಡ್ರೈವರ್ ಗಳ ಹಿಂದೆ ಕೂರುವುದಕ್ಕೂ ಭಯ ನನಗೆ, ಆದರೆ   ಅ ಕ್ಷಣದಲ್ಲಿ ನಾನು ಮತ್ತು ಸಂದೀಪ್ ನಮ್ಮ ತಂದೆ ತಾಯಂದಿರಿಗೆ ಒಬ್ಬೊಬ್ಬರೇ ಮಕ್ಕಳು ಅನ್ನೋದು ಮರೆತು ಹೋಗಿತ್ತು. ಗಾಡಿ ನಂದಲ್ಲ ಶಿವುದು ಅನ್ನೋದು ಮರೆತುಹೋಗಿತ್ತು. ಇವೆಲ್ಲದರ ನಡುವೆ  exam ಹಾಲ್ ಗೆ ಹೋಗುವಷ್ಟರಲ್ಲಿ ೧೨-೪೦ ಆಗಿತ್ತು. ಅಷ್ಟರಲ್ಲಿ ನಮ್ಮ batch ನ ಹುಡುಗರು ಸೆಮಿನಾರ್ ಶುರು ಮಾಡಿದ್ದರು, ಬೇರೆ batch ನ ಹುಡುಗರು ನಮ್ಮನ್ನು ಹೀರೋ ಗಳಂತೆ ಸ್ವಾಗತಿಸಿದರು. ಹೆಬ್ಬರಳನ್ನು ಉದ್ದಗೆ ಮಾಡಿ welldone ಅಂದರು. ನಾವು ಸಹ ಸೆಮಿನಾರ್ ಚೆನ್ನಾಗಿ ಕೊಟ್ಟೆವು, ಮಾಡೆಲ್ ಚೆನ್ನಾಗಿ ವರ್ಕ್ ಆಯಿತು. ನಮ್ಮ presentation ಸಹ ಚೆನ್ನಾಗಿ ಇತ್ತು. external ಇಂಟರ್ನಲ್  ಇಬ್ಬರು ಖುಷಿಯಾದರು. ನಮ್ಮ batch ಗೆಲ್ಲ ಬಹಳ ಸಂತೋಷವಾಯಿತು, ನನಗು ಕೂಡ ಇಂಜಿನಿಯರಿಂಗ್ ಮುಗಿಯಿತೆಂಬ ಖುಷಿ ಆಯಿತು. ಅ ಖುಷಿಯಲ್ಲೇ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ. ಆದರೆ ಅ ನಿಟ್ಟುಸಿರಿನಲ್ಲಿ ಇನ್ನು ಮುಂದೆ ಎಂದು consultancy ಗಳ ಸಹವಾಸ ಬೇಡ ಅನಿಸಿತ್ತು. ನನ್ನ ಪರೀಕ್ಷೆ ಬಗ್ಗೆ ಕೇಳಿದ ಕೆಲವು juniors ಗು ಅದೇ ಹೇಳಿದೆ. ಎಷ್ಟೇ ಆದರು " ನಾವು ಕಷ್ಟ ಪಟ್ಟು ಕೆಲಸ ಮಾಡದೇ ಹೋದರೆ ದೇವರೇ ಕಷ್ಟ ಕೊಟ್ಟು ಕೆಲಸ  ಮಾಡಿಸುತ್ತಾನೆ " ಎಂಬುದಕ್ಕೆ ನನ್ನ  ಈ 22 ಘಂಟೆಗಳೇ ಒಂದು ಅಧ್ಬುತವಾದ ಉದಾಹರಣೆ, ಇನ್ನೊಂದು ವಿಷಯ ಗೆಳೆಯರೇ ಅಂದಹಾಗೆ ನಾನು ತಿರುಪತಿ ಗೆ ಹೋಗಿ ಬಂದಿದ್ದು ಆಯಿತು ಮುಡಿ ಕೊಟ್ಟಿದ್ದು ಆಯಿತು ಈಗ ನಾನು ಬೋಡಗುಂಡ ಹೆಹೆಹೆ  :) :)

ಓದುಗ ಮಿತ್ರರಿಗೆ ನನ್ನೊಂದು ಪ್ರಶ್ನೆ, ನೀವು ಇಂಜಿನಿಯರಿಂಗ್ ಮಾಡಿದ್ದಲ್ಲಿ ನಿಮ್ಮ ಪ್ರಾಜೆಕ್ಟ್ ಸ್ವಂತದ್ದ ?? consultancy ದ???


         *****************************************************************     
              
        


  

Monday, June 13, 2011

ಸ್ವಲ್ಪವಾದರೂ ಸಭ್ಯತೆ ಇರಲಿ.........!!!

         ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಓಡಾಡಬೇಕಾದ ಅನಿವಾರ್ಯತೆ ಬಂದಿತ್ತು. ಪ್ರಾಜೆಕ್ಟ್  ವರ್ಕ್ ಭೂತ ತಲೆಯ ಮೇಲೆ ಕೂತಿತ್ತು ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಕೆಲಸ ಅದು, ಇಂಜಿನಿಯರಿಂಗ್ ಮುಗಿದು ಹೋಯ್ತು ಅಂತ ಅಂದುಕೊಳ್ಳುತ್ತಿರುವಾಗಲೇ ಇದೊಂದು ಕೆಲಸ ಬಾಕಿ ಇದೆ ಎಂದು ಆಗಾಗ ಮೊಟಕುವ ಕುಟುಕುವ ವಸ್ತು ಈ ಪ್ರಾಜೆಕ್ಟ್ ವರ್ಕ್.
         
