Monday, September 26, 2011

ಇರಬಾರದಿತ್ತೆ ನಾನು ಕಡಲಾಳದಲ್ಲಿ

ಇರಬಾರದಿತ್ತೆ ನಾನು ಕಡಲಾಳದಲ್ಲಿ
ಮುತ್ತಾಗಿದ್ದಿದ್ದರೆ ಕಪ್ಪೆಚಿಪ್ಪಿನ ಕಾವಲು
ಕಲ್ಲಾಗಿದ್ದಿದ್ದರೆ ಹಸಿರು ಪಾಚಿಯ ಒಡಲು  
ಮಿನಾಗಿದ್ದಿದ್ದರೆ ನನ್ನ ಕಣ್ಣಿರು ಯಾರಿಗೂ ಕಾಣುತ್ತಿರಲಿಲ್ಲ
ಮನದಾಳದ ನೋವನ್ನು ಮರೆಮಾಚ ಬಹುದಿತ್ತಲ್ಲ
ಸ್ನೇಹ ಪ್ರೀತಿಗಳ ಪಾಶ ಬೀಳುತ್ತಿರಲಿಲ್ಲ
ಸುರೊಂದು ಬೇಕೆಂದು ಹೆಣಗುತ್ತಿರಲಿಲ್ಲ
ಹುಟ್ಟಿದೆ ನೀನು ಹುಲು ಮಾನವನಾಗಿ
ಅಸೆ ಆಮಿಷಗಳ ಪ್ರತಿರೂಪವಾಗಿ
ಕೋಟಿ ಕೂಡಿಟ್ಟರು ತೃಪ್ತಿಯೇ ಇಲ್ಲ
ಗೆಳೆಯ ಬಂಧುಗಳ ಮೇಲೆ ನಂಬಿಕೆ ಇಲ್ಲ
ಬದಲಾಗಬೇಕಿದೆ ನೀ ಬಾಳುವ ರೀತಿ
ಅನುಸರಿಸು ನೀ ವಿಶ್ವ ಮಾನವನ ರೀತಿ
                                                      ಪವನ್ :-

No comments:

Post a Comment