Monday, April 9, 2012

ಉಗಾದಿಯ ಜೂಜಾಟ

ಕಳೆಬಂದಿತ್ತು ಹಳ್ಳಿಯ ತೋಪಿಗೆ
ಯುಗಾದಿಯ ಜೂಜು ಹುರುಪು ತಂದಿತ್ತು
ಊರ ಯುವಕರ ಜೊತೆಗೊಬ್ಬ ಸಂಸಾರಿ
ಆಡ ಆಡುತಲೆ ಕಳೆದ ಬದುಕಿನ ಬೆಲೆಯ

ಮರದಡಿಯೆ ಮುದುಡಿದೆ ಸಂಸಾರಿ ಸಂಸಾರ
ಮಾಂಸದ ಹಣ ಕೂಡ ಜೂಜು ಪಾಲಾಯ್ತಲ್ಲ
ಹೊಸಬಟ್ಟೆ ಆಸೆಯಲಿ ಕಾದಿಹರು ಮಕ್ಕಳು
ಉಟ್ಟಬಟ್ಟೆಯೂ ಇಲ್ಲಿ ಕಳೆದುಕೊಂಡಿಹೆಯಲ್ಲ

ಮುಂಜಾನೆ ಹರಳೆಣ್ಣೆ ಮೈಯಲ್ಲ ತಿಕ್ಕುತ್ತ
ದೇಗುಲಕೆ ಹೋಗೋಣ ಎಂದಿದ್ದ ಹೆಂಡತಿಗೆ
ನಿನ್ನದೇ ಬರುವಿಕೆಗೆ ಕಾಯುತಿಯ ಅಮ್ಮನಿಗೆ
ಏನೆಂದು ಉತ್ತರವ ನೀಡುವೆಯೋ ಗೆಳೆಯ

ಮರದಡಿಯ ಆಟದ ಮರ್ಮವ ತಿಳಿಸುವೆಯ
ಮಕ್ಕಳಿಗು ಜೂಜಿನ ಪಾಲನ್ನು ನೀಡುವೆಯ
ಅಡಮಾನ ಇಡಲಲ್ಲಿ ಇನ್ನೇನು ಉಳಿದಿಲ್ಲ
ಮಾನವನೆ ಅಡಮಾನ ಇಟ್ಟು ಬರುವೆಯಾ??

ಉಗಾದಿಯಂದು ಜೂಜಾಡುತಿದ್ದ ಕೆಲವು ಅಡ್ಡೆಗಳ ತಿರುಗಿ ಬಂದೆ, ಕಳೆದುಕೊಂಡವರೆಷ್ಟೋ :(

ಪವನ್ ಪಾರುಪತ್ತೇದಾರ:-

No comments:

Post a Comment