         ಅದೇ ಗುಂಗಿನಲ್ಲಿ ಮಡಿವಾಳ ಸಿಲ್ಕ್ ಬೋರ್ಡ್ ಅಲ್ಲಿ 201 no ಬಸ್ ಹತ್ತಿದೆ. ಅದೇನೋ ನನ್ನ ಅದೃಷ್ಟ ಬಸ್ ಖಾಲಿ ಖಾಲಿ ಆಗಿತ್ತು. ಬಂದು ಹಿಂದಿನ ಸೀಟ್ ಅಲ್ಲಿ ಕಿಟಕಿ ಪಕ್ಕ ಕೂತೆ. ೪೦ ರುಪಾಯಿ ಕೊಟ್ಟು ಪಾಸು ತೆಗೆದುಕೊಂಡರೆ ಇಡಿ ಬೆಂಗಳೂರೇ ತಿರುಗಬಹುದಾದ ಒಂದು ಸೌಕರ್ಯ ನಿಮಗೆಲ್ಲ ಗೊತ್ತಿರುವಂತೆ ಇಲ್ಲಿದೆ. ನಾನು ಅ ಪಾಸ್ ಖರೀದಿಸಿಯೇ ಓಡಾಡುತಿದ್ದೆ. ಬಸ್ ನಲ್ಲಿ ಕಡೆಯ ಸೀಟ್ ಅಲ್ಲಿ ಯುವ ಜೋಡಿಯೊಂದು ಕೂತಿತ್ತು.ನನ್ನ ಪಕ್ಕ ಒಬ್ಬ ತಾತ ಬಂದು ಕೂತರು, ಸುತ್ತಲು ಒಂದಷ್ಟು ಹಿರಿಯರು ಇದ್ದರು. ನನಗೋ, ಎಲ್ಲರಿಗು ಇದ್ದಂತೆ ಆ ಯುವ ಜೋಡಿಯನ್ನು ನೋಡುವ ಕುತೂಹಲ, ಅ ಕುತೂಹಲದಿಂದಲೇ ಆಗಾಗ ಮೆಲ್ಲಗೆ ಅವರಿಗೆ ತಿಳಿಯದಂತೆ ಅವರನ್ನು ಗಮನಿಸುತ್ತ ಇದ್ದೆ. ನಾ ಮಾತ್ರ ಅಲ್ಲ ಅಲ್ಲಿದ್ದ ಎಲ್ಲರು ತಮ್ಮ ಗಮನವನ್ನು ಅ ಕಡೆ ಇಟ್ಟುಕೊಂಡೆ ಇದ್ದರು. ಕ೦ಡಕ್ಟರ್ ಟಿಕೆಟ್ ಕೊಡುವ ನೆಪದಲ್ಲಿ ಆಗಾಗ ಹಿಂದೆ ಬಂದು ಮುಖ ಸಿಂಡರಿಸುತ್ತ  ಹೋಗುತಿದ್ದ. ನನಗಂತೂ ಇನ್ನು ಕುತೂಹಲ ಹೆಚ್ಚಾಯಿತು. ಇನ್ನು ಸ್ವಲ್ಪ ಗಮನಿಸಿದೆ ಅ ಹುಡುಗ ಹುಡುಗಿಯ ಹೆಗಲ ಮೇಲೆ ಕೈ ಹಾಕಿಕೊಂಡಿದ್ದ, ಆಗಾಗ ಕಿವಿಯಲ್ಲಿ ಏನೇನೋ ಹೇಳುತಿದ್ದ, ಒಂದೆರಡು ಬರಿ ಮುತ್ತನ್ನು ಕೊಟ್ಟ. ಹೀಗೆ ಒಂದೆರಡು ಸ್ಟಾಪ್ ಆದಮೇಲೆ ಕ೦ಡಕ್ಟರ್ ಬಂದವನೇ, ಎದ್ದೆಲ್ರಿ ಮೇಲೆ ನೀವು ಅಂದ, ಅದಕ್ಕವರು ಯಾಕೆ ಅಂತ ಬಲು ದರ್ಪದಿಂದ ಕೇಳಿದರು ಅದಕ್ಕೆ ನಮ್ಮ ಕ೦ಡಕ್ಟರ್, ನಾನು ನೋಡ್ತಾನೆ ಇದೀನಿ ಆಗ್ಲಿಂದ ಏನು ನೀವು ಮಾಡ್ತಿರೋ ಕೆಲಸ?? ಇದೆಲ್ಲ ಮಾಡೋಹಾಗಿದ್ರೆ ಲಾಲ್ ಭಾಗೋ ಕಬ್ಬನ್ ಪರ್ಕೋ ಹೋಗಿ, BTS ಬಸ್ ಏನು ಬೆಡ್ ರೂಂ ಅಂದುಕೊಂಡಿದ್ದಿರ ಅಂತ ಸರಿಯಾಗಿ ಚಾರ್ಜ್ ತೊಗೊಂಡ. ಅಷ್ಟರಲ್ಲೇ ಅಲ್ಲಿದ್ದ ಜನರು ಕೂಡ ಏನಮ್ಮ , ನಿನಗಾದ್ರು ಮಾನ ಮರ್ಯಾದೆ ಇಲ್ವಾ ಎಲ್ಲಿರೋದು ನಿಮ್ಮ ಮನೆ, ಏನು ನಿಮ್ಮ ತಂದೆ ಹೆಸರು ಅಂತ ಎಲ್ಲ ಪ್ರಶ್ನೆ ಮಾಡಲು ಶುರು ಮಾಡಿದ್ದರು. ಅಷ್ಟರಲ್ಲೇ ಮುಂದಿನ ಸ್ಟಾಪ್ ಬಂದಿತ್ತು ಇಬ್ಬರು ಇಳಿದು ಏನು ಮಾತನಾಡದೆ ಕಾಲುಕಿತ್ತರು. 

         ಅವರಿಬ್ಬರೂ ಪ್ರೆಮಿಗಳಾಗಿರಬಹುದು. ಎರಡು ದೇಹ ಒಂದೇ ಅತ್ಮವಾಗಿರಬಹುದು ಆದರೆ ಅದನ್ನು ತೋರ್ಪಡಿಸಿಕೊಳ್ಳುವಂತ ಸ್ಥಳ ಅದಲ್ಲ.ಸಾರ್ವಜನಿಕ ಸ್ಥಳಗಳಲ್ಲಿ ಅಷ್ಟೊಂದು ಪ್ರೀತಿಯ ನಿವೇದನೆ ಮಾಡಬಾರದು ಅನ್ನುವುದು ನನ್ನ ಅಭಿಪ್ರಾಯ. ಅವರು ಇಳಿದು ಹೋದಮೇಲೆ ಅ ಕ೦ಡಕ್ಟರ್ ಹೇಳಿದರು ಸರ್ ಅವರದ್ದು ಎಲ್ಲಿ ಬೇಕಾದರು ಓಡಾಡಬಹುದಾದಂತ ಪಾಸು, ಕಾಲೇಜ್ ಗೆ ಹೋಗದೆ ಬಸ್ ಗಳಲ್ಲಿ ಕಡೆಯ ಸೀಟ್ ಗಳಲ್ಲಿ ಕೂತು ತಿರುಗಾಡುವುದೇ ಇವರ ಕೆಲಸ. ನಾನು ಆಗಾಗ ನೋಡುತ್ತಿರುತ್ತೇನೆ, ಆದರೆ ನನಗ್ಯಾಕೆ ಅವರಿವರ ತಂಟೆ ಎಂದು ಏನು ಕೇಳುತ್ತಿರಲಿಲ್ಲ. ನನಗೂ  ಅ ಹುಡುಗಿಯದೆ ವಯಸ್ಸಿನ ಮಗಳಿದ್ದಾಳೆ, ಒಮ್ಮೊಮ್ಮೆ ಭಯವಾಗುತ್ತದೆ ಸರ್ ಇಂತವರನ್ನ ನೋಡಿದ್ರೆ ಅಂದ. ಖಂಡಿತ ಅವನ ಮನಸ್ಸಿನ್ನಲಿ ಎಷ್ಟು ಭಯ ಹುಟ್ಟಿರಬಹುದಲ್ವಾ?? 
           
          ಇಂಥಹ ಕೆಲವು ಯುವ ಪ್ರೇಮಿಗಳಿಂದ ಇಡೀ ಪ್ರೇಮಿಗಳ ಸಮಾಜವೇ ಮುಜುಗರಕ್ಕೊಳಗಾಗಬಹುದಲ್ವೆ?? ಪ್ರೀತಿಸುವುದು ತಪ್ಪಲ್ಲ, ಆದರೆ ನಿಮ್ಮ ಪ್ರೀತಿ ತೋರ್ಪಡಿಕೆಯದ್ದಾಗದಿರಲಿ. ನಾಲ್ಕು ಜನ ಇದ್ದಾರೆ ಅವರ ಮುಂದೆ ನನ್ನ ಗೆಳತಿ ಅಥವಾ ಗೆಳೆಯ ನನ್ನ ಮುದ್ದಿಸಬೇಕು, ನನಗೆ ತಿನ್ನಿಸಬೇಕು ಎಂದೆಲ್ಲ ನಿರೀಕ್ಷೆ ಬೇಡ. ಒಂದು ಪಕ್ಷ ಮದುವೆಯಾಗಿದ್ದಲ್ಲಿ  ನಿಮಗಿಷ್ಟ ಬಂದಂತೆ ಇರಬಹುದಂತೇನಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಕ್ಕ ಜನರಿದ್ದಾರೆ ಎಂಬ ತಿಳುವಳಿಕೆಯಿಂದ ವರ್ತಿಸಿದರೆ ಸಾಕು. ಇಷ್ಟು ಮಾತ್ರವಲ್ಲದೆ ಬೆಂಗಳೂರಿನ ಯಾವ ಮಾಲ್ಗಳಿಗೆ ಹೋದರು ಪ್ರೇಮಿಗಳದೆ ಕಾರುಬಾರು, ಯಾವ ಪಾರ್ಕ್ ಗಳಿಗೆ ಹೋದರು ಪ್ರೆಮಿಗಲದೆ ದರ್ಬಾರು. ಇತ್ತೀಚಿಗೆ ಪ್ರೇಮ ಫಲಿಸಲಿ ಎಂದೋ ಏನೋ ದೇವಾಲಯಗಳಲ್ಲೂ ತುಂಬಿಕೊಂಡಿರುತ್ತಾರೆ. ಅವರು ಎಲ್ಲಿ ಬೇಕಾದರೂ ಇರಲಿ ಆದರೆ ಹೇಗೆ ಬೇಕಾದರೂ ಇರುವುದು ಬೇಡ. ನಾ ಇಲ್ಲಿ moral policing  ಮಾಡುತ್ತಿಲ್ಲ. ಸಮಾಜದಲ್ಲಿ ಸ್ವಲ್ಪವಾದರೂ ಸಭ್ಯತೆ ಕಾಣಲಿ ಎಂಬ ಬಯಕೆ ಅಷ್ಟೇ. ಹಾಗಂತ ಎಲ್ಲರು ಹೀಗೆ ಇರುವುದಿಲ್ಲ. ಇರಲಿ ಎಲ್ಲಾ ಕಡೆ  ಪ್ರೇಮಿಗಳು, ಆದರೆ  ಅವರ ಮನಸ್ಸಿನಲ್ಲಿ, ಸುತ್ತಲು ತಮ್ಮ ತಂದೆ ತಾಯಂದಿರ ವಯಸ್ಸಿನ ಜನ ಇರುತ್ತಾರೆ, ತಾತಂದಿರು ಅಜ್ಜಿಯಂದಿರು ಇರುತ್ತಾರೆ, ತಮಗಿಂತ ಪುಟ್ಟ ಮಕ್ಕಳು ಇರುತ್ತಾರೆ ಅವರ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಅವರು ತಮ್ಮ ಬಗ್ಗೆ ಯಾವ ರೀತಿ ಆಲೋಚಿಸಬಹುದು ಎಂಬುದರ ಅರಿವಿರಲಿ. ಅಯ್ಯೋ ಯಾರು ಏನು ಅಂದುಕೊಂಡರೆ ನಮಗೇನು ಎಂಬ ಉಡಾಫೆ ಬೇಡ. ಪ್ರೇಮಿಗಳಿಗೆಲ್ಲ ನನ್ನ ಪ್ರೀತಿಯ ಕಡೆಯ ವಿನಂತಿ,

