Monday, February 20, 2012

ಶರಣಾಗತ..!!

ಪ್ರದೀಪ್ ಬಹಳ ದಿನಗಳಾದ ಮೇಲೆ ಪ್ರೀತಂ ನ ಭೇಟಿ ಆಗಿದ್ದ. ಆದರು ಭೇಟಿಯಾಗಿದ್ದ ಜಾಗವಾದರೂ ಯಾವುದು, ಚಾರ್ಮಡಿ ಘಾಟ್. ಘಟ್ಟ ಪ್ರದೇಶದ ತುತ್ತ ತುದಿಯಲ್ಲಿ ಚಾರಣ ಮಾಡುತಿದ್ದ ಪ್ರೀತಂ ಗೆ ಪ್ರದೀಪ್ ಇದ್ದಕಿದ್ದಂತೆ ಕಾಣಿಸಿಕೊಂಡಿದ್ದ. ನೋಡಿದೊಡನೆ ಪ್ರದೀಪ್ ಮತ್ತು ಪ್ರೀತಂ ಇಬ್ಬರು ಸ್ವಲ್ಪ ಗಾಬರಿಯದರು, ಪ್ರದೀಪ್ ಮಗಾ ಪ್ರೀತಂ ಅಂತ ಒಮ್ಮೆಲೇ ಅಪ್ಪಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದ. ಇಬ್ಬರ ಆನಂದಕ್ಕು ಪಾರವೇ ಇರಲಿಲ್ಲ. ಪ್ರೀತಂ ಇನ್ನೇನು, ಏನು ಮಗಾ ಇಲ್ಲಿ ಅಂತ ಕೇಳಬೇಕು, ಅಷ್ಟರಲ್ಲಿ ಅದೇ ಪ್ರಶ್ನೆಯನ್ನ ಪ್ರದೀಪ್ ಪ್ರೀತಂ ಗೆ ಕೇಳ್ದ. ಚಾರಣ ಮಾಡ್ಕೊಂಡು ತಂಡದ ಜೊತೆ ಬಂದಿದ್ದೆ ದಾರಿ ತಪ್ಪಿ ಬಿಟ್ಟೆ ಮಗಾ ಅಂದ ಪ್ರದೀಪನ ಮಾತು ಕೇಳಿ ನಂದೂ ಅದೇ ಕಥೆ ದಾರಿ ತಪ್ಪಿದ್ದಿನಿ. ಬಾ ಒಟ್ಟಿಗೆ ದಾರಿ ಹುಡುಕೋಣ ಎಂದು ಹೇಳುತ್ತಾ, ಹಳೆಯ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ಕಾಡಿನಲ್ಲಿ ನಡೆದರು.

ಪ್ರೀತಂ ಮತ್ತು ಪ್ರದೀಪ್ ಒಂದೇ ಕಾಲೇಜ್ ಒಂದೇ ಕ್ಲಾಸ್ ಒಂದೇ ಬೆಂಚ್, ಹಾಸ್ಟೆಲ್ನಲ್ಲಿ ಸಹ ಒಂದೇ ರೂಂ. ಒಬ್ಬರ ಮಧ್ಯೆ ಒಬ್ಬರಿಗೆ ಗಾಢವಾದ ಸ್ನೇಹವಿತ್ತು, ಪ್ರೀತಂ ನ ತಂದೆ ಒಬ್ಬ ಸರ್ಕಾರೀ ಅಧಿಕಾರಿ. ಮಗನಿಗೆ ದೂರದ ಕಾಲೇಜಿಗೆ ಸೀಟ್ ಸಿಕ್ಕಾಗ ಮಗನ್ನ ಹಾಸ್ಟೆಲ್ ಅಲ್ಲಿ ಇದ್ದು ಓದಲಿ ಅಂತ ಆಸೆಯಿಂದ ಸೇರಿಸಿದ್ದರು. ಹಾಸ್ಟೆಲ್ ಅಲ್ಲಿದ್ದರೆ ಎಲ್ಲ ಜನರ ಮಧ್ಯೆಯೂ ಬೆರೆಯಬಹುದು ಎಲ್ಲರ ಕಷ್ಟ ಸುಖಗಳನ್ನು ತಿಳಿಯಬಹುದು ಎಂಬುದೇ ಅವರ ಅಭಿಪ್ರಾಯ. ಓದಿನಲ್ಲೂ ಪ್ರೀತಂ ಮತ್ತು ಪ್ರದೀಪ್ ಯಾವಾಗಲು ಮುಂದೆ ಇರುತಿದ್ದರು. ಪ್ರೀತಂ ತಂದೆಗೆ ಒಂದು ಆಸೆ, ಮಗ ತನ್ನ ಹೆಸರನ್ನು ಎಲ್ಲು ಬಳಸಿಕೊಳ್ಳಬಾರದೆಂದು. ಅದಕ್ಕೆ ಪ್ರೀತಂ ಬಳಿ ಮಾತು ಸಹ ತೆಗೆದುಕೊಂಡಿದ್ದರು, ಎಂದಿಗೂ ನನ್ನ ಹೆಸರನ್ನು ಕಾಲೇಜ್ ನಲ್ಲಿ ಯಾರಿಗೂ ಹೇಳಬೇಡ ಎಂದು. ಪ್ರೀತಂ ಸಹ ಹಾಗೆ ಇದ್ದ. ಪ್ರೀತಂ ಮತ್ತು ಪ್ರದೀಪ್ ಓದಿನಲ್ಲಿ ಆಟದಲ್ಲಿ ಎಲ್ಲ ಕಡೆಯೂ ಮುಂದುವರೆಯುತ್ತಾ 4ನೆ ಸೆಮಿಸ್ಟರ್ ಮುಗಿಸಿದರು. ಅಷ್ಟರಲ್ಲಿ ಪ್ರದೀಪ್ ನ ತಂದೆ ವಿಧಿಯಾಟಕ್ಕೆ ಸಿಕ್ಕಿ ಅಪಘಾತದಲ್ಲಿ ಮೃತ ಪಟ್ಟಿದ್ದರು.

