Tuesday, October 16, 2012

ಕೆಲಸವಿಲ್ಲದ ಸುಬ್ಬ

ಮೊದಲಿರಲಿಲ್ಲ ಇವನ ಅರಿಯುವಿಕೆಗೆ
ಕೊನೆಯಿಲ್ಲ ಇವನ ಕೊರೆಯುವಿಕೆಗೆ
ಮೀಡಿಯಾ ಎಂಬ ರೇಸು ಕುದುರೆಯ ಬೆನ್ನಿಗೆ
ತನ್ನ ಅಮೂಲ್ಯವಾದ ಸಮಯವನ್ನೆಲ್ಲ ತೆತ್ತಿಬಿಟ್ಟಿದ್ದ
ತನಗೆ ತೋರಿಸಿದ್ದೆ ನಿಜ ಎಂಬ
ಮಾಯೆಯೊಳು ಬಂಧಿಯಾಗಿದ್ದ

ಸಭೆಯಿರಲಿ ಸಮಾರಂಭವಿರಲಿ
ಸಂತೆ ಹುಟ್ಟುತಿತ್ತು ಇವನ ಮಾತಲ್ಲೆ
ಬಿಕರಿಯಾಗುತಿತ್ತಲ್ಲಿ ಮೀಡಿಯಾದ ಸರಕುಗಳು
ಅವರವರ ಭಾವದ ಅನುಭವದ ಹಾಗೆ
ಸತ್ಯಾಸತ್ಯತೆಯ ವ್ಯತ್ಯಾಸ ತಿಳಿದಿಲ್ಲ
ಒಳ ಹೊರಗಳ ಮರ್ಮ ಅರಿತಿಲ್ಲ
ಒದರುತಿದ್ದ ಅಲ್ಲೆಲ್ಲ ತಾ ನೋಡಿದ ವಿಷಯಗಳ
ಗಟ್ಟು ಹೊಡೆದ ಪುಟ್ಟ ಮಗುವಂತೆ

ಟಿವಿ ೯ ಇವನಿಗೆ ರಾಜಕೀಯದ ಮೇಷ್ಟ್ರು
ಸುವರ್ಣ ನ್ಯೂಸ್ ಆಧ್ಯಾತ್ಮದ ಅವತಾರ
ಕಸ್ತೂರಿ ಇವನಿಗೆ ಕಷ್ಟಗಳ ಪರಿಹಾರಿ
ಜನಶ್ರೀ ಜನಗಳ ತಿಳುವಳಿಕೆಗೆ ದಾರಿ
ಪಬ್ಲಿಕ್ಕು ತಂದೆಂದು ನಂಬಿರುವ ಮೂಢ
ಹೊರಬಂದು ಅರಿಬೇಕು ಬಹಳಷ್ಟು ಗಾಢ
ನಮ್ಮ ನಡುವೆಯೇ ಇರುವರು ಇಂತವ್ರು ಬಹಳ
ಅವರ ಕೈಗೆ ಸಿಕ್ಕರೆ ಆಗಿಬಿಡಿ ವಿರಳ
ಸುಮ್ನೆ ತಮಾಷೆಗೆ ಪವನ್ ಪಾರುಪತ್ತೇದಾರ :-

picture courtecy : indologygoa.wordpress.com

No comments:

Post a Comment