Friday, April 5, 2013

ರವಿ ಅಣ್ಣನ ನೆನಪಿಗಾಗಿ

ಹೇಳದೇ ಅಸ್ತಮಿಸಿದ ಮೂರ್ನಾಡಿನ ಸೂರ್ಯ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ಬಡತನದ ಬಾಧೆಗೆ ಮುಲಾಮು ಹುಡುಕುತ
ತನ್ನವರ ಜೀವನಕೆ ಬೆಳಕನ್ನು ತರಲು
ಕೂತಿದ್ದ ಅಷ್ಟೆ ದೂರದ ಕ್ಯಾಮೊರಾನಿನಲ್ಲಿ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ಬೆಳಕಾಗಿದ್ದ ಆ ಸೂರ್ಯ ಹಲವಾರು ಕವಿಗಳಿಗೆ
ತನ್ನ ಪ್ರಖರ ಸಾಹಿತ್ಯದ ಶಾಖದ ಪಾಲನ್ನು ನೀಡಿ
ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಮೆರುಗು ನೀಡಿ
ಸರಿ ತಪ್ಪುಗಳನು ತಿದ್ದುವ ಗುರುವಾಗಿದ್ದ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ದೂರ ಇದ್ದಕ್ಕೆ ಅವಮಾನ ಬಹಳಷ್ಟು ಸಹಿಸಿದ್ದ
ಒರಟು ನಾಲಿಗೆಗಳಿಗೆ ಆಹಾರವಾಗಿದ್ದ
ಯಾರಿಗೂ ಹೇಳದೆ ಕೊಡುಗೆ ಕೊಡುತಿದ್ದ
ಬರಹಗಾರರ ಬೆಳೆಸುತ ಸಾಹಿತ್ಯ ಸೇವೆಗೆ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಪವನ್ ಪಾರುಪತ್ತೇದಾರ..

No comments:

Post a Comment