ಅಪಘಾತ ಮಾಡಿದ ವ್ಯಕ್ತಿ ಪ್ರಭಾವಿ ಆದ್ದರಿಂದ ಆತನಿಗೆ ಶಿಕ್ಷೆ ತಪ್ಪಿ ಹೋಯಿತು. ಮೊದಲೇ ತಾಯಿ ಇಲ್ದ ಪ್ರದೀಪ ತಂದೆಯೂ ಇಲ್ಲದೆ ಅನಾಥನಾಗಿಬಿಟ್ಟ. ತನ್ನ ತಂದೆಯ ಸಾವಿಗೆ ಕಾರಣನಾದ ಪ್ರಭಾವಿ ವ್ಯಕ್ತಿಯ ವಿರುದ್ಧ ಹೋರಾಡಿ ಸೋತು ಸುಣ್ಣವಾಗಿದ್ದ. ಸಮಾಜದಲ್ಲಿ ಬಡವರು ಬದುಕುವುದೇ ತಪ್ಪ ಎಂದು ದೇವರಲ್ಲಿ ಬಹಳ ಬಾರಿ ಪ್ರಶ್ನಿಸಿದ್ದ. ಮತ್ತು ಹಣವಂತರ ಮೇಲೆ ವಿರೋಧಾಭಾಸ ಮನದಲ್ಲಿ ಮೂಡಿಸಿಕೊಂಡಿದ್ದ.  ಮನೆಗೆ ಆಧಾರವಾಗಿದ್ದ ತಂದೆ ಇಲ್ಲದೆ ಪ್ರದೀಪ್ ಓದು ಶೂಲಕ್ಕೆ ಸಿಕ್ಕೋ ಸಾಧ್ಯತೆ ಇತ್ತು. ಆಗ ಗೆಳೆಯ ಪ್ರೀತಂ ಕೈ ಬಿಡಲಿಲ್ಲ, ತನ್ನಪ್ಪನಿಗೆ ವಿಷಯ ತಿಳಿಸಿ ಪ್ರದೀಪ್ ನ ವಿದ್ಯಾಭ್ಯಾಸದ ವೆಚ್ಚ ಭರಿಸಿದ್ದ,.ಕಡೆಯ ಸೆಮಿಸ್ಟರ್ ಅಲ್ಲಂತೂ ಪ್ರೀತಂ ನ ತಾಯಿ ಸಹ ಇವರು ಓದುತಿದ್ದ ಜಾಗಕ್ಕೆ ಬಂದು ಇವರನ್ನು ಹಾಸ್ಟೆಲ್ ಬಿಡಿಸಿ ಮನೆಯಲ್ಲೇ ಇರಿಸಿಕೊಂಡು ಪ್ರದೀಪ್ ನ ಸಹ ತನ್ನ ಮಗನಂತೆ ನೋಡಿಕೊಂಡರು.ಇಬ್ಬರು ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿದರು ಮೊಬೈಲ್ ಕಾಲ ಇಲ್ಲವಾದ್ದರಿಂದ ಮತ್ತೆ ಸಿಗೋಣ ಎಂದುಕೊಂಡು ಹೊರಟರು. ಹೊರಡುವಾಗ ಪ್ರದೀಪ್ ಪ್ರೀತಂ ನ ತಂದೆಯ ಬಗ್ಗೆ ಕೇಳಿದ್ದ ಆದರೆ ಪ್ರೀತಂ ಹೇಳಿರಲಿಲ್ಲ. ಅದೇ ಕುತೂಹಲದೊಂದಿಗೆ ಹೊರ ನಡೆದ ಪ್ರದೀಪ್ ಗೆ ತನ್ನಪ್ಪನನ್ನು ಕಿತ್ತುಕೊಂಡ ಸಮಾಜದ ಬಗ್ಗೆ  ಅಸಮಾಧಾನವಿತ್ತು. ಮತ್ತು ಸೇಡಿನ ತವಕವೂ ಇತ್ತು.

ಇಷ್ಟು ವಿಷಯಗಳನ್ನು ಮೆಲುಕು ಹಾಕಿಕೊಂಡ ನಂತರ ಪ್ರೀತಂ ಪ್ರದೀಪ್ ನ ಕೇಳಿದ. ಏನ್ ಮಗಾ ಪ್ರದೀಪ ಈಗೇನು ಮಾಡ್ತಾ ಇದ್ದೀಯ ಅಂತ. ಆಗ ಪ್ರದೀಪ್, ನಿನ್ನ ಹತ್ರ ಮುಚ್ಚು ಮರೆ ಯಾಕೆ ಗೆಳೆಯ ನನಗೆ ಸಮಾಜದಿಂದ ಆದ ಅನ್ಯಾಯ ನಿಂಗೆ ಗೊತ್ತೇ ಇದೆ, ಅದಕ್ಕೆ ಸೇಡು ತೀರಿಸಿಕೊಳ್ಳುವ ನೆವದಿಂದ ತಿವ್ರಗಾಮಿ ಆಗಿದ್ದೇನೆ. ಹಣವಿರುವರನ್ನು ಕಂಡರೆ ಲೂಟಿ ಮಾಡುತ್ತೇನೆ. ಬಡವರಿಗೆ ಹಂಚುತ್ತೇನೆ. ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸುತಿದ್ದೇನೆ ಎಂದ. ಪ್ರೀತಂ ಅದಕ್ಕೆ ಹಿಂಸೆಯ ಮಾರ್ಗ ಎಷ್ಟು ಸರಿ ಪ್ರದೀಪ್ ಎಂದ. ಅದಕ್ಕೆ ಪ್ರದೀಪ್ ಶಾಂತಿಯಿಂದ ಏನು ಸಾಧಿಸಲಾಗೋದಿಲ್ಲ. ಇಂತಹ ಹಣವಂತರಿಗೆ ಬುದ್ಧಿ ಕಲಿಸಲು ಈ ಮಾರ್ಗವೇ ಸರಿ, ಕೊಂದು ಹಾಕಬೇಕು ಹಣವಂತರನ್ನೆಲ್ಲ ಎಂದ. ಅಷ್ಟರಲ್ಲೇ ಏನೋ ತೋಚಿದಂತಾಗಿ ಅಮ್ಮ ಅಪ್ಪ ಹೇಗಿದ್ದಾರೆ ಎಂದ, ಪ್ರೀತಂ ಸ್ವಲ್ಪ ಬೇಸರದಿಂದ ಅಪ್ಪನ್ನ ಯಾರೋ ಕೊಂದು ಬಿಟ್ರು, ಅಮ್ಮ ಅದೇ ಚಿಂತೆಯಲ್ಲೇ ಹಾಸಿಗೆ ಸೇರಿದ್ದಾಳೆ, ಮನೆಯಲ್ಲಿ ನೆಮ್ಮದಿನೇ ಇಲ್ಲ ಪ್ರದೀಪ್ ಎಂದ. ಪ್ರದೀಪ್ ಪ್ರೀತಂ ಗೆ ಸಾಂತ್ವನ ಹೇಳುತ್ತಾ ಅಪ್ಪನ ಹೆಸರು ಅವರು ಬದುಕಿರೋವರೆಗೂ ಹೇಳಿಲ್ಲ, ಅವರ ಫೋಟೋ ತೋರ್ಸಿಲ್ಲ. ಈಗಾದ್ರು ಹೇಳು ಅವ್ರ ಹೆಸರು ಹೇಳ್ಕೊಂಡು ಮುಂದಿನ ಜೀವನ ನಡೆಸ್ತೀನಿ ಅಂದ. ಪ್ರೀತಂ ಹೌದು ಪ್ರದೀಪ್, ನಿಂಗೆ ಹೇಳ್ಬೇಕು ಹೇಳದೆ ಎಷ್ಟು ದಿನ ಅಂತ ಇರ್ಲಿ ಅವರ ಹೆಸರು ಚಂದ್ರಶೇಖರ್, ತೀವ್ರಗಾಮಿ ನಿಗ್ರಹ ದಳದ ಮುಖ್ಯಸ್ಥರಾಗಿದ್ದರು ಎಂದ. ಆ ಕ್ಷಣ ಪ್ರದೀಪ್ ಗೆ ಆಕಾಶ ತಲೆಯ ಮೇಲೆ ಬಿದ್ದ ಹಾಗಾಯ್ತು ಒಂದು ಕ್ಷಣ ಕುಸಿದು ಬಿದ್ದ.

