Thursday, October 4, 2012

ಪ್ರಶ್ನೆ ಯಾವುದು???

ಚರಕವ ಸುತ್ತಿ ತಾಯಿ ಭಾರತಿಗೆ
ಸೀರೆ ನೇಯ್ದ ಕಲಾವಿದನೊಬ್ಬ
ಇಂದು ಆ ಸೀರೆಗಾಗಲೆ ೬೫ ವರ್ಷ
ಅಂದು ಅಪ್ಪಟ ಎಂದ ಈ ಸೀರೆಯ ನೂಲು
ಕದ್ದ ಮಾಲಿರಬಹುದೆ
ಕೇಳೋಣವೆಂದರೆ ಇಂದು ಅವನಿಲ್ಲ

ಬಾಯಲ್ಲಿ ರಾಮನಾಮ ಭಜನೆ
ಸಾಯುವಾಗಲೂ ಅದೇ ಕಡೆಯ ಮಾತು
ಹೇ ರಾಮ್ ಎಂದಾಗ ಚಿಮ್ಮಿದ ರಕ್ತದ ಕಲೆ
ಇನ್ನೂ ಅಳಿಸಲಾಗಲಿಲ್ಲ
ಆ ರಕ್ತವನ್ನೆ ಬಸಿದು ಬಸಿದು
ತಮ್ಮ ರಾಜಕೀಯದ ಇಂಜಿನ್ನುಗಳಿಗೆ ಸುರಿದು
ಮೈಲೇಜನೇರಿಸಿಕೊಳ್ಳುತ್ತಿರುವವರು ಎಷ್ಟೋ

ಅಲ್ಲಿ ಅವನ ನೆತ್ತರು ಮಾತ್ರವಲ್ಲ
ಮತ್ತೊಬ್ಬನ ಹತಾಷೆಯ ಬೆವರ ಹನಿ ಸಹ ಇತ್ತು
ಇಂದು ಅದು ಕೂಡ ತಿರುಚಿದ ಚರಿತ್ರೆ
ಗಬ್ಬರ್ ಸಿಂಗಿಗಿಂತಲೂ ಕ್ರೂರಿಯೊಬ್ಬನನ್ನು
ಹುಟ್ಟು ಹಾಕಿದ ಅಮರ ಚರಿತ್ರೆ

ಸತ್ತವನ ಅಂದರು ದೇಶಪ್ರೇಮಿ
ಅಧಿಪತ್ಯಕ್ಕೆ ಹಾತೊರಿಯುತಿದ್ದ ಕರ್ಮಯೋಗಿ
ಕೊಂದವನು ತನ್ನತನವನು ಉಳಿಸಿಕೊಳ್ಳುವ
ಭರದಲಿ ಎಲ್ಲವನು ಮರೆತ ಉದ್ವೇಗಿ
ಆದರು ಉತ್ತರವಿಲ್ಲದ ಪ್ರಶ್ನೆ ಇಂದಿಗೂ ಇದೆ
ವಿಪರ್ಯಾಸವೆಂದರೆ ಆ ಪ್ರಶ್ನೆಏನೆಂಬುದು ಯಾರಿಗೂ ಗೊತ್ತಿಲ್ಲ...

No comments:

Post a Comment