ಮಿಡಿಯುವ ಮನಸುಗಳು ಎಂದೆಂದು ಇರಲಿ
ಪ್ರೇಮಿಗಳ ಕನಸುಗಳು ನನಸಾಗುತಿರಲಿ
ನಿಮ್ಮಗಳ ಪ್ರೇಮಕ್ಕೆ ಎಂದು ತೊಡಕಾಗದಿರಲಿ   

                                           " ಸ್ವಲ್ಪವಾದರೂ ನಿಮ್ಮ ಪ್ರೇಮದಲ್ಲಿ ಸಭ್ಯತೆ ಇರಲಿ "       

Saturday, June 4, 2011

ಹನುಮಪ್ಪನೆ ಆಗಿರಲಿ ಹಿಮಾಂ ಸಾಭಿಯೇ ಆಗಿರಲಿ

           ಜನ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹೋರಾಟ ಮಾಡಿದ್ರು , ಮೇಧಾ ಪಾಟ್ಕರ್ ಹೋರಾಟಗಳನ್ನ ಮಾಡುತ್ತಲೇ ಇರ್ತಾರೆ 2G  ಹಗರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸುಬ್ರಮಣ್ಯನ್ ಸ್ವಾಮಿ ಅವರ ಹೋರಾಟವೇ ಕಾರಣ ಈಗ ತಾನೆ ಮಿಲಿಂದ್ ಸೋಮನ್ ಹಸಿರು ಕ್ರಾಂತಿ ಮಾಡಲು 531km ಓಟ ಮುಗಿಸಿದ್ದಾರೆ ಇನ್ನು ಎಷ್ಟೋ ಹೋರಾಟಗಳು ನಡಿತನೆ ಇರುತ್ತವೆ ಆದರೆ ಈಗ ಬಾಬಾ ರಾಮದೇವ್ ಹೋರಾಟ ಮಾಡಲು ಪ್ರಾರಂಭ ಮಾಡಿದ ತಕ್ಷಣ ಈ  ಮಾಧ್ಯಮಗಳು ಏಕೆ ಅದಕ್ಕೆ ಕೋಮುವಾದದ ಬಣ್ಣ ಹಚ್ಹುತ್ತಿವೆಯೋ ಅ ದೇವರೇ ಬಲ್ಲ times now ನ ಅರ್ನಬ್ ಗೋಸ್ವಾಮಿ ಇರಬಹುದು ಅಥವಾ CNN ನ ರಾಜ್ದೀಪ್ ಸರ್ದೇಸಾಯಿ ಇರಬಹುದು ಶಾರುಕ್ ಖಾನ್ ಸಲ್ಮಾನ್ ಖಾನ್ ಶೋಭಾ ಡೆ ಮುಂತಾದ ಸೆಲೆಬ್ರಿಟಿಗಳು ಆಗಿರಬಹುದು ಬಾಬಾ ರಾಮದೇವ್ ಮಾಡುತ್ತಿರುವುದು ನಾಟಕ ಅವರಿಗೆ ಯೋಗ ಹೇಳಿಕೊಡುವುದು ಬಿಟ್ಟು ಇ ಕೆಲಸ ಯಾಕೆ ಅಂತ ಕೇಳುತಿದ್ದಾರೆ .ಕಾಂಗ್ರೆಸ್ಸ್ ನ ದಿಗ್ವಿಜಯ್ ಸಿಂಗ್ ಅಂತು ಘಂಟೆಗೊಂದು statement ರಾಮದೇವ್ ವಿರುದ್ದ ನೀಡುತಿದ್ದಾರೆ  ಆದರೆ ಅತ್ತ ಅವರ ಪಕ್ಷದ ಹಿರಿಯ ಸಚಿವರೆಲ್ಲ ಬಾಬ ಅವರನ್ನ ಮೀಟ್ ಮಡಿ compromise ಅಗೋ ತಂತ್ರ ಹೆಣೆಯುತಿದ್ದಾರೆ  

          ಇಷ್ಟಕ್ಕೂ ಮಾಧ್ಯಮದವರು ಕೋಮುವಾದದ ಬಣ್ಣ ಕಟ್ಟುತ್ತಿರುವುದು ಯಾಕೆ ರಾಮದೇವ್ ಅವರು ಕಾವಿ ವಸ್ತ್ರ ಧರಿಸಿ ಮರದ ಪಾದರಕ್ಷೆ ಧರಿಸಿದ್ದಾರೆ ಅಂತಲೇನು?? ಭ್ರಷ್ಟಾಚಾರದ ವಿರುದ್ದ ಹೋರಾಡಲು ಕಾವಿಯದರೇನು ಕಪ್ಪು ವಸ್ತ್ರವಾದರೇನು 
ಮರದ ಚಪ್ಪಲಿ ಅದರೇನು ADIDAS ಶೂ ಅದರೇನು ಭಾರತದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ಎಲ್ಲ ಡಾಕುಮೆಂಟ್ ಸರಿ ಇದ್ದರು ಪೋಲಿಸ್ ಗಾಡಿ ಅಡ್ಡ ಹಾಕಿದ ಮೇಲೆ 50Rs ಲಂಚ ಕೊಟ್ಟ ಪ್ರತಿಯೊಬ್ಬ ನಾಗರಿಕನಿಗೂ ಅವಾಜ್ ಹಾಕುವ ತಾಕತ್ತಿದೆ. ಇ ಎಲ್ಲ ಭಾರತದ ಪ್ರಜೆಗಳಲ್ಲಿ ಬಾಬಾ ರಾಮದೇವ್ ಸಹ ಒಬ್ಬರು ಎಂದು ಏಕೆ ಮಾಧ್ಯಮದವರು ಬಿಂಬಿಸಬಾರದು? ಮಾಧ್ಯಮಗಳಲ್ಲಿ ಅಪ ಪ್ರಚಾರ ಮಡಿ ಹೋರಾಟಕ್ಕೆ ತೊಡಕು ಮಾಡಲು ಕಾಂಗ್ರೆಸ್ ಗೆ ಸಹಾಯ ಮಾಡುವ ತಂತ್ರವಾ? ರಾಜಕೀಯ ವ್ಯಕ್ತಿಗಳಿಗೆ ಹೋರಾಟದಲ್ಲಿ ನಿಷೇಧ ಇದೆ ಆದ್ದರಿಂದ ಇ ಹೋರಾಟದಲ್ಲಿ ಯಾವುದೇ ಪಕ್ಷಗಳಿಗೆ ಲಭವಂತು ಇಲ್ಲ ಇ ಹೋರಾಟದ ಯೆಶಸ್ಸಿನಿಂದ ಲಾಭವಗೋದು ನಾಗರಿಕರಿಗೆ. ಆದರೆ ವಿರೋಧ ಪಕ್ಷದಲ್ಲಿರುವ BJP ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೇ ಕಪ್ಪು ಹಣವನ್ನು ತರುವ ಪ್ರಸ್ತಾವನೆ ಮಾಡಿತ್ತು ಈಗ ಬೆಂಬಲ ಸೂಚಿಸಿದೆ ಅದಕ್ಕೆ ಮಾಧ್ಯಮಗಳ ಕಣ್ಣಿಗೆ ಬಾಬಾ ರಾಮದೇವ್ BJP ಏಜೆಂಟ್ ಆಗಿದ್ದಾರೆ  

          ಬಾಬ್ರಿ ಮಸಿದಿ ಧ್ವಂಸ ಮಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ವಿ ಒಬ್ಬರು ಬಂದು ಹೋರಾಟದಲ್ಲಿ ಭಾಗಿಯಾಗಿದ್ದಾರೆ  ಅದಕ್ಕೆ ಬಾಬಾ ರಾಮದೇವೆ ಹೋಗಿ ಬಾಬ್ರಿ ಮಸಿದಿ ಧ್ವಂಸ ಮಾಡಿರುವ ರೀತಿಯಲ್ಲಿ ಬಿಂಬಿಸುತ್ತಿವೆ ಇ ಮಾಧ್ಯಮಗಳು. ಯಾಕೆ, ಅ ಪ್ರಕರಣದಲ್ಲಿ ಭಾಗಿಯಾದವರಿಗೆ ಭ್ರಷ್ಟಾಚಾರದ ವಿರುದ್ದ ಹೊರಡುವ ಹಕ್ಕಿಲ್ಲವೇ?RSS ಮತ್ತು VHP  ಬೆಂಬಲ ಸೂಚಿಸಿದೆ ಅಂತ ಪದೇ ಪದೇ ಹೇಳುತ್ತಿರುವ ಮಾಧ್ಯಮಗಳ ಕಣ್ಣಿಗೆ ಪಕ್ಕದಲ್ಲಿರುವ ಮುಸ್ಲಿಂ ಸಿಖ್ ಮತ್ತು Crishtian ಧರ್ಮ  ಗುರುಗಳು ಕಾಣುತ್ತಿಲ್ಲವೇ? ಅವರೆಲ್ಲರನ್ನು ತೋರಿಸಿ ಇದು ಸರ್ವ ಧರ್ಮಗಳ ಹೋರಾಟ ಎಂದು ಹೇಳಬಹುದಗಿತ್ತಲ್ಲ ... 

        ಬಾಬಾ ಮನಸ್ಸಿನಲ್ಲಿ ನೂರೆಂಟು ಅಸೆಗಲಿರಬಹುದು ರಾಜಕೀಯದ ಹತ್ತಾರು ಕನಸುಗಳಿರಬಹುದು ಆದರೆ ಸಧ್ಯಕ್ಕೆ ಅವರು ಮಾಡುತ್ತಿರುವ ಕೆಲಸ ಒಳ್ಳೆಯದೇ ಅಲ್ಲವೇ ?ಅಷ್ಟೆಲ್ಲ ಒರಟಾಗಿ ಮಾತನಾಡುವವರು ತಾವೇ ಯಾಕೆ ಉಪವಾಸ ಸತ್ಯಾಗ್ರಹ ಕೂರಬಾರದು ? ಮಾಧ್ಯಮಗಳಲ್ಲಿ ಬಂದು ದೊಡ್ಡದಾಗಿ ಭಾಷಣ ಬಿಗಿಯುವವರು ತಾವೇ ಹೋರಾಟ ಮಾಡಲಿ . ನಮ್ಮಂತ ಸಾಮಾನ್ಯರಿಗಂತೂ ಕೋಮುವಾದದ ಅರಿವಿಲ್ಲ ಸತ್ಯಾಗ್ರಹ ಒಳ್ಳೆಯ ವಿಷಯಗಳ ಬಗ್ಗೆ ಹೋರಾಟ ಮಾಡಲು ಹನುಮಪ್ಪನೆ ಆಗಿರಲಿ ಹಿಮಾಂ ಸಾಭಿಯೇ ಆಗಿರಲಿ  ಬೆಂಬಲ ಇದ್ದಿದ್ದೆ 

                                                                                    ಏನಂತೀರಿ ಗೆಳೆಯರೇ......?????

Monday, May 23, 2011

ಹೋಗುವ ಮುನ್ನ ...........


ಹೋಗುವ  ಮುನ್ನ ............
    ಬಣ್ಣ  ಬಣ್ಣದ  ಮಾತನಾಡಿ, ನಿಮ್ಮ  ಪ್ರೀತಿಯ  ಬಲೆಯಲ್ಲಿ  ನನ್ನೆಲ್ಲ  ಮುಗ್ದತೆಯನ್ನು ಕೆಡವಿದಿರಿ. ನನ್ನ  ಅತಿ ಮಿತಿಮೀರಿದ  ಹುಚ್ಚು  ಪ್ರೀತಿಯನ್ನು  ನಿಮ್ಮ  ಕಾಲಡಿಯಲ್ಲಿ  ಹೊಸಕಿ  ಹಾಕಿ  ಏನೂ  ಅರಿಯದವರ೦ತೆ ನಟಿಸುತ್ತ, ನನ್ನದಲ್ಲದ ತಪ್ಪಿಗೆ ಶಿಕ್ಷೆಯ ಕೊಟ್ಟವರು  ನೀವು. ಹೇಗೆ  ತಾನೇ  ಮರೆಯಲಿ  ನಿಮ್ಮಾ ...?
    ನಿಮ್ಮೆಲ್ಲ ಸಿಹಿನೆನಪುಗಳ  ಜೊತೆ , ನನ್ನೆಲ್ಲಾ  ಮುಗ್ದತೆಯನ್ನ  ದಹಿಸಿದ  ಆ  ಕಹಿಘಳಿಗೆಗಳನ್ನೆಲ್ಲಾ  ಹೊತ್ತೊಯ್ಯುತ್ತಿದ್ದೇನೆ , ಮರಳಿ  ನನ್ನ  ಗೂಡಿಗೆ ... ನಿಮ್ಮೆಲ್ಲಾ  ಕೊಡುಗೆಗಳಿಗೆ ಕಣ್ಣೀರಿನ ಕ೦ದಾಯ ಭರಿಸಿದ್ದೇನೆ .. ಒಲ್ಲದ  ಮನಸಿನ ವಿದಾಯ ತಮಗೆ .....
    ಕೊನೆಯದಾಗಿ ಒ೦ದು ಮನವಿ: ಕಾರಣವೇ ಕೊಡದೆ ನನ್ನ ಬದುಕಿನ ಪುಟಗಳಲ್ಲಿ ಕೊನೆಯ ರುಜು ಮಾಡಬೇಡಿ ....ನಿಮ್ಮ  ಬದುಕಿನ ಎಷ್ಟೋ ಕಳೆದುಹೋದವರ ಪಟ್ಟಿಯಲ್ಲಿ  ಸೇರೋ  ಇಚ್ಛೆ  ಖOಡಿತಾ ನನ್ನಲಿಲ್ಲಾ ......ಆದರೆ ??