ಒಮ್ಮೆಲೇ ಪ್ರೀತಂ ನ ಕಾಲು ಹಿಡಿದು, ಕ್ಷಮಿಸು ಗೆಳೆಯ ನಿನ್ನಪ್ಪನ ಕೊಂದಿದ್ದು ನಾನೇ ಎಂದು ಅಂಗಲಾಚಿದ. ಕೈ ತುತ್ತು ಹಾಕಿದ ಅಮ್ಮನ ಹಾಸಿಗೆ ಹಿಡಿಯುವ ಪರಿಸ್ಥಿತಿ ತರಿಸಿದ್ದು ನಾನೇ. ಓದು ನಿಂತು ಹೋಗೋ ಸಮಯದಲ್ಲಿ ಸಹಾಯ ಮಾಡಿದ ದೇವರ ಕೊಂದಿದ್ದು ನಾನೇ, ಎಂದು ಚೀರಲು ಆರಂಭಿಸಿದ. ಪ್ರೀತಂ ಹೇಳು, ಇದಕ್ಕೆ ನಾ ಏನು ಶಿಕ್ಷೆ ಬೇಕಾದರು ಅನುಭವಿಸುತ್ತೇನೆ ಹೇಳು ಏನು ಮಾಡ್ಲಿ ಅಂದ. ಪ್ರೀತಂ ಪ್ರದೀಪ್ ನ ಭುಜವನ್ನು ಹಿಡಿದು, ನಿನ್ನ ಗುಂಪಿನೊಂದಿಗೆ ಎಲ್ಲ ಆಯುಧಗಳೊಂದಿಗೆ ಶರಣಾಗು ಅದೇ ನಿನ್ನ ತಪ್ಪಿಗೆ ಸರಿಯಾದ ಶಿಕ್ಷೆ ಎಂದ. ಸ್ವಲ್ಪ ಹೊತ್ತು ಮೌನವಾದ ಪ್ರದೀಪ್ ಆಯಿತು ಅಂತ ಒಪ್ಪಿ ತನ್ನ ಗುಂಪಿನವರನ್ನೆಲ್ಲ ಸೇರಿಸಿ ಶರಣಾಗುವುದಕ್ಕೆ ಒಪ್ಪಿಸಿದ. ಪ್ರೀತಂ ಅವರ ಶರಣಾಗತಿಗೆ ವೇದಿಕೆ ಸೃಷ್ಠಿ ಮಾಡಿ ಪ್ರದೀಪ್ ನ ಕರೆಸಿದ, ಪ್ರದೀಪ್ ಶರಣಾಗುವ ಮೊದಲು ಕೇಳಿದ, ಗೆಳೆಯ ನೀನೇನು ಕೆಲಸ ಮಾಡುತಿದ್ದೀಯ ಎಂದು. ಅದಕ್ಕೆ ಪ್ರೀತಂ, ನಾನು ತೀವ್ರಗಾಮಿ ನಿಗ್ರಹ ದಳದ ನಾಯಕ, ನೀನು ಕೊಂದ ನಮ್ಮಪ್ಪನ ಕೆಲಸ ನನಗೆ ಬಂದಿದೆ ಎಂದಾಗ ಪ್ರದೀಪನಿಗೆ ಮತ್ತೊಂದು ಶಾಕ್ ಬಿದ್ದಿತ್ತು

Tuesday, February 14, 2012

ಅನುಭವವೇ ನಿನಗೆ ಬದುಕಿನ ಶಾಲೆ

ನೋವೊಂದು ಮನದಲ್ಲಿ ಮನೆಯ ಮಾಡಿತ್ತು
ನಗುವ ಎಳೆಕಡಿದು ಕಲರವವ ತಂದಿತ್ತು
ಅರಳುತಿರೋ ಮೊಗವಂದು ಮುದುಡಿಯಾಗಿತ್ತು
ಅನುಭವವು ಹೊಸದೊಂದು ಪಾಠ ಕಲಿಸಿತ್ತು
ಗೆಲ್ಲೋಕೆ ಇದ್ದಿದ್ದು ನಾಲಕ್ಕೆ ಹೆಜ್ಜೆ
ಒಮ್ಮೆಲೆಗೆ ನೆಗೆದರೆ ಬರಿ ಎರಡೇ ಸಾಕು
ಎಡವಿದರೆ ಒಮ್ಮೆ ಮತ್ತೊಂದು ಹೆಚ್ಚು
ಅದಕೆಂದು ಹೆದರಿ ಕುಳಿತರೆ ಹೇಗೆ.
ಸ್ವಲ್ಪವೇ ನೀ ಮುದುಡಿ ಆಮೇಲೆ ಗರಿಗೆದರಿ  
ಹೆಜ್ಜೆ ಮೇಲೆಜ್ಜೆಯ ಇಡಲುಬಹುದಿತ್ತು
ಎಡವಿದರೆ ಸೋತಂತೆ ತಪ್ಪು ತಿಳಿದೆ ನೀನು
ಅದಕೇನೆ ಗೆಲುವು ಪರರ ಪಾಲಾಗಿತ್ತು
ಕೊಕ್ಕರೆಯು ಎತ್ತರದಿ ನೀರಿನೆಡೆ ಬಂದಾಗ
ಮೀನದು ಸಿಗದೇನೆ ಆಳ ಹೊಕ್ಕಾಗ
ಮುಗಿದು ಹೋಯಿತೇನು ಕೊಕ್ಕರೆಯ ಬಾಳು
ಮತ್ತೊಮ್ಮೆ ಮೀನು ಮೇಲೆ ಬಂದಾಗ
ತೀಕ್ಷ್ಣದ ಕಣ್ಣಿಗೆ ಚುರುಕಾದ ಗುರಿ ನೀಡಿ
ರೆಕ್ಕೆಯ ವೇಗಕೆ ಇನ್ನಷ್ಟು ಬಲ ನೀಡಿ
ಬಿಡದೆ ಹಿಡಿಯಿತು ನೋಡು ಕಲಿ ಅದರ ಛಲವ
ಸೋಲಲ್ಲೂ ಒಮ್ಮೆ ನಗುವ ಸಣ್ಣಗೆ ಬೀರು
ಎಡವಿದರೆ ಮತ್ತೆ ಹೆದರದೇ ಹಾರು 
ಅನುಭವವೇ ನಿನಗೆ ಬದುಕಿನ ಶಾಲೆ
ಅನುದಿನವು ನಿನಗೆ ಗೆಲುವಿನ ಮಾಲೆ
ಸೋತರೆ ಧೃತಿಗೆಡಡಿರಿ ಗೆಲುವಿಗೆ ಮೆಟ್ಟಿಲು ಮಾಡಿಕೊಳ್ಳಿ ಪವನ್ :-
--
regards :-

pavan kumar a n

Monday, February 13, 2012

ಪ್ರೀತ್ಸೋರ ದಿನ ಪ್ರೀತಿಗಾಗೆ ಇರ್ಲಿ……!!

