Monday, April 9, 2012

ಆಸ್ಪತ್ರೆ

ಅದೊಂದು ಮೂಲೆಯಿಂದ ಗೂರಲಿನ ಶಬ್ಧ
ಯಾವಾಗ ತೇಲಿಹೋಗುತ್ತೋ ಆ ಬಡಪಾಯಿ ಜೀವ
ಶಕ್ತಿಯಿತ್ತೊ ಇಲ್ಲವೋ ತಿಳಿಯದು
ಅಗಾಧವಾದ ನೋವದು ಮೂಡುತಿತ್ತು
ಗೂರಲಿನ ಶಬ್ಧದಿಂದಲೇ

 ಸೂಜಿಗಳಿಗಲ್ಲಿ ತಿವಿಯುವುದಷ್ಟೇ ಕೆಲಸ
ರಕ್ತಚಿಮ್ಮುವಾಗೆಲ್ಲ ಹೊಸ ಹೊಸ ನರಚ್ಛೇದ
ಕೆಂಪು ಬಣ್ಣದ ಹತ್ತಿಯುಂಡೆ ಎಲ್ಲ ಬುಟ್ಟಿಯಲ್ಲು
ರಕ್ತ ನೆಕ್ಕುವುದಷ್ಟೇ ಹತ್ತಿಯ ಕೆಲಸ

ನೋವು ಚೀತ್ಕಾರಗಳು ಆಗಾಗ ಮಾಮೂಲು
ಕಣ್ಣೀರು ಹರಿದಿದೆ ಎಲ್ಲೆಲ್ಲೂ
ಹಣವಿದ್ದರೂ ಇಲ್ಲಿ ಬಡವರೇ ಎಲ್ಲ
ಕಿರುಚಿದಾಗೆಲ್ಲ ಹರಿಯುವುದು ಗಂಟಲೇ
ಉಸಿರಿಗಿಲ್ಲಿ ಬೆಲೆ ಒಂದೇ
ಹಣವಣ್ತನುಸಿರು ಬಂಗಾರವಲ್ಲ
ಬಡವನಾ ಉಸಿರು ಕಬ್ಬಿಣವೇನಲ್ಲ

ಪವನ್ ಪಾರುಪತ್ತೇದಾರ :-

No comments:

Post a Comment