                                                                                                  ಗೆಳತಿ ವಿದ್ಯಾಶ್ರಿ ಬರಹ :- 

Wednesday, May 18, 2011

ಸಂಚಾರಿ ನಾನಾದೆ

ಸಂಚಾರಿ ನಾನಾದೆ ನಿನ್ನದೇ ಗುಂಗಿನಲಿ
ಅಲೆಮಾರಿ ನಾನಾದೆ ನಿನ್ನದೇ ನೆನಪಿನಲ್ಲಿ
ನೀನೇಕೆ ಮರೆಯಾದೆ ಬಂದು ನನ್ನ ಬಾಳಿನಲಿ 

ಒಬ್ಬೊಬ್ಬರ ಬದುಕಿನಲಿ ಒಂದೊಂದು ತಿರುವು ಇದೆ
ನನಗ್ಯಾಕೆ ಬದುಕೆಲ್ಲ ಪ್ರೀತೀಲೇ ತಿರುಗುತಿದೆ
ನಮ್ಮಿಬ್ಬರ ನಡುವಲ್ಲಿ ಏನೆಲ್ಲಾ ಕೊರತೆ ಇದೆ 
ನಮಗಂತೂ ತಿಳಿದಿಲ್ಲ ಲೋಕಾನೆ ಹೆದರುತಿದೆ 
ನನ್ನ ಇ ಕಣ್ಣಲ್ಲಿ ಚಿರಕಾಲದ ಕನಸು ಇದೆ 
ಕನಸೆಲ್ಲ ನನಸಾಗಿ ಮಾಡೋ ಛಲವು ಇದೆ 

ಇ ಬಾಳಿನ ಪಯಣದಲಿ ಅಪಘಾತಗಳು ಎಷ್ಟೋ  
ಪ್ರೀತಿಯ ಪಯಣದಲಿ ಬಲಿಯಾದವರು ಎಷ್ಟೋ 
ಗೊತ್ತಿಲ್ಲದ ದಾರಿಯಲಿ ಅಡಚಣೆಗಳು ಎಷ್ಟೋ 
ಗುರಿಯಿಲ್ಲದ ಬದುಕಿನಲಿ ಅವಘಡಗಳು ಎಷ್ಟೋ 
ಮನ ತುಂಬಾ ನಿನ್ನ ನೋಡುವ ಗುರಿಯನ್ನು ಹೊಂದಿದೆ
ನಿನ್ನಯ ಹುಡುಕಾಟಕೆ ಕೊನೆಯೇ ಕಾಣದೆ 

                                                        ಅವಳ ಹುಡುಕಾಟದಲ್ಲಿ  ಪವನ್ :-

Wednesday, May 4, 2011

ಹುಡುಗರ ಮನಸು-7

        ಮನೆಗೆ ಬಂದ ಪ್ರವೀಣನಿಗೆ ಇನ್ನ ಕವ್ಯಾಳದೆ ಗುಂಗು, ಯಾವಾಗ ಈ  ದಿನ ಮುಗಿದು ಹೋಗುತ್ತೋ ನಾಳೆ ಬೇಗ ಬರಲಿ ಅಂತಾನೆ ಕಾಲ ಕಳೆದ, 7 ಘಂಟೆಗೇ ಅಮ್ಮನಿಗೆ ಊಟ ಹಾಕು ಅಂದ ಅಮ್ಮ ಯಾಕೋ ಪ್ರವೀಣ ಎಲ್ಲರ ಜೊತೆ ಊಟ ಮಾಡಲ್ವ ಇವತ್ತು 9 ಘಂಟೆ ತನಕ ಇರೋ ಅಂದ್ರು ಅದಕ್ಕೆ ಪ್ರವೀಣ ಇಲ್ಲಮ್ಮ ನಾಳೆ ಬೆಳಿಗ್ಗೆ ಬೇಗ ಎದ್ದು ಓದಬೇಕು ಅದಕ್ಕೆ ಈಗ ಬೇಗ ಊಟ ಮಡಿ ಮಲಗ್ತೀನಿ ಅಂದ ಅದಕ್ಕೆ ಅಮ್ಮ ಸರಿ ಬಾ ಊಟ ಮಾಡು ಅಂತ ಬಡಿಸಿದರು ಪಟ ಪಟ ಅಂತ ಊಟ ಮಡಿ ಮುಗಿಸಿ ತನ್ನ ಕೋಣೆಗೆ ಹೋಗಿ ಕಾವ್ಯಳ ಕನಸು ಕಾಣುತ್ತ ನಿದಿರಿಗೆ ಜಾರಿದ. 4 ಘಂಟೆಗೆಲ್ಲ ಎದ್ದ ಪ್ರವೀಣ 6 ಘಂಟೆ ಅಷ್ಟು ಹೊತ್ತಿಗೆ ರೆಡಿ ಆಗಿಬಿಟ್ಟಿದ್ದ ಆಗ ತಾನೆ ಎದ್ದ ಅಮ್ಮ ಏನೋ ಪ್ರವೀಣ ಇಷ್ಟು ಬೇಗ ರೆಡಿ ಆಗಿದ್ಯಾ ಇವತ್ತು ಅಂದ್ರು ಆಗ ಪ್ರವೀಣ ಇವತ್ತು ಕಾಲೇಜ್ ನಲ್ಲಿ ಸೆಮಿನಾರ್ ಕೊಡಬೇಕು ಅಮ್ಮ ಅದಕ್ಕೆ ಗೆಳೆಯನ ಮನೆಗೆ ಹೋಗಿ prepare ಆಗ್ತೀನಿ ಅಂದ ಅದಕ್ಕೆ ಅಮ್ಮ ಸರಿ ಅರ್ಧ  ಘಂಟೆ ಅದ್ರು ಇರು ತಿಂಡಿ ಮಾಡಿ ಕೊಡ್ತೀನಿ ಖಾಲಿ ಹೊಟ್ಟೆಲಿ ಹೋಗಬೇಡ ಅಂದ್ರು ಆದರೆ ಪ್ರವೀಣನದೆ ಬೇರೆ ಲೋಕ ಪ್ರೀತಿಯ ಮಾಯೆಯಲ್ಲಿದ್ದ ಪ್ರವೀಣನಿಗೆ ಊಟ ತಿಂಡಿಯ ಅರಿವಿರಲಿಲ್ಲ ನಿದಿರೆಯ ಚಿಂತೆ ಇರಲಿಲ್ಲ ಅವನ ಮನಸ ತುಂಬಾ ಅವಳ ಧ್ವನಿ ಅವಳ ಅಂದ ಚಂದವೇ ಓಡಾಡುತ್ತಿತ್ತು ಅಮ್ಮ ತಿಂಡಿ ಕ್ಯಾಂಟೀನ್ ನಲ್ಲಿ ತಿಂತೀನಿ ಅಂತ ಹೇಳಿ ಹೊರಟೇಬಿಟ್ಟ ಪ್ರವೀಣ.

       ಒಂದು ದಿನ ಒಬ್ಬ ಹುಡುಗಿಯ ಜೊತೆ ಮಾತಾಡಿದ್ದಕ್ಕೆ ಇಷ್ಟೆಲ್ಲಾ ಬದಲಾಗಿದ್ದ 10 ಘಂಟೆ ಗೆ ಇರೋ ಕಾಲೇಜ್ ಗೆ 8 ಘಂಟೆಗೆ ಬಂದು ಕಾಯ್ತಿದ್ದ ಅವಳು ಯಾವಾಗ ಬರ್ತಲೋ ಅವಳನ್ನ ಯಾವಾಗ ನೋಡ್ತಿನೋ ಮಾತಾಡಿಸ್ತಿನೋ ಅನ್ನೋ ಕಾತುರತೆಯಲ್ಲೇ ಕಾಯ್ತಾ ಇದ್ದ ಅಂತು ಇಂತೂ 9-30 ಕೆ ಕಾವ್ಯ ಬಂದಳು ಅಷ್ಟರಲ್ಲಿ ಅವನ ಸ್ನೇಹಿತರ ಗುಂಪು ಸಹ ಬಂದಿತ್ತು ಅವರ ಜೊತೆ ಕಾಲೇಜ್ ಹೊರಗಿನ ಟೀ ಅಂಗಡಿ ಬಳಿ ಮಾತಾಡ್ತಾ ನಿಂತಿದ್ದ ಪ್ರವೀಣ ಇವಳನ್ನ ನೋಡಿದ ತಕ್ಷಣ ಅವರಿಗೆ ಒಂದು ಮಾತು ಹೇಳದೆ ಕಾವ್ಯಳ ಹಿಂದೆ ಹೊರಟು ಬಿಟ್ಟ ಜೊತೆಯಲ್ಲೇ ಇದ್ದ ಒಬ್ಬ ಸ್ನೇಹಿತ ಏನ್ ಮಗ ಎಲ್ಲೋ ಹೊರಟೆ ಅಂತ ಕೇಳಿದ ಅದಕ್ಕೆ ಪ್ರವೀಣ ಮಗ ಕ್ಲಾಸ್ ಅಲ್ಲಿ  ಸಿಕ್ತೀನಿ ಅಂತ ಹೇಳಿ ಕಾವ್ಯಲ ಹಿಂದೆ ಓಡಿದ 
          
                ಅಲ್ಲಿಗೆ ಹೊಸ ಪ್ರಿತಿಗಾಗಿ ಸ್ನೇಹಿತರಿಗೆ ಕೈ ಎತ್ತೋ ಪ್ರೊಗ್ರಾಮ್ ಶುರು ಮಡಿದ ನಮ್ ಪ್ರವೀಣ 

                                                                                                    ಮುಂದುವರೆಯುವುದು :-

Monday, May 2, 2011

ಹುಡುಗರ ಮನಸು-6

         ಆಗ ಪ್ರವೀಣ 2nd ಇಯರ್ Bsc ಓದುತ್ತ ಇದ್ದ ಓದಿನಲ್ಲಿ ಮಾತ್ರ ಅಲ್ಲದೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲೂ ಮುಂದಿದ್ದ ಪ್ರೀತಿ ಪ್ರೇಮದ ಗುಂಗಿರಲಿಲ್ಲ ಯಾವಾಗಲು ಸ್ನೇಹಿತರ ಜೊತೆ ಕೂಡಿ ಮಜಾ ಮಾಡ್ತಿದ್ದ ಆಗಾಗ ಹುಡುಗರೆಲ್ಲ ಸೇರಿ ಟ್ರಿಪ್ ಹೋಗ್ತಿದ್ರು birthday ಪಾರ್ಟಿಗಳು ಮಾಡ್ತಿದ್ರು, ಕ್ಲಾಸ್ ಅಲ್ಲಿ lucturers ನ ರೆಗಿಸ್ತ ಇದ್ದ ಅಷ್ಟೇ ಅಲ್ಲಾ ಎಲ್ಲಾ ಅಧ್ಯಾಪಕರ ಹತ್ತಿರ ಒಳ್ಳೆ ಹೆಸರನ್ನು ಇಟ್ಕೊಂಡಿದ್ದ , ಸ್ವರ್ಗದಂತಿತ್ತು ಅವನ ಬದುಕು ಅ ಸಮಯದಲ್ಲೇ PUC admission ಸ್ಟಾರ್ಟ್ ಆಗಿತ್ತು ಅವನ ಕಾಲೇಜ್ ಅಲ್ಲಿ PUC Bsc Msc ಎಲ್ಲ ಒಂದೇ campus ಅಲ್ಲಿ ಇತ್ತು ಪ್ರತಿ ಬಾರಿ ಕಾಲೇಜ್ ಗೆ ಹೊಸದಾಗಿ ಸೇರೋವರಿಗೆ ಫ್ರೆಷೆರ್ಸ್ ಡೇ ಮಾಡೋದು ಅವರ ಕಾಲೇಜ್ ನ ಅಭ್ಯಾಸ  ಹಾಗೆ ಈ ಬಾರಿ ಫ್ರೆಷೆರ್ಸ್ ಡೇ ಗೆ ಪ್ರೋಗ್ರಾಮ್ಸ್ register ಮಾಡೋ ಜವಾಬ್ದಾರಿ ಪ್ರವಿಣನ ಹೆಗಲ ಮೇಲೆ ಬಂದಿತ್ತು.ಅವನು ಎಲ್ಲಾ ಕ್ಲಾಸ್ ಅಲ್ಲೂ ಹಾಡು ಕುಣಿತ ನಾಟಕ ಮುಂತಾದ ಕಾರ್ಯಕ್ರಮಗಳಿಗೆ ಹೆಸರು ನೋಂದಣಿ ಮಾಡುತಿದ್ದ  ಹಾಗೆ ನೋಂದಣಿ ಮಾಡೋವಾಗ 1st PUC ಅಲ್ಲಿನ ಕ್ಲಾಸ್ ಅಲ್ಲಿ ಒಬ್ಬ ಹುಡುಗಿ ಹಿಂದಿ ಹಾಡೊಂದಕ್ಕೆ ಡಾನ್ಸ್ ಮಾಡುವುದಾಗಿ register ಮಾಡಿದ್ಲು ಪ್ರವೀಣ ಅಲ್ಲಿಯವರೆಗೂ ಯಾವ ಹುದುಗಿನು ಅಷ್ಟು observe ಮಾಡಿರಲಿಲ್ಲ ಅವಳ voice ಸಹಾ ತುಂಬಾ ಚೆನ್ನಾಗಿತ್ತು ಅವಳು ಕೂಡ ತುಂಬಾ ಸುಂದರವಾಗಿದ್ದಳು ಪ್ರವೀಣ ನಿನ್ನ ಹೆಸರು ಅಂದ ಅದಕ್ಕವಳು ಕಾವ್ಯ ಅಂದ್ಲು ಪ್ರವೀಣನಿಗೆ ಒಂಥರಾ ಕರೆಂಟ್ ಶಾಕ್ ಹೊಡೆದ ಹಾಗೆ ಆಯಿತು woooow .... ಯಾವತ್ತು ಯಾವ ಹುದುಗಿನು ಫ್ರೆಂಡ್ ರೀತಿ ಬಿಟ್ಟು ಬೇರೆ ರೀತಿ ನೋಡಿಯೇ ಇರಲಿಲ್ಲದ ಪ್ರವೀಣನಿಗೆ ಅವಳ ನೋಡಿದ ತಕ್ಷಣ love at first sight ಆಯಿತು 
        ಹೆಸರು register ಮಾಡ್ಕೊಂಡು ಕ್ಲಾಸ್ ಇಂದ ಆಚೆ ಬಂದ ಪ್ರವೀಣನಿಗೆ  ಯಾವುದೊ ಹೊಸ ಲೋಕಕ್ಕೆ ಹೋಗಿ ಬಂದ ಅನುಭವ ಆಗಿತ್ತು ಆದ್ರೆ ಅವನಿಗೆ ಗೊತ್ತಿಲ್ಲ ಅವನು ಸ್ವರ್ಗದಿಂದ ನರಕದ ಕಡೆ ಪಯಣ ಶುರು ಮಾಡಿದ್ದಾನೆ ಎಂದು 

                                                                                                               ಮುಂದುವರೆಯುವುದು :- 

Sunday, May 1, 2011

ಹುಡುಗರ ಮನಸು-5

       ಸಂಜೆ ಹೊತ್ತಿಗೆ ಮನೆಗೆ ಬಂದ ಪ್ರವೀಣನಿಗೆ ಮನಸಲ್ಲಿ ಏನೋ ಒಂದು ರೀತಿಯ ನಿರಾಳತೆ ಇತ್ತು. ಅಪ್ಪ ಅಮ್ಮ TV ನೋಡ್ತಾ ಕೂತಿದ್ರು ತಂಗಿ ಪೂಜ ಸಹ ಆಗ ತಾನೆ ಕಾಲೇಜ್ ನಿಂದ ಬಂದು ಕೂತಿದ್ಲು. ಮನೆಯೊಳಗೆ ಬಂದ ಪ್ರವೀಣ ಪೂಜ ನಿರು ತೊಗೊಂಡು ಬ ಅಂದ, ನೀರು ತರಲು ಎದ್ದ ಪುಜಾಳ ಜಡೆ ಎಳೆದು ಚೇಷ್ಟೆ ಮಡಿದ, ಮೊಬೈಲ್ ನ TV ಸ್ಟ್ಯಾಂಡ್ ಮೇಲೆ ಇಟ್ಟು ತಾನು ಅಪ್ಪನ ಪಕ್ಕ ಬಂದು ಕೂತ ಅದಕ್ಕೆ ಅಪ್ಪ ಏನೋ ಮಗನೆ ನಿನ್ ಹೆಂಡತಿನ TV ಮೇಲೆ ಕುಡಿಸಿ ಬಿಟ್ಟೆ ಇವತ್ತು ಅಂತ ರೇಗಿಸಿದರು ಅದಕ್ಕೆ ಪ್ರವೀಣ ಹೇ ಸುಮ್ನೆ ಇರಿ ಅಪ್ಪ ನೀವು ಅಂತ ಅಮ್ಮನ ನೋಡಿ ಏನಮ್ಮ ಸ್ಪೆಷಲ್ ಅಡುಗೆ ಮಾಡಿದ್ಯ ಇವತ್ತು, ಮಧ್ಯಾಹ್ನ ಊಟ ಮಾಡಕ್ ಆಗಿಲ್ಲ ಊಟ ಹಾಕು ಅಂದ ಅದಕ್ಕೆ ಅಮ್ಮ ನಿನಗಿಷ್ಟವಾದ ಬೆಂಡೆಕಾಯಿ ಸಾಂಬಾರ್ ಮಾಡಿದಿನೋ ಪ್ರವೀಣ ಏಳು ಊಟ ಮಾಡು ಅಂದ್ರು ಪ್ರವೀಣ ಅಲ್ಲೇ ಒಂದು ಚಾಪೆ ತೆಗೆದು ನೆಲದ ಮೇಲೆ ಕೂತ. ಅಪ್ಪ ಅಮ್ಮನಿಗೆ ಆಶ್ಚರ್ಯವಾಗಿತ್ತು ಯಾವಾಗ ನೋಡಿದರು ಮೊಬೈಲ್ ನಲ್ಲಿ ಮೆಸೇಜ್ ಮಾಡ್ಕೊಂಡು ಕುರ್ತಿದ್ದ ಮಗ ಅವತ್ತು ಮೊಬೈಲ್ ದೂರ ಇಟ್ಟಿದ್ದ, ಮನೆಗೆ ಬಂದ ತಕ್ಷಣ ಬ್ಯಾಗ್ ಬಿಸಾಕಿ ಉಟಾನು ಮಾಡದೇ ಮೊಬೈಲ್ ತೊಗೊಂಡು ಕಿವಿಗೆ ಇಟ್ಕೊಂಡು ರೂಮಿಗೆ ಹೋದರೆ ಮತ್ತೆ ಆಚೆ ಬರುತಿದ್ದಿದ್ದು ರಾತ್ರಿ ಊಟದ ಸಮಯಕ್ಕೆ , ಅಕಸ್ಮಾತ್ ಹೊರಗಡೆ ಹೋದರೆ ಯಾವ ರೋಡ್ ನಲ್ಲಿ ನಿಂತು ಮಾತಾಡ್ತಾ ಇದಾನೆ ಅನ್ನೋ ಅರಿವೇ ಇರ್ತ ಇರ್ಲಿಲ್ಲ ಆದ್ರೆ ಇವತ್ತು ಎಲ್ಲ ವಿಚಿತ್ರವಾಗಿದ್ಯಲ್ಲ ಅನ್ನೋದೇ ಅವರ ಯೋಚನೆ.
         ಊಟ ಮುಗಿದ ಮೇಲೆ ಪ್ರವೀಣ ತನ್ನ ಫ್ರೆಂಡ್ ಮಹೇಶನಿಗೆ ಫೋನ್ ಮಾಡ್ತಾನೆ ಎಲ್ಲಿದ್ಯಾ ಮಗ ಅಂತ ಮಾತಾಡ್ಕೊಂಡು ಅಲ್ಲೇ ಇರು ಬರ್ತೀನಿ ಅಂತ ಹೇಳಿ ಬೈಕ್ ಏರಿ ಅಪ್ಪ ರಾತ್ರಿ ಊಟದ ಟೈಮ್ ಗೆ ಬರ್ತೀನಿ ಅಂತ ಹೇಳಿ ಹೊರಟ. ಮಹೇಶನ ಮೀಟ್ ಮಡಿದ ಪ್ರವೀಣ ಹಾಗೆ ಅವರ ಫ್ರೆಂಡ್ಸ್ ಎಲ್ಲ ಮಾಮೂಲಾಗಿ ಕೂರುವ ಜಾಗಕ್ಕೆ ( ಅಡ್ಡ ) ಹೋಗಿ ಧಂ ಹೊಡಿತಾರೆ. ಅಲ್ಲಿ ಎಲ್ಲ ಫ್ರೆಂಡ್ಸ್ ಇವನ್ನ ನೋಡಿ ಏನ್ ಮಗ ಎಷ್ಟು ದಿನ ಅದಮೇಲೆ ನಿನ್ ದರ್ಶನ ಅಂತ ಕಿಚಾಯಿಸಿದ್ರು ಅದಕ್ಕೆ ಪ್ರವೀಣ ನಮ್ ಹುಡುಗರನ್ನ ಬಿಟ್ಟು ನ ಎಲ್ಲೋ ಹೋಗ್ಲಿ ಅಂತ ಅವರ ಜೊತೇನೆ ರಾತ್ರಿ ಸುಮಾರು 9 -30 ವರೆಗೂ ಇದ್ದು ಒಬ್ಬರನೊಬ್ಬರು ರೇಗಿಸ್ಕೊಂಡು  ಎಂಜಾಯ್ ಮಾಡ್ಕೊಂಡು ಮನೆಗೆ ಹೊರಟ. ಮನೆಗೆ ಬಂದ ಪ್ರವೀಣನ ನೋಡಿ ಅಪ್ಪ ಹೇಯ್ ಊಟ ಹಾಕೆ ಅಂದ್ರು ಪುಜ ತಟ್ಟೆ ಹಾಕಿದಳು ಮನೆಯವರೆಲ್ಲ ಒಟ್ಟಿಗೆ ಕೂತು ಮುಕ್ತ serial ನೋಡ್ತಾ ಊಟ ಮಾಡಿದರು ಅ ದಿನ ಪ್ರವೀಣನಿಗೆ    ಪ್ರತಿ ದಿನದಂತೆ ಇರಲಿಲ್ಲ, ಯಾಕೋ ಗೊತ್ತಿಲ್ಲ ತುಂಬಾ ಮಾತಾಡ್ತಾ ಇದ್ದ, ಎಲ್ಲರ ಜೊತೆ ತುಂಬಾ ನಗ್ತಾ ಇದ್ದ, ನಿರಾಳವಾಗಿ ಊಟ ಮಾಡಿದ, ಊಟ ಅದ ಮೇಲೆ ರೂಮಿಗೆ ಬಂದ ಪ್ರವೀಣನಿಗೆ ತಾನು 2 ವರ್ಷದಿಂದ ಯಾರದ್ದೋ ಗುಲಾಮನಾಗಿದ್ದೆ ಅನಿಸ್ತು ತನ್ನ ದಿನಚರಿ ನ ಬೇರೆಯವರು ಕಂಟ್ರೋಲ್ ಮಾಡ್ತಾ ಇದ್ರೂ ಅನ್ನೋ ವಿಷಯ ಫ್ಲಾಶ್ ಆಯಿತು. ಅದೇ ಗುಂಗಿನಲ್ಲಿ ಕಣ್ಣು ಮುಚ್ಚಿದ ಪ್ರವಿನನಿಗೆ ನಿರಾಳವಾದ ನಿದ್ದೆ ಬಂತು ಅ ನಿದಿರೆಲಿ ತನ್ನ ಎರಡು ವರ್ಷ ಹಿಂದಿನ ಜೇವನ ಕಣ್ಣಿಗೆ ಕಟ್ಟಿತ್ತು.