ಪ್ರವೀಣ್, ನಾ ಒಂದು ವಿಷ್ಯ ಹೇಳಲಾ ನಿಂಗೆ, ಬೇಜಾರ್ ಮಾಡ್ಕೊಬಾರದು, ನಿಂಗೆ ಬೆಜಾರಾಗೋಹಾಗಿದ್ರೆ  ನಾ  ಹೇಳಲ್ಲ ಅಂತ  ಕಾವ್ಯ  ಹೇಳಿದಾಗ  ಪ್ರವೀಣನಿಗೆ ಕಾವ್ಯಾಳ ಮನಸಿನಲ್ಲಿ ನನ್ನ ಬಗ್ಗೆ ನನಗೆ ಬೇಜಾರಾಗುವಂತಹವಿಷಯ  ಏನಿರಬಹುದು  ಎಂಬ  ಕುತೂಹಲ ತುತ್ತ ತುದಿ ಮುಟ್ಟಿತ್ತು. ಅದಕ್ಕೆ  ಕಾವ್ಯಳನ್ನ, ಹೇಳು ಕಾವ್ಯ ನೀನು  ಏನೇ  ಹೇಳಿದರು ನಾನು ಬೇಜಾರು  ಮಾಡಿಕೊಳ್ಳಲ್ಲ ಅಂದ, ಅದಕ್ಕೆ ಕಾವ್ಯ, ಪ್ರವೀಣ್ ನೀನು ಅಷ್ಟೇನೂ  ಚೆನ್ನಾಗಿಲ್ಲ ಕಣೋ, ಕುಳ್ಳ,  ಕಲರ್ ಕಮ್ಮಿ, ಸಣಕಲ ಕೂಡ, ಪೆರ್ಸೋನಾಲಿಟಿನೆ ಇಲ್ಲ ನೀನು, ಒಳ್ಳೆ  ಬಟ್ಟೆ  ಹಾಕ್ಕೊಳಲ್ಲ, ನೀನು ಐರನ್ ಮಾಡಿರೋ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಬಂದಿದ್ದಂತೂ  ನಾ ನೋಡೇ ಇಲ್ಲ, ಯಾವಾಗಲು ಗಲೀಜು ಬಟ್ಟೆ ಹಾಕಿರ್ತ್ಯ. ನಮಕ್ಕ ಮೊನ್ನೆ ನಿನ್ ವಿಷ್ಯ ಮನೇಲಿ ಮಾತಾಡೋವಾಗ ಇದೆಲ್ಲ  ಹೇಳಿದಳು, ನಂಗು ಹೌದು ನಿಜ ಅನ್ನಿಸಿತು. ಒಳ್ಳೆ ಮೊಬೈಲ್ ಫೋನ್ ಇಲ್ಲ ಆ  ಡಬ್ಬ  1100  ಎಷ್ಟ್  ಹಳೇದಾಗಿದೆ ನೋಡು. ಕೀ ಪ್ಯಾಡ್ ಎಲ್ಲಾ ಸಮದೋಗಿದೆ. ಪ್ರದೀಪ್ ಹತ್ರ ಟಚ್ ಸ್ಕ್ರೀನ್ ಮೊಬೈಲ್  ಇಸ್ಕೊಂಡು  ಅವನ girlfriend ಮೇಘ ವೀಡಿಯೊ ನೋಡ್ತಾ ಹಾಡು ಕೇಳ್ತಾ ಕೂತಿರ್ತಾಳೆ. ಬೇಕು ಬೇಕು ಅಂತಾನೆ ನಂಗೆ ಈ ಹಾಡು ಕೇಳೆಮ್ಮ, ಈ ವೀಡಿಯೊ ನೋಡೆಮ್ಮ ಅಂತ ತೋರ್ಸಿ ಹೊಟ್ಟೆ ಉರಿಸ್ತಾಳೆ. ಹೋಗ್ಲಿ  ಒಳ್ಳೆ ಬೈಕ್  ಆದರು  ಇಟ್ಕೊಂಡಿದ್ಯ, ಅದೂ ಇಲ್ಲ 2nd ಹ್ಯಾಂಡಲ್, ಸ್ಟಾರ್ಟ್ ಮಾಡಿದ್ರೆ ಇಡೀ ಕಾಲೇಜ್ ಗೆ  ಕೇಳುತ್ತೆ, ಪ್ಲೀಸ್  ಒಂದು  ಹೊಸ ಬೈಕ್ ಮತ್ತೆ ಮೊಬೈಲ್ ತೊಗೊಳೋ, ಇನ್ಮೇಲೆ ಒಳ್ಳೆ ಬಟ್ಟೆ ಹಾಕ್ಕೋ, iron ಮಾಡ್ಕೊಂಡು ಬಟ್ಟೆ ಹಾಕ್ಕೊಂಡು ಬಾ, ಜಿಮ್ ಗೆ ಹೋಗು ಸ್ವಲ್ಪ ದಪ್ಪ ಆಗು, fair  ಅಂಡ್ ಲವ್ಲೀ ಹಾಕ್ಕೋ ಆಯ್ತಾ??.  ನನಗೋಸ್ಕರ  ಇಷ್ಟ  ಮಾಡ್ತ್ಯ  ತಾನೇ  ಅಂದಾಗ  ಪ್ರವೀಣನಿಗೆ ಆ ಕ್ಷಣದಲ್ಲಿ ಏನು ಉತ್ತರ  ಕೊಡಬೇಕು ಗೊತ್ತಾಗಿಲ್ಲ. ಸರಿ ಕಾವ್ಯ ನೀನು ಹೇಳಿದ  ಹಾಗೇ  ಮಾಡ್ತೀನಿ  ಅಂತ ಫೋನ್ ಕಟ್ ಮಾಡಿದ.
