Saturday, June 4, 2011

ಹನುಮಪ್ಪನೆ ಆಗಿರಲಿ ಹಿಮಾಂ ಸಾಭಿಯೇ ಆಗಿರಲಿ

           ಜನ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹೋರಾಟ ಮಾಡಿದ್ರು , ಮೇಧಾ ಪಾಟ್ಕರ್ ಹೋರಾಟಗಳನ್ನ ಮಾಡುತ್ತಲೇ ಇರ್ತಾರೆ 2G  ಹಗರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸುಬ್ರಮಣ್ಯನ್ ಸ್ವಾಮಿ ಅವರ ಹೋರಾಟವೇ ಕಾರಣ ಈಗ ತಾನೆ ಮಿಲಿಂದ್ ಸೋಮನ್ ಹಸಿರು ಕ್ರಾಂತಿ ಮಾಡಲು 531km ಓಟ ಮುಗಿಸಿದ್ದಾರೆ ಇನ್ನು ಎಷ್ಟೋ ಹೋರಾಟಗಳು ನಡಿತನೆ ಇರುತ್ತವೆ ಆದರೆ ಈಗ ಬಾಬಾ ರಾಮದೇವ್ ಹೋರಾಟ ಮಾಡಲು ಪ್ರಾರಂಭ ಮಾಡಿದ ತಕ್ಷಣ ಈ  ಮಾಧ್ಯಮಗಳು ಏಕೆ ಅದಕ್ಕೆ ಕೋಮುವಾದದ ಬಣ್ಣ ಹಚ್ಹುತ್ತಿವೆಯೋ ಅ ದೇವರೇ ಬಲ್ಲ times now ನ ಅರ್ನಬ್ ಗೋಸ್ವಾಮಿ ಇರಬಹುದು ಅಥವಾ CNN ನ ರಾಜ್ದೀಪ್ ಸರ್ದೇಸಾಯಿ ಇರಬಹುದು ಶಾರುಕ್ ಖಾನ್ ಸಲ್ಮಾನ್ ಖಾನ್ ಶೋಭಾ ಡೆ ಮುಂತಾದ ಸೆಲೆಬ್ರಿಟಿಗಳು ಆಗಿರಬಹುದು ಬಾಬಾ ರಾಮದೇವ್ ಮಾಡುತ್ತಿರುವುದು ನಾಟಕ ಅವರಿಗೆ ಯೋಗ ಹೇಳಿಕೊಡುವುದು ಬಿಟ್ಟು ಇ ಕೆಲಸ ಯಾಕೆ ಅಂತ ಕೇಳುತಿದ್ದಾರೆ .ಕಾಂಗ್ರೆಸ್ಸ್ ನ ದಿಗ್ವಿಜಯ್ ಸಿಂಗ್ ಅಂತು ಘಂಟೆಗೊಂದು statement ರಾಮದೇವ್ ವಿರುದ್ದ ನೀಡುತಿದ್ದಾರೆ  ಆದರೆ ಅತ್ತ ಅವರ ಪಕ್ಷದ ಹಿರಿಯ ಸಚಿವರೆಲ್ಲ ಬಾಬ ಅವರನ್ನ ಮೀಟ್ ಮಡಿ compromise ಅಗೋ ತಂತ್ರ ಹೆಣೆಯುತಿದ್ದಾರೆ  

          ಇಷ್ಟಕ್ಕೂ ಮಾಧ್ಯಮದವರು ಕೋಮುವಾದದ ಬಣ್ಣ ಕಟ್ಟುತ್ತಿರುವುದು ಯಾಕೆ ರಾಮದೇವ್ ಅವರು ಕಾವಿ ವಸ್ತ್ರ ಧರಿಸಿ ಮರದ ಪಾದರಕ್ಷೆ ಧರಿಸಿದ್ದಾರೆ ಅಂತಲೇನು?? ಭ್ರಷ್ಟಾಚಾರದ ವಿರುದ್ದ ಹೋರಾಡಲು ಕಾವಿಯದರೇನು ಕಪ್ಪು ವಸ್ತ್ರವಾದರೇನು 
ಮರದ ಚಪ್ಪಲಿ ಅದರೇನು ADIDAS ಶೂ ಅದರೇನು ಭಾರತದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ಎಲ್ಲ ಡಾಕುಮೆಂಟ್ ಸರಿ ಇದ್ದರು ಪೋಲಿಸ್ ಗಾಡಿ ಅಡ್ಡ ಹಾಕಿದ ಮೇಲೆ 50Rs ಲಂಚ ಕೊಟ್ಟ ಪ್ರತಿಯೊಬ್ಬ ನಾಗರಿಕನಿಗೂ ಅವಾಜ್ ಹಾಕುವ ತಾಕತ್ತಿದೆ. ಇ ಎಲ್ಲ ಭಾರತದ ಪ್ರಜೆಗಳಲ್ಲಿ ಬಾಬಾ ರಾಮದೇವ್ ಸಹ ಒಬ್ಬರು ಎಂದು ಏಕೆ ಮಾಧ್ಯಮದವರು ಬಿಂಬಿಸಬಾರದು? ಮಾಧ್ಯಮಗಳಲ್ಲಿ ಅಪ ಪ್ರಚಾರ ಮಡಿ ಹೋರಾಟಕ್ಕೆ ತೊಡಕು ಮಾಡಲು ಕಾಂಗ್ರೆಸ್ ಗೆ ಸಹಾಯ ಮಾಡುವ ತಂತ್ರವಾ? ರಾಜಕೀಯ ವ್ಯಕ್ತಿಗಳಿಗೆ ಹೋರಾಟದಲ್ಲಿ ನಿಷೇಧ ಇದೆ ಆದ್ದರಿಂದ ಇ ಹೋರಾಟದಲ್ಲಿ ಯಾವುದೇ ಪಕ್ಷಗಳಿಗೆ ಲಭವಂತು ಇಲ್ಲ ಇ ಹೋರಾಟದ ಯೆಶಸ್ಸಿನಿಂದ ಲಾಭವಗೋದು ನಾಗರಿಕರಿಗೆ. ಆದರೆ ವಿರೋಧ ಪಕ್ಷದಲ್ಲಿರುವ BJP ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೇ ಕಪ್ಪು ಹಣವನ್ನು ತರುವ ಪ್ರಸ್ತಾವನೆ ಮಾಡಿತ್ತು ಈಗ ಬೆಂಬಲ ಸೂಚಿಸಿದೆ ಅದಕ್ಕೆ ಮಾಧ್ಯಮಗಳ ಕಣ್ಣಿಗೆ ಬಾಬಾ ರಾಮದೇವ್ BJP ಏಜೆಂಟ್ ಆಗಿದ್ದಾರೆ  