                                                     " ಎರಡು ವರೆ ವರ್ಷದ ಹಿಂದೆ "

                                                                                              ಮುಂದುವರೆಯುವುದು :-

Friday, April 29, 2011

ಹುಡುಗರ ಮನಸು-4

        ಬೆಳಗ್ಗೆ ಎದ್ದ ಪ್ರವೀಣ ದೇವರ ಫೋಟೋ ನೋಡಕ್ಕೆ ಮುಂಚೆ ತನ್ನ ಮೊಬೈಲ್ ಫೋನ್ ನೋಡಿದ ಸುಮಾರು 12 text message ಬಂದಿತ್ತು ಎಲ್ಲ forward messages ಕೊನೇಲಿ GM(good morning ), ಆದರೆ ಕಾವ್ಯ ಇಂದ ಒಂದೂ ಸಂದೇಶ ಬಂದಿರಲಿಲ್ಲ . ಪ್ರವಿಣನೆ ಅವಳಿಗೆ ಬೆಳಗಿನ ಶುಭಾಶಯಗಳನ್ನ ತಿಳಿಸುತ್ತ ಒಂದು ಸಂದೇಶ ಕಳಿಸಿದ ಆದ್ರೆ reply ಬಂದಿಲ್ಲ. ಅಪ್ಪ ನೀರು ಕಾಯಿಸಿದ್ರು ಸ್ನಾನ ಮಡಿ ತಿಂಡಿ ಮುಗಿಸಿ ಕಾಲೇಜ್ ಗೆ ಹೊರಟ ಆಗಾಗ ಮೊಬೈಲ್ ನೋಡ್ತಾನೆ ಇದ್ದ ಕಾವ್ಯಳ ಒಂದು ಮೆಸೇಜ್ ಗಾಗಿ ಬಕಪಕ್ಷಿಯಂತೆ ಕಾಯ್ತಾ ಇದ್ದ. ಪ್ರವಿಣನಿಗೆ ಕ್ಲಾಸ್ ನಡೀತಾ ಇತ್ತು ಆಗ ಕಾವ್ಯ ಇಂದ ಒಂದು ಮೆಸೇಜ್ ಬಂತು. ಪ್ರವಿಣನಿಗೆ ಪ್ರಾಣ ಹೋಗುವಾಗ ನೀರು ಸಿಕ್ಕಷ್ಟು ಸಂತೋಷವಾಯ್ತು ಮೆಸೇಜ್ ಅಲ್ಲಿ "ಎಲ್ಲಿದ್ದಿಯ ನಾನು ಕ್ಯಾಂಟೀನ್ ಹತ್ರ ಕಾಯ್ತಾ ಇದೀನಿ ಬೇಗ ಬಾ" ಎಂದಿತ್ತು ಆದ್ರೆ ಪ್ರವಿಣನಿಗೆ ಕ್ಲಾಸ್ ಬಿಟ್ಟು ಹೋಗೋ ಸಾಧ್ಯತೆ ಇರ್ಲಿಲ್ಲ ಅದಕ್ಕೆ ಪ್ರವೀಣ ಇನ್ನು 20 ನಿಮಿಷ wait ಮಾಡು ಕ್ಲಾಸ್ ಬಿಡತ್ತೆ ಬಂದ್ ಬಿಡ್ತೀನಿ ಅಂತ reply ಮಾಡಿದ ಅದಕ್ಕೆ ಕಾವ್ಯ ಅದೆಲ್ಲ ಆಗಲ್ಲ ಈಗಲೇ ಬಂದ್ರೆ ಸಿಕ್ತೀನಿ ಇಲ್ಲ ಅಂದ್ರೆಮನೆಗೆ ಹೋಗ್ತೀನಿ ನಂಗೆ ಕ್ಲಾಸ್ ಇಲ್ಲ ಅಂದ್ಲು. ಪ್ರವೀಣ ತುಂಬಾ ಯೋಚನೆ ಮಡಿ ಸರ್ ಹತ್ರ ಸರ್ ತುಂಬಾ ತಲೆ ನೋವ್ತ ಇದೆ permission ಕೊಡಿ ಸರ್ ಅಂತ ಕೇಳದ ಅದಕ್ಕೆ ಮೇಷ್ಟ್ರು ನಿರಾಕರಿಸಿ ಕೂಡಿಸಿದರು , ಮತ್ತೆ ಕಾವ್ಯ ಮೆಸೇಜ್ ಬಂದಿತ್ತು "ಇನ್ನು ೫ ನಿಮಿಷ ಕಾಯ್ತೀನಿ ಇಲ್ಲ ಅಂದ್ರೆ ಹೋಗ್ತೀನಿ " ಪ್ರವೀಣ ಕಾವ್ಯ ಜಸ್ಟ್ ಹತ್ತು ನಿಮಿಷ ಅಷ್ಟೇ ಪ್ಲೀಸ್ ಹೋಗಬೇಡ ಅಂತ reply ಮಾಡಿದ. ಕಡೆಗೆ ಕ್ಲಾಸ್ 5 ನಿಮಿಷ ಮುಂಚೆನೇ lucturer ಬಿಡ್ತಾರೆ ಕ್ಲಾಸ್ ಬಿಟ್ಟ ತಕ್ಷಣ ಪ್ರವೀಣ ಕ್ಯಾಂಟೀನ್ ಕಡೆ ಓಡುತ್ತಾನೆ ಆದ್ರೆ ಅಲ್ಲಿ ಕಾವ್ಯ ಇರಲ್ಲ ಅಲ್ಲೇ ಇದ್ದ ಅವಳ classmate ಹತ್ರ ಕೇಳ್ತಾನೆ ಅದಕ್ಕವರು ೫ ನಿಮಿಷ ಮುಂಚೆ ಬಸ್ ಸ್ಟಾಪ್ ಹತ್ರ ನೋಡ್ದೆ ಅಂತಾಳೆ . ಪ್ರವೀಣ ಬಸ್ ಸ್ಟಾಪ್ ಕಡೆ ಒಡ್ತಾ ಇದ್ದ ಹಾಗೆ ಓಡೋವಾಗ ತನ್ನ parents ನೆನಪಾದರು ತನ್ನ ಫ್ರೆಂಡ್ಸ್ ನೆನಪಾಗ್ತಾರೆ ಅವರೆಲ್ಲ ತನಗೋಸ್ಕರ ಇರಬೇಕಾದ್ರೆ ತನು ಯಾಕೆ ಇವಳಿಗೋಸ್ಕರ ನಾಯಿ ತರ ಓಡ್ತಾ ಇದೀನಿ ಅನ್ಸಿಬಿಡ್ತು 
ಓಡ್ತ ಇದ್ದ ಪ್ರವೀಣ ಒಂದು ಕ್ಷಣ ನಿಂತು ತಾನು ಅನುಭವಿಸುತ್ತಿರುವ ಮಾನಸಿಕ ಹಿಂಸೆ ಬಗ್ಗೆ ಯೋಚನೆ ಮಾಡಿದ ತಕ್ಷಣ ಕಾವ್ಯಗೆ ಫೋನ್ ಮಾಡಿದ ಕಾವ್ಯ recieve ಮಾಡಿ ನಿಂದು ಯಾವಾಗಲು ಇದೆ ಗೋಳು ಲೇಟ್ ಲೇಟ್ ಹುಡುಗಿನ ಸರಿಯಾಗಿ ನೋಡ್ಕೋಳಕ್ ಆಗದೆ ಇದ್ದ ಮೇಲೆ girlfriend ಏನಕ್ಕ ಬೇಕು ನಿಂಗೆ ನಾನು ಮನೆಗೆ ಹೋಗ್ತಾ ಇದೀನಿ ಬೈ ಅಂದ್ಲು ಅದಕ್ಕೆ ಪ್ರವೀಣ ಇನ್ನು ಮೇಲೆ ನನಗಾಗಿ ಕಾಯೋ ಅಗತ್ಯ ಇಲ್ಲ ಕಾವ್ಯ ಅಂದ ಅದಕ್ಕೆ ಕಾವ್ಯ ಅಂದ್ರೆ ಏನು ನಿನ್ನ ಮಾತಿನ ಅರ್ಥ ಅಂದ್ಲು ಆಗ ಪ್ರವೀಣ ಒಂದು ಮಾತು ಹೇಳಿ ಫೋನ್ disconnect ಮಾಡಿದ 

                                                           " LETS  BREAK UP "

                                                                                               ಮುಂದುವರೆಯುವುದು:-