ಇಷ್ಟು ನಡೆದಿದ್ದು ಪ್ರವೀಣ ಸ್ನೇಹಿತರ ಜೊತೆ ಅಡ್ಡ ಹೊಡೆಯಲು ಹೋದಾಗ, ಇಷ್ಟು ಮಾತು ಕಥೆ ಮುಗಿಸಿ ಬರೋ ಅಷ್ಟರಲ್ಲಿ ಪ್ರವೀಣನ ಸ್ನೇಹಿತ ರಾಘು, ಮುಗೀತ ಮಗ ನಿಮ್ಮ ಮೊಬೈಲ್ ಪ್ರಣಯ ಅಂತ ಚುಡಾಯಿಸಿದ. ಪ್ರವೀಣನಿಗೆ ಮಾತನಾಡಿಸಬೇಕು ಅನ್ಸಿಲ್ಲ, ಹಾಗೇ ತನ್ನ ಹಳೆ ಬೈಕ್ ನ ಸ್ಟಾರ್ಟ್ ಮಾಡ್ಕೊಂಡು ಮನೆ ಸೇರ್ಕೊಂಡ. ಊಟ ಮುಗಿಸಿ ಮತ್ತೆ ಮೊಬೈಲ್ ಚಾಟಿಂಗ್ ಶುರು ಮಾಡಿದ, ಆಗ ಕಾವ್ಯ, ಹೇ ಪ್ರವೀಣ್ ನಂಗೆ ಮಂತ್ರಿ ಮಾಲ್ ಗೆ ಹೋಗ್ಬೇಕು ಅನ್ನಿಸ್ತಾ ಇದೆ ಈ ಶನಿವಾರ ವ್ಯಾಲಂಟೈನ್ ಡೇ ಅಲ್ವಾ ಕರ್ಕೊಂಡು ಹೋಗೋ ಅಂತ ಮೆಸೇಜ್ ಮಾಡಿದ್ದಳು. ಪ್ರವೀಣನಿಗೆ ಮಂತ್ರಿ ಮಾಲ್ ಅಂದೊಡನೆ ಸ್ವಲ್ಪ ಭಯ ಆಯ್ತು, ಕಮ್ಮಿ ಅಂದ್ರು 500 ರು ಖರ್ಚು ಮಾಡಲೇ ಬೇಕು, ಹಣ ಎಲ್ಲಿಂದ ಬರುತ್ತೆ, ಪ್ರವೀಣ ಇನ್ನೂ ಓದ್ತಾ ಇರೋ ಹುಡುಗ, ಅಪ್ಪನ  ಕೇಳಿದ್ರೆ, ಏನಕ್ಕೆ, ಎಲ್ಲಿಗೊಗ್ಬೇಕು, ಯಾರಜೊತೆ ಅಂತ ನೂರಾ ಎಂಟು ಪ್ರಶ್ನೆ ಕೇಳ್ತಾರೆ. ಅಮ್ಮನ ಹತ್ರ ಈಗಾಗಲೇ ಕೊಡ್ತೀನಿ ಕೊಡಮ್ಮ ಕೊಡ್ತೀನಿ ಕೊಡಮ್ಮ ಅಂತ ಬಹಳ ಸಾರಿ ಕೇಳಿ ತೊಗೊಂಡು ಆಗಿದೆ. ಮತ್ತೆ ಕೇಳಿದ್ರೆ ಇಲ್ಲ ಅನ್ನಲ್ಲ ಆದರು ಮನಸಿಗೆ ಬೇಜಾರು ಅಮ್ಮನಿಗೆ ಸುಳ್ಳು ಹೇಳಿ ಹಣ ತೊಗೊಳಕ್ಕೆ. ಇನ್ನು ಗೆಳೆಯರು ಎಲ್ಲ ತನ್ನತರಾನೇ ಓದ್ತಾ ಇರೋರು. ಒಂದು ಕ್ಷಣ ತಲೆ ದಿಮ್ಮೆಂತಾಗಿ, ಆಗಲಿ ಕಾವ್ಯ ಕರೆದು ಕೊಂಡು ಹೋಗ್ತೀನಿ ಅಂತ ರಿಪ್ಲೈ ಮಾಡಿಬಿಟ್ಟ. ಅದೇ ಚಿಂತೆಯಲ್ಲಿ ಮಲಗಿದ ಪ್ರವೀಣನಿಗೆ ನಿದ್ದೆ ಬಂದಿದ್ದೇ ಗೊತ್ತಾಗಲಿಲ್ಲ.
ಎರಡು ವರ್ಷದ ಹಿಂದೆ ಹೀಗಿರಲಿಲ್ಲ, ಪ್ರವೀಣ ಮತ್ತು ಕಾವ್ಯ ಹೊಸ ಪ್ರೇಮಿಗಳು, ಕಾಲೇಜಿಗೆ ನಂಬರ್ 1 ಜೋಡಿ, ಪ್ರಿನ್ಸಿಪಾಲರಿಂದ ಹಿಡಿದು ಕಸಗುಡಿಸೋ ಮುನಿಯಮ್ಮನ ತನಕ ಎಲ್ಲರಿಗೂ ಇವರ ಪ್ರೀತಿ ವಿಷಯ ಗೊತ್ತಿತ್ತು ಅಂದ್ರೆ ಅರ್ಥ ಮಾಡ್ಕೊಳಿ ಅವರ ಪ್ರೀತಿಯ ಪವರ್ ಹೇಗಿರಬಹುದು ಅಂತ. ಆಗ ಕಾವ್ಯಗೆ ಪ್ರವೀಣ ಕಪ್ಪಗಿದ್ದಾನೆ, ಕುಳ್ಳ ಅನ್ನೋ ಅರಿವಿರ್ತಾ ಇರ್ಲಿಲ್ಲ. ಕಪ್ಪು ಶ್ರೀ ಕೃಷ್ಣನ ಬಣ್ಣ, ಇಷ್ಟಕ್ಕೂ ನೀನೇನು ಅಷ್ಟು ಕಪ್ಪಗಿಲ್ಲ ಬಿಡು ಅಂತ ಇವನ ಪರ ವಹಿಸಿ ಮಾತಾಡ್ತಾ ಇದ್ಲು. ಕೆಲವು ಸಲ ಅಂತು ಅತಿರೇಕಕ್ಕೆ ಹೋಗಿ ದುನಿಯಾ ವಿಜಿ ಕಪ್ಪಗಿಲ್ವಾ ಆದರು ಸ್ಟಾರ್ ತಾನೇ ಅಂದಿದ್ದು ಇದೆ. ಬೈಕ್ ಬಗ್ಗೆ ಅಂತು ಹೊಗಳಿಕೆಯ ಸುರಿಮಳೆ. ನೀನು 1 Km ದೂರ ಇದ್ದಾಗಲೇ ನಿನ್ ಬೈಕ್ ಶಬ್ದ ನನ್ ಹಾರ್ಟ್ ಗೆ ಟಚ್ ಆಗ್ಬಿಡುತ್ತೆ ಕಣೋ ಪ್ರವೀಣ. ನೀನು ಈ ಬೈಕ್ ಸೌಂಡ್ ಚೇಂಜ್ ಮಾಡಕ್ಕೆ ಹೋಗಬೇಡ ಆಯ್ತಾ ಅಂತ ಅವಳೇ ಸಲಹೆ ಸಹ ಕೊಟ್ಟಿದ್ಲು. ದಿನಾ ಸಕತ್ ಒಳ್ಳೆ ಗೆಟಪ್ ಇರತ್ತೆ ನಿಂದು. raw ಲುಕ್ಸ್, rough ಅಂಡ್ tough ಆಗಿ ಕಾಣಿಸ್ತ್ಯ ಅಂತ ಹೇಳಿದ್ ಮೇಲಂತೂ, ಪ್ರವೀಣನ ಅಮ್ಮ ಒಗ್ದಿರೋ ಬಟ್ಟೆ ಹಾಕ್ಕೊಂಡು ಹೋಗೋ ಅಂದ್ರುನು ಹಾಕ್ಕೊಂಡು ಹೋಗ್ತಾ ಇರ್ಲಿಲ್ಲ. ಸಿಕ್ಕ ಸಿಕ್ಕ ಗೆಳೆಯರ ಹತ್ರ ಎಲ್ಲ 20 ರು  30 ರು ಸಹ ಸಾಲ ತೊಗೊತಾ ಇದ್ದ. ಅವಳ ಜೊತೆ ಐಸ್ ಕ್ರೀಂ ತಿನ್ನೋದು, ಮನೇಲಿ ಕೊಟ್ಟ ಪಾಕೆಟ್ ಹಣ ಉಳಿಸಿಕೊಂಡು 15 ದಿನಕ್ಕೊಮ್ಮೆ ಸಿನಿಮಾ ನೋಡೋದು ಎಲ್ಲ ಆಗ್ತಿತ್ತು. ಎರಡು ವರ್ಷ ಆದ್ಮೇಲೆ ಕಾವ್ಯಾಗೆ ಯಾಕೆ ಇವನ plus ಆಗಿದ್ದ ವಿಷಯಗಳೆಲ್ಲ ಮೈನಸ್ ಆಗ್ತಾ ಇದೆ ಅಂತ ಪ್ರವೀಣ ಎಷ್ಟು ತಲೆ ಕೆಡ್ಸ್ಕೊಂದ್ರು ಅರ್ಥ ಆಗ್ಲಿಲ್ಲ.
ಶನಿವಾರ ಬೆಳಿಗ್ಗೆ ಎದ್ದೊಡನೆ ಅಮ್ಮ, ಪ್ರವಿಣನಿಗೆ ಕಾಫೀ ಕೊಟ್ಟು ತಲೆಗೆ ಎಣ್ಣೆ ಇಡಲು ಶುರು ಮಾಡಿದ್ದರು. ಯಾಕಮ್ಮ ಅಂದ್ರೆ ಇವತ್ತು ನಿನ್ನ ಹುಟ್ಟಿದಬ್ಬ ಮಗಾ, ರಥಸಪ್ತಮಿ ಅಂದ್ರು, ಇಂಗ್ಲಿಷ್ ಡೇಟ್ ಪ್ರಕಾರ ನಿನ್ ಹುಟ್ಟಿದಬ್ಬ ಬೇರೆ ದಿನ, ಆದ್ರೆ ನನ್ ಪ್ರಕಾರ ಇವತ್ತೇ ಅಂತ ತಲೆಗೆ ಚೆನ್ನಾಗಿ ಎಣ್ಣೆ ಇಟ್ಟು, ಸ್ನಾನ ಮಾಡಿಸ್ತಾ ಇರ್ಬೇಕಾದ್ರೆ. ಪ್ರವೀಣ ಅಮ್ಮ ನಾ ಕಪ್ಪಗಿದ್ದೀನಿ ಅಲ್ವಮ್ಮ ಅಂದ. ಅಮ್ಮ ಯಾರ್ ಹಾಗ್ ಹೇಳಿದ್ದು ಕರ್ಕೊಂಡ್ ಬಾ ನನ್ ಮುಂದೆ, ಕಪ್ಪು ಶ್ರೀ ಕೃಷ್ಣನ್ ಬಣ್ಣ ಮಗಾ ಆದ್ರೆ ಬಗ್ಗೆ ಯೋಚನೆ ಮಾಡಬಾರದು ಅಂದ್ರು. ಪ್ರವೀಣ ಅಮ್ಮ ನಾ ಕುಳ್ಳ ಇದ್ದೀನಿ  ಅಲ್ವಮ್ಮ ಅಂದ. ಮಗನೆ ದೇಹ ಎಷ್ಟು ಬೆಳೆದರೆ ಏನಪ್ಪಾ ಪ್ರಯೋಜನ? ವ್ಯಕ್ತಿತ್ವ ಮುಖ್ಯ. ನಿನ್ನ ವ್ಯಕ್ತಿತ್ವ, ನಾಲ್ಕು  ಜನಕ್ಕೆ ಮಾದರಿಯಾಗೋ ರೀತಿ ಇದ್ರೆ ಸಾಕು, ಅಂದ್ರು. ಅದಕ್ಕೆ ಪ್ರದೀಪ ಹೌದು ಅಪ್ಪನ ಹತ್ರ ದುಡ್ಡಿಗೇನೂ ಕೊರತೆ ಇಲ್ಲ ಆದರು ನಾ ಹಣ ಕೇಳ್ದಾಗೆಲ್ಲ  ಕೊಟ್ಟು,  ಆಮೇಲೆ ಲೆಕ್ಕ ಕೇಳ್ತಾರೆ ಅದೂ ಸರಿನಾಮ್ಮ? ಮಗ ಅಂತ ಸ್ವಲ್ಪಾನು  ನಂಬಿಕೆ ಇಲ್ಲ ಅವ್ರಿಗೆ ಅಂದ. ತಲೆ ಉಜ್ಜುತ್ತ ಇದ್ದ ಅಮ್ಮ ಹಾಗೆ ಒಮ್ಮೆ ತಲೆ ಮೊಟುಕಿ, ಅಯ್ಯೋ ದಡ್ಡ,  ನಿಮ್ಮಪ್ಪ  ದುಡಿತಾ ಇರೋದು ಎಲ್ಲ ನಿಂಗೋಸ್ಕರಾನೆ ತಾನೇ? ಇನ್ನು ಯಾರಿಗೋ ಕೊಡ್ತಾರೆ?. ಆಸ್ತಿಪಾಸ್ತಿ,  ಹಣಕಾಸು  ವ್ಯವಹಾರದಲ್ಲಿ ಮಗ ಯಾವತ್ತು ಯಾಮಾರದೆ ಇರ್ಲಿ, ತೊಂದ್ರೆಲಿ ಸಿಕ್ಕಿ ಹಾಕ್ಕೊಳ್ದೇ ಇರ್ಲಿ ಅಂತ ಲೆಕ್ಕ  ಕೇಳ್ತಾರೋ ಹೊರತು ನಿನ್ ಮೇಲಿನ ಅಪನಂಬಿಕೆ ಇಂದ ಅಲ್ಲ ಕಣೋ ಅಂದ್ರು. ಸಿಗೆಕಾಯಿ ಹರಳೆಣ್ಣೆಯನ್ನು ತೆಗೆದಂತೆ, ಅಮ್ಮನ ಹಿತನುಡಿಗಳು ಪ್ರವೀಣನ ಮನದೊಳಗಿನ ಕಲ್ಮಶವನ್ನು ತೊಳೆದು ಹಾಕಿತ್ತು.