          ಬಾಬ್ರಿ ಮಸಿದಿ ಧ್ವಂಸ ಮಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ವಿ ಒಬ್ಬರು ಬಂದು ಹೋರಾಟದಲ್ಲಿ ಭಾಗಿಯಾಗಿದ್ದಾರೆ  ಅದಕ್ಕೆ ಬಾಬಾ ರಾಮದೇವೆ ಹೋಗಿ ಬಾಬ್ರಿ ಮಸಿದಿ ಧ್ವಂಸ ಮಾಡಿರುವ ರೀತಿಯಲ್ಲಿ ಬಿಂಬಿಸುತ್ತಿವೆ ಇ ಮಾಧ್ಯಮಗಳು. ಯಾಕೆ, ಅ ಪ್ರಕರಣದಲ್ಲಿ ಭಾಗಿಯಾದವರಿಗೆ ಭ್ರಷ್ಟಾಚಾರದ ವಿರುದ್ದ ಹೊರಡುವ ಹಕ್ಕಿಲ್ಲವೇ?RSS ಮತ್ತು VHP  ಬೆಂಬಲ ಸೂಚಿಸಿದೆ ಅಂತ ಪದೇ ಪದೇ ಹೇಳುತ್ತಿರುವ ಮಾಧ್ಯಮಗಳ ಕಣ್ಣಿಗೆ ಪಕ್ಕದಲ್ಲಿರುವ ಮುಸ್ಲಿಂ ಸಿಖ್ ಮತ್ತು Crishtian ಧರ್ಮ  ಗುರುಗಳು ಕಾಣುತ್ತಿಲ್ಲವೇ? ಅವರೆಲ್ಲರನ್ನು ತೋರಿಸಿ ಇದು ಸರ್ವ ಧರ್ಮಗಳ ಹೋರಾಟ ಎಂದು ಹೇಳಬಹುದಗಿತ್ತಲ್ಲ ... 

        ಬಾಬಾ ಮನಸ್ಸಿನಲ್ಲಿ ನೂರೆಂಟು ಅಸೆಗಲಿರಬಹುದು ರಾಜಕೀಯದ ಹತ್ತಾರು ಕನಸುಗಳಿರಬಹುದು ಆದರೆ ಸಧ್ಯಕ್ಕೆ ಅವರು ಮಾಡುತ್ತಿರುವ ಕೆಲಸ ಒಳ್ಳೆಯದೇ ಅಲ್ಲವೇ ?ಅಷ್ಟೆಲ್ಲ ಒರಟಾಗಿ ಮಾತನಾಡುವವರು ತಾವೇ ಯಾಕೆ ಉಪವಾಸ ಸತ್ಯಾಗ್ರಹ ಕೂರಬಾರದು ? ಮಾಧ್ಯಮಗಳಲ್ಲಿ ಬಂದು ದೊಡ್ಡದಾಗಿ ಭಾಷಣ ಬಿಗಿಯುವವರು ತಾವೇ ಹೋರಾಟ ಮಾಡಲಿ . ನಮ್ಮಂತ ಸಾಮಾನ್ಯರಿಗಂತೂ ಕೋಮುವಾದದ ಅರಿವಿಲ್ಲ ಸತ್ಯಾಗ್ರಹ ಒಳ್ಳೆಯ ವಿಷಯಗಳ ಬಗ್ಗೆ ಹೋರಾಟ ಮಾಡಲು ಹನುಮಪ್ಪನೆ ಆಗಿರಲಿ ಹಿಮಾಂ ಸಾಭಿಯೇ ಆಗಿರಲಿ  ಬೆಂಬಲ ಇದ್ದಿದ್ದೆ 

                                                                                    ಏನಂತೀರಿ ಗೆಳೆಯರೇ......?????

1 comment: