Monday, January 9, 2012

ಬದುಕಿನ ರಂಗಮಂಚ


ನೋಡದಿರಲಿ ಯಾರು,
ಮುಖವೆಲ್ಲ ಕಪ್ಪು ಮಚ್ಚೆ
ಅಲ್ಲಲ್ಲಿ ತರಚಿದ ಗಾಯ
ಅಜ್ಞಾನದ ಅತಿರೇಕ
ಹುಚ್ಚೆದ್ದು ಕುಣಿಯಲು ಹೋಗಿ
ಬಿದ್ದ ಮೇಲಿನ ಸೂತಕ

ಕುಣಿದಿದ್ದು ಸಭೆಯಲೇ ಆದರು
ರಂಗ ಮಂಚದಲಲ್ಲ
ಬದುಕಿನ ಪುಸ್ತಕದ ಮೇಲೆ
ಪ್ರೇಕ್ಷಕರು ಕೋಟಿ ಜನ
ಎಲ್ಲರು ಹೇಳಿದರು ತಪ್ಪು ನಿನದೆಂದು
ಒಂದಷ್ಟು ಮೂಢರು
ನಿನ್ನ ಬೆಳವಣಿಗೆ ಸಹಿಸದೆ
ಬದುಕಿನ ಬೆಂಕಿಗೆ ತುಪ್ಪವನ್ನು ಹೊಯ್ದರು

ನಿನ್ನ ಬುದ್ದಿಯು ಆಗ ಲದ್ದಿ ತಿಂತಿತ್ತೆ
ಒಮ್ಮೆ ನೀ ಅರಿತವರ ನಂಬಬೇಕಿತ್ತೆ
ಮುದ್ದಿನ ಮುಖದಲೀಗ ಕಪ್ಪಗಿನ ಮಚ್ಚೆಗಳು
ಬದುಕ ಪುಟಗಳು ಈಗ ಹರಿದ ಹಾಳೆಗಳು
ಒತ್ತಾಸೆಯಾಗಿದ್ದ ಜನರು ಈಗಿಲ್ಲ
ಮೂಢರ ಸಂತೆಗೆ ನೀನೀಗ ಬೇಕಿಲ್ಲ
ತಿಳಿದಿಕೋ ಜಗವನು
ಕುಣಿಯುವ ಜಾಗವನು

ತಪ್ಪು ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಪವನ್ :-

No comments:

Post a Comment