ಸ್ನಾನ ಅದೊಡನೆ ಹೊಸದಾಗಿ ಅಮ್ಮ ತಂದಿದ್ದ ಬಟ್ಟೆ ಹಾಕ್ಕೊಂಡು, ಮನೆಯಲ್ಲಿದ್ದ ಕ್ಯಾಮೆರಾ ತೊಗೊಂಡು,ಕಾವ್ಯಳನ್ನ ಭೇಟಿ ಮಾಡಕ್ಕೆ ಮುಂಚೆ ಕೆಲವು ಸ್ನೇಹಿತರನ್ನು ಭೇಟಿ ಮಾಡಿದ. ಒಬ್ಬ ಸ್ನೇಹಿತನ ಬಳಿ ಒಳ್ಳೆ ಬೈಕ್ ತೊಗೊಂಡ, ಮತ್ತೊಬ್ಬ ಸ್ನೇಹಿತನ ಬಳಿ ಮೊಬೈಲ್ ಫೋನ್ ತೊಗೊಂಡ. ಮಂತ್ರಿ ಮಾಲ್ ಹೋಗೋದಕ್ಕೆ ಕಾಯ್ತಿದ್ದ ಕಾವ್ಯ ಹೊಸ ಬೈಕ್ ನೋಡಿ ಫುಲ್ ಕುಶ್ ಆಗಿದ್ದಳು. ಬೈಕ್ ಹತ್ತಿಸಿಕೊಂಡು ಮಂತ್ರಿಯ ಬದಲಾಗಿ ಬನ್ನೇರುಘಟ್ಟ ಕಾಡಿಗೆ ಕರೆದು ಕೊಂಡು ಹೋದ. ಲಾಂಗ್ ಡ್ರೈವ್, ಅದೂ ಹೊಸ ಬೈಕಲ್ಲಿ ಅಂತ ಕಾವ್ಯ ಇನ್ನೂ ಖುಷಿಯಾಗಿದ್ದಳು ಕಾಡಿನ ಮಧ್ಯೆ ಗಾಡಿ ನಿಲ್ಲಿಸಿ, ಗಾಡಿಯ ಕೀ ಕಾವ್ಯ ಕೈಗಿಟ್ಟು, ಮೊಬೈಲ್ ಫೋನ್ ಕೊಟ್ಟು ವೀಡಿಯೊ ನೋಡ್ಕೊಂಡು ಕೂತ್ಕೋ, ಫೋಟೋಸ್ ತೆಗೆದು ಕೊಂಡು ಬರ್ತೀನಿ ಅಂತ ಹೇಳಿ ಎಲ್ಲೋ ಹೊರಟು ಬಿಟ್ಟ. ಕಾವ್ಯ ವೀಡಿಯೊ ನೋಡುತ್ತಾ ಹಾಡು ಕೇಳುತ್ತ ಕೂತಳು, ಕತ್ತಲಾಗುವ ಸಮಯ ಆಯಿತು ಆದರು ಪ್ರವೀಣ್ ಬರಲಿಲ್ಲ. ಕಾವ್ಯಾಳಿಗೆ ಭಯ ಶುರುವಾಯ್ತು. ಇದರ ಮಧ್ಯೆ ಕಾಡು ಪ್ರಾಣಿಗಳ ಕೂಗು ಬೇರೆ ಭಯ ಹೆಚ್ಚು ಮಾಡಿತ್ತು. ಹೆದರಿ ಬಳಲಿ ಕುಸಿದಿದ್ದಳು.
ಆಗ  ಪ್ರವೀಣ್ ಅಲ್ಲೇ  ಮರೆಯಲ್ಲಿದ್ದವನು ಎದುರು ಬಂದ, ಕಾವ್ಯ ಓಡಿ ಬಂದವಳೇ ಪ್ರವೀಣನ ತಬ್ಬಿ ಎಲ್ಲಿ ಹೋಗಿ ಬಿಟ್ಟಿದ್ದೆ ಅಂತ ಅತ್ತಳು.ಅದಕ್ಕೆ ಪ್ರವೀಣ್ ನಿನ್ನನ್ನೇ ಹುಡುಕ್ತ ಇದ್ದೆ, ನೀನು ಇಲ್ಲಿದ್ಯ ಇವಾಗ ಸಿಕ್ದೆ ಅಂದ. ಅರ್ಥ ಆಗದ ಕಾವ್ಯ ನೀನೆ ನನ್ನ ಇಲ್ಲಿ ಬಿಟ್ಟು ಹೋಗಿ ನೀನೆ ಮತ್ತೆ ಹುಡುಕುತಿದ್ದೆ ಅಂತಿದ್ದಿಯ ಅಂದ್ಲು. ಅದಕ್ಕೆ ಪ್ರವೀಣ ನಾನು ಬಿಟ್ಟು ಹೋದಾಗ ಇದ್ದ ಕಾವ್ಯಾಗೆ ಒಳ್ಳೆಯ ಗಾಡಿ,  ವೀಡಿಯೊ ಮತ್ತು ಹಾಡು, ಪ್ಲೇ ಮಾಡುವಂತಹ ಮೊಬೈಲ್ ಬೇಕಿತ್ತು. ಆದರೆ ಈ ಕಾವ್ಯಾಗೆ ಪ್ರವೀಣ್ ಬೇಕಾಗಿದೆ ಅಂದಾಗ, ಕಾವ್ಯಾಗೆ ತನ್ನ ತಪ್ಪು ಅರಿವಾಗಿತ್ತು. ಸಾರೀ ಪ್ರವೀಣ್ ಇನ್ನು ಮುಂದೆ ನಾನು ಆ ರೀತಿ ವರ್ತಿಸೋಲ್ಲ ಇಂತಹ ವಸ್ತುಗಳು ಮತ್ತು ಅಂದಕ್ಕಿಂತ ವ್ಯಕ್ತಿ ಮುಖ್ಯ ಅನ್ನೋ ಅರಿವಾಗಿದೆ ಅಂತ ಮನಃ ಪೂರ್ತಿಯಿಂದ ತಬ್ಬಿ ಹ್ಯಾಪಿ ವ್ಯಾಲಂಟೈನ್ ಡೇ ವಿಶ್ ಮಾಡಿದಳು. :) :)

Monday, February 6, 2012

ಆಳದಿರು ನನ್ನ


ಕೀಲಿ ಪಟವ ಕುಟ್ಟಿ ಕುಟ್ಟಿ ಸವೆದಾಗಿದೆ
ಮುಸುಕಿನಿಂದ ಎಷ್ಟೆಂದು ಮಾತನಾಡಲೇ ಗೆಳೆತಿ
ಉಸಿರುಗಟ್ಟಿಸದಿರು ದಯವಿಟ್ಟು ನನ್ನದೂ ಬದುಕಿದೆ
ನಿನ್ನವನೇ ಆದರೂ ಆಳದಿರು ನನ್ನ

ನಂಗೊತ್ತು ನನ್ನದೇ ಧ್ಯಾನದಲಿಹೆ ನೀನು
ನನಗೂನು ನಿನ್ನದೇ ಯೋಚನೆ ಬೇರೇನು
ಆದರು ಜೀವನವ ಸಾಗಿಸಲು ಕಷ್ಟ ಪ್ರಿಯೆ
ಮಾತು ಮಾತಲ್ಲೆ ಮರೆಯದಿರು ಬದುಕ

ಅಬ್ಬರದ ಆಸೆಗಳು ತುಂಬಿದೆ ನಿನ್ನಲ್ಲಿ
ಅಬ್ಬಬ್ಬ ಎನ್ವಷ್ಟು ಆಳ ಇದೆ ಬದುಕಿನಲಿ
ಬದುಕ ಸಾಗರ ಇದು ಅಂತ್ಯ ಕಾಣದ ತೀರ
ಆಸೆಯ ಮೂಟೆಯನು ಮಾಡದಿರು ಭಾರ

ಇರುವಷ್ಟು ಪ್ರೀತಿ ಕೊಡುವೆನು ನಾನು
ಇಲ್ಲದ ಪ್ರೀತಿ ಹುಡುಕಬಲ್ಲೆಯೇನು
ಇಲ್ಲ ಎಂಬುವ ಪದ ಪ್ರೀತಿಯಲಿ ಸಿಕ್ಕಲ್ಲ
ಸಮಯವೇ ಪ್ರೀತಿ ಸತ್ಯವನು ಅರಿಯಲ್ಲ

ಸಮಯ ಕೊಡಿ ಪ್ರೀತಿ ತೊಗೊಳಿ :) ಪವನ್ :

Thursday, February 2, 2012

ಅಪ್ಪನ ಬೈದು ಬಿಟ್ಟೆ ಎಂದಾಗ

 
ಅಪ್ಪನ ಬೈದು ಬಿಟ್ಟೆ ಎಂದಾಗ
ಆ ಸುಂದರಿ ಫೋನಿನಿಂದಲೇ
ಕಿಸಕ್ ಎಂದಿದ್ದಳು
ಏನಕ್ಕೆ ಬೈದೆ ಎಂದು
ಕೇಳ ಹೊರಟಳಾದರೂ
ನೀನು ಬೇಸರದಿಂದಿದ್ದೆ
ಅಪ್ಪ ತಲೆ ತಿಂತಿದ್ದ ಎಂದಾಗ
ನಗುವ ಹೊನಲು ಸುಂದರಿಯ
ಬೇಸರವ ಮರೆಸಿತ್ತು

ಬುದ್ದಿ ಇಲ್ಲದೆ ಚಡ್ಡಿ ಹಾಕದೆ
ದಿಕ್ಕೆಟ್ಟು ಓಡುವಾಗೆಲ್ಲ
ಎಲ್ಲಿ ವಾಹನದ ಚಕ್ರಕ್ಕೆ
ಮಗ ಸಿಕ್ಕಿಬಿಟ್ಟನೋ
ಎಂದು ಹಿಂದೆ ಹೋದನಲ್ಲ ಆ ಅಪ್ಪನಿಗೆ
ಬೈಗುಳ ಬೇಕಿತ್ತು ಬಿಡಿ
ಇಂದು ಕಾಲ ಚಕ್ರ
ಪ್ರೀತಿಯ ವಾಹನದಡಿ ನಿಂತಿದೆ
ಅದು ಅಪ್ಪನ ತುಳಿದು ನೋವ ಕೊಟ್ಟು
ನಗುವ ಪಥದಲ್ಲಿ ಸಾಗುತ್ತಿದೆ

ಇಷ್ಟಕ್ಕೂ ಸುಂದರಿಯ ಬೇಸರಕ್ಕೆ ಕಾರಣ
ಪ್ರಿಯ ಐಸ್ ಕ್ರೀಂ
ಕೊಡಿಸಲಿಲ್ಲವೆಂದೇ
ಕರೆದುಕೊಂಡು ಹೋಗಿದ್ದ ಸಿನಿಮ
ಚೆಂದ ಇರಲಿಲ್ಲವೆಂದೇ
ಅಪ್ಪನ ಬುದ್ದಿ ಮಾತು
ತಲೆ ತಿಂದಂತೆಯೇ
ಬುದ್ದಿ ಹೇಳದೆ ಚಡ್ಡಿಯಿಲ್ಲದೆ ನಡೆಸಿದಿದ್ದರೆ
ಪ್ರಿಯನಿಗೆ ಸುಂದರಿಯ
ಕಾಲಧೂಳು ದಕ್ಕುತ್ತಿರಲಿಲ್ಲ

ಬೆವರ ಹರಿಸಿ ಬವಣೆ ಎಣಿಸದೆ
ಮಗನಿಗಾಗಿ ಬದುಕ ತೇಯ್ದ
ಅಪ್ಪನಿಗೆ ಬೈಗುಳ ಬೇಕಿತ್ತು ಬಿಡಿ
ಅಪ್ಪ ಕೊಡಿಸಿದ ಮೊಬೈಲು
ಅಪ್ಪ ಕೊಡಿಸಿದ್ದ ವಾಚು
ಅಪ್ಪ ಕೊಡಿಸಿದ ಬ್ಯಾಗು
ಕಡೆಗೆ ಪ್ರಿಯನ ಬಳಿ ಇರುವುದು
ಅಪ್ಪ ಕೊಡಿಸಿದ ಚಡ್ಡಿಯೇ
ಎಂಬುದು ಸುಂದರಿಗೆ ಗೊತ್ತಿಲ್ಲ

ಇಂದು ಬೆಳಗ್ಗೆ ಬಸ್ ನಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿ ತನ್ನ ಪ್ರಿಯೆ ಜೊತೆ ಅಪ್ಪನ ಬೈದಿದ್ದು ಹೆಮ್ಮೆಯಿಂದ ಹೇಳ್ಕೊಲ್ತಿದ್ದ

ಏನು ಕಾಲ ಬಂತು ಪವನ